ಕರ್ನಾಟಕ

karnataka

ಮಧ್ಯಪ್ರಾಚ್ಯ ಪರಿಸ್ಥಿತಿ ಶಾಂತಗೊಳಿಸಲು ಯುಎನ್‌ನ ಖಾಯಂ ಪ್ರತಿನಿಧಿ ತಿರುಮೂರ್ತಿ ಒತ್ತಾಯ

By

Published : May 17, 2021, 2:29 PM IST

ಪರಿಸ್ಥಿತಿಯನ್ನು ಶಾಂತಗೊಳಿಸಲು ಮತ್ತು ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸಲು ಅಂತಾರಾಷ್ಟ್ರೀಯ ಸಮುದಾಯದ ಇತರ ಸದಸ್ಯರ ಪ್ರಯತ್ನಗಳಿಗೆ ಭಾರತ ಬೆಂಬಲ ವ್ಯಕ್ತಪಡಿಸಿತು..

India
ಯುಎನ್‌ನ ಖಾಯಂ ಪ್ರತಿನಿಧಿ ತಿರುಮೂರ್ತಿ

ವಾಷಿಂಗ್ಟನ್ ​:ಯುಎನ್‌ನ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಟಿ.ಎಸ್.ತಿರುಮೂರ್ತಿ ಅವರು ‘ಮಧ್ಯಪ್ರಾಚ್ಯದ ಪರಿಸ್ಥಿತಿ’ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚರ್ಚೆಯಲ್ಲಿ ಸಮತೋಲನಗೊಳಿಸುವ ಹೇಳಿಕೆ ನೀಡಿದ್ದಾರೆ.

ಎರಡು ರಾಷ್ಟ್ರಗಳ ಸಮಸ್ಯೆ ಪರಿಹಾರಕ್ಕಾಗಿ ಭಾರತವು ಎದುರು ನೋಡುತ್ತಿದೆ. ಗಾಜಾದ ರಾಕೆಟ್ ಗುಂಡಿನ ದಾಳಿಯನ್ನು ಖಂಡಿಸಿದ್ದು, ಇಸ್ರೇಲಿ ಸ್ಟ್ರೈಕ್‌ಗಳನ್ನು ಪ್ರತೀಕಾರದ ದಾಳಿ ಎಂದು ಕರೆದಿದೆ.

ರಾಯಭಾರಿ ತಿರುಮೂರ್ತಿ ತಮ್ಮ ಭಾಷಣದ ಆರಂಭದಲ್ಲಿ, ಇಸ್ರೇಲ್‌ನ ಅಶ್ಕೆಲೋನ್‌ನಲ್ಲಿನ ರಾಕೆಟ್ ಫೈರ್‌ನಲ್ಲಿ ಭಾರತೀಯ ಸೌಮ್ಯ ಸಂತೋಷ್ ಅವರ ಸಾವಿನ ಕುರಿತು ಮಾತನಾಡಿದರು. ಈ ಬಳಿಕ ಹಿಂಸಾಚಾರದಿಂದ ಉಂಟಾದ ಅಪಾರ ನಷ್ಟದ ಬಗ್ಗೆ ತಿಳಿಸಿದರು.

ಕಳೆದ ಹಲವಾರು ದಿನಗಳ ಘಟನೆಗಳು ಭದ್ರತಾ ಪರಿಸ್ಥಿತಿಯ ತೀವ್ರ ಕುಸಿತಕ್ಕೆ ಕಾರಣವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ, ಪ್ರಚೋದನೆ ಮತ್ತು ವಿನಾಶದ ಬಗ್ಗೆ ಭಾರತದ ರಾಯಭಾರಿ ತೀವ್ರ ಖಂಡನೆ ವ್ಯಕ್ತಪಡಿಸಿದರು. ಎರಡೂ ರಾಷ್ಟ್ರಗಳು ಉಂಟಾಗಿರುವ ಸಂಘರ್ಷವನ್ನು ಶಮನ ಮಾಡಲು ಯತ್ನಿಸಬೇಕು ಎಂದು ಹೇಳಿ ನೀಡಿದ್ದಾರೆ.

"ಪೂರ್ವ ಜೆರುಸಲೇಂ ಮತ್ತು ಅದರ ನೆರೆಹೊರೆ ಸೇರಿದಂತೆ ತೀವ್ರ ಸಂಯಮವನ್ನು ತೋರಿಸಲು, ಉದ್ವಿಗ್ನತೆಯನ್ನು ಉಲ್ಬಣಗೊಳಿಸುವ ಕ್ರಮಗಳಿಂದ ದೂರವಿರಲು ಮತ್ತು ಅಸ್ತಿತ್ವದಲ್ಲಿರುವ ಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಪ್ರಯತ್ನಗಳಿಂದ ದೂರವಿರಲು ನಾವು ಎರಡೂ ಕಡೆಯವರನ್ನು ಒತ್ತಾಯಿಸುತ್ತೇವೆ" ಅವರು ಹೇಳಿದರು.

ಪರಿಸ್ಥಿತಿಯನ್ನು ಶಾಂತಗೊಳಿಸಲು ಮತ್ತು ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸಲು ಅಂತಾರಾಷ್ಟ್ರೀಯ ಸಮುದಾಯದ ಇತರ ಸದಸ್ಯರ ಪ್ರಯತ್ನಗಳಿಗೆ ಭಾರತ ಬೆಂಬಲ ವ್ಯಕ್ತಪಡಿಸಿತು.

ABOUT THE AUTHOR

...view details