ಕರ್ನಾಟಕ

karnataka

ನಾಸಾ ಮಂಗಳಯಾನದ ಹಿಂದಿದೆ ಕನ್ನಡತಿ ಸ್ವಾತಿ ಮೋಹನ್ ಪರಿಶ್ರಮ..

By

Published : Feb 23, 2021, 7:34 PM IST

Updated : Feb 23, 2021, 8:01 PM IST

ಇವರು 16ನೇ ವಯಸ್ಸಿನವರೆಗೂ ಶಿಶುವೈದ್ಯೆ ಆಗಬೇಕೆಂದುಕೊಂಡಿದ್ದರು. ಆದ್ರೆ, ಭೌತಶಾಸ್ತ್ರ ತರಗತಿಯಲ್ಲಿ ಅದ್ಭುತ ಶಿಕ್ಷಕರ ಪ್ರೇರಣೆಯಿಂದ ಬಾಹ್ಯಾಕಾಶದಲ್ಲಿ ಸಾಧನೆ ಮಾಡಲು ಎಂಜಿನಿಯರಿಂಗ್ ಒಂದೇ ಮಾರ್ಗ ಎಂದು ಅರಿತು, ತಮ್ಮ ಗುರಿ ಬದಲಿಸಿದ್ದರು..

Meet the Indian-American scientist behind Perseverance rover
ಸ್ವಾತಿ ಮೋಹನ್

ಕ್ಯಾಲಿಫೋರ್ನಿಯಾ :ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪರ್ಸೀವರೆನ್ಸ್ ರೋವರ್‌ ನೌಕೆ ಫೆ.18ರಂದು ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಅಲ್ಲಿನ ಮೇಲ್ಮೈ ಕಲ್ಲುಗಳ ಮಾದರಿ ಕಳುಹಿಸಲಿದ್ದು, ಮಂಗಳನಲ್ಲಿ ಜೀವ ಅಸ್ತಿತ್ವದಲ್ಲಿತ್ತೆ ಎಂಬುದರ ಕುರಿತು ಹೆಚ್ಚಿನ ಅನ್ವೇಷಣೆ ನಡೆಸಲಿದೆ.

ಆದರೆ, ರೋವರ್‌ನ ಮಂಗಳನ ಅಂಗಳಕ್ಕೆ ಇಳಿಸಲು ಶ್ರಮಿಸಿದ ವಿಜ್ಞಾನಿಗಳಲ್ಲಿ ಭಾರತೀಯ ಮೂಲದವರು ಎಂಬುದು ಕೀರ್ತಿಯ ವಿಷಾರವಾದರೆ, ಅದರಲ್ಲೂ ಮಿಷನ್ ಮಂಗಳ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ವಾತಿ ಮೋಹನ್ ಮೂಲತಃ ಕರ್ನಾಟಕದವರಾಗಿದ್ದಾರೆ.

ನಾಸಾ ಮಂಗಳಯಾನದ ಹಿಂದಿದೆ ಕನ್ನಡತಿ ಸ್ವಾತಿ ಮೋಹನ್ ಪರಿಶ್ರಮ

ಮಂಗಳ ಕಾರ್ಯಾಚರಣೆಗೆ ಮಾರ್ಗದರ್ಶನ ಮತ್ತು ನಿಯಂತ್ರಣ ತಂಡವನ್ನು ಕನ್ನಡತಿ ಬೆಂಗಳೂರು ಮೂಲದ ಸ್ವಾತಿ ಮೋಹನ್ ಲೀಡ್ ಮಾಡಿದ್ದಾರೆ. ತಮ್ಮ 9ನೇ ವಯಸ್ಸಿನಲ್ಲಿ 'ಸ್ಟಾರ್ ಟ್ರೆಕ್' ಟಿವಿ ಸಿರೀಸ್ ನೋಡಿ ವಿಶ್ವದ ಹೊಸ ಹಾಗೂ ಸುಂದರ ಪ್ರದೇಶಗಳನ್ನು ನೋಡಿ ಆಶ್ಚರ್ಯಗೊಂಡಿದ್ದರು. ಬಳಿಕ ಬ್ರಹ್ಮಾಂಡದಲ್ಲಿರುವ ಹೊಸ ಹಾಗೂ ಇನ್ನಷ್ಟು ಸುಂದರ ತಾಣಗಳನ್ನು ಪತ್ತೆ ಹಚ್ಚಲು ಆಸೆ ಪಟ್ಟಿದ್ದರು.

ಇವರು 16ನೇ ವಯಸ್ಸಿನವರೆಗೂ ಶಿಶುವೈದ್ಯೆ ಆಗಬೇಕೆಂದುಕೊಂಡಿದ್ದರು. ಆದ್ರೆ, ಭೌತಶಾಸ್ತ್ರ ತರಗತಿಯಲ್ಲಿ ಅದ್ಭುತ ಶಿಕ್ಷಕರ ಪ್ರೇರಣೆಯಿಂದ ಬಾಹ್ಯಾಕಾಶದಲ್ಲಿ ಸಾಧನೆ ಮಾಡಲು ಎಂಜಿನಿಯರಿಂಗ್ ಒಂದೇ ಮಾರ್ಗ ಎಂದು ಅರಿತು, ತಮ್ಮ ಗುರಿ ಬದಲಿಸಿದ್ದರು.

ನಂತರ ಕಾರ್ನೆಲ್ ವಿವಿಯಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಬ್ಯಾಚ್ಯುಲರ್ ಪದವಿ ಪಡೆದು ಎಂಐಟಿಯಲ್ಲಿ ಆಸ್ಟ್ಟೋನಾಟಿಕ್ಸ್​ನಲ್ಲಿ ಎಂಎಸ್​ ಮತ್ತು ಪಿಹೆಚ್​ಡಿ ಪದವಿ ಗಳಿಸಿದರು. ಆ ಬಳಿಕ ನಾಸಾ ಸೇರಿದ ಡಾ. ಸ್ವಾತಿ ಮೋಹನ್​​ ಅವರು ಪರ್ಸೆವೆರೆನ್ಸ್ ರೋವರ್ ಯೋಜನೆಯ ಜೊತೆ ನಾಸಾದ ವಿವಿಧ ಮಹತ್ವದ ಯೋಜನೆಗಳಲ್ಲೂ ಭಾಗಿಯಾಗಿದ್ದಾರೆ.

ಇದನ್ನೂ ಓದಿ:ಮಂಗಳನ ಮೇಲೆ ರೋವರ್​ ಲ್ಯಾಂಡಿಂಗ್ - ನಾಸಾದಿಂದ ವಿಡಿಯೋ ರಿಲೀಸ್​

Last Updated : Feb 23, 2021, 8:01 PM IST

ABOUT THE AUTHOR

...view details