ಕರ್ನಾಟಕ

karnataka

By

Published : May 20, 2021, 10:14 PM IST

ETV Bharat / headlines

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪುನಾರಂಭ, ಆದ್ಯತೆ ಗುಂಪುಗಳಿಗೆ ಮೊದಲು ಲಸಿಕೆ

ಆದ್ಯತೆ ಗುಂಪುಗಳನ್ನು ಗುರುತಿಸಿ ಲಸಿಕೆ ಪುನಾರಂಭಗೊಳಿಸುವ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಆದೇಶ ಹೊರಡಿಸಿದ್ದು, 18 ರಿಂದ 44 ವರ್ಷ ವಯಸ್ಸಿನವರು ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ.

Vaccination restarted for those over 18 years of age
Vaccination restarted for those over 18 years of age

ಬೆಂಗಳೂರು: 18 ರಿಂದ 44 ವರ್ಷ ವಯಸ್ಸಿನವರಿಗೆ ಆದ್ಯತೆ ಗುಂಪುಗಳನ್ನು ಗುರುತಿಸಿ ಲಸಿಕೆ ಪುನರಾರಂಭಗೊಳಿಸುವ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಆದೇಶ ಹೊರಡಿಸಿದೆ.

ಆದ್ಯತೆ ಗುಂಪುಗಳು:
18-44 ವರ್ಷ ವಯಸ್ಸಿನ ಫಲಾನುಭವಿಗಳಿಗೆ ಮೇ 22 ರಿಂದ ಲಸಿಕೆ ಪ್ರಾರಂಭ
- ರಾಜ್ಯ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ
- ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆದ್ಯತೆ ಗುಂಪುಗಳ ಪಟ್ಟಿ ಅಂತಿಮಗೊಳಿಸಲು ಸೂಚನೆ ನೀಡಲಾಗಿದೆ.

ರಾಜ್ಯ ಕೊರೊನಾ ಮುಂಚೂಣಿ ಕಾರ್ಯಕರ್ತರು

- ಅಂಗವೈಕಲ್ಯ ಹೊಂದಿರುವವರು
- ಖೈದಿಗಳು
- ಚಿತಾಗಾರ ಸಿಬ್ಬಂದಿ
- ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು
- ಕೋವಿಡ್ ಕೆಲಸಕ್ಕೆ ನಿಯೋಜಿಸಿದ ಶಿಕ್ಷಕರು
- ಸರ್ಕಾರಿ ಸಾರಿಗೆ ಸಿಬ್ಬಂದಿ
- ಆಟೋ ಮತ್ತು ಕ್ಯಾಬ್ ಚಾಲಕರು
- ವಿದ್ಯುತ್- ನೀರು ಸರಬರಾಜು ಮಾಡುವವರು
- ಅಂಚೆ ಇಲಾಖೆ ಸಿಬ್ಬಂದಿ
- ಬೀದಿ ಬದಿ ವ್ಯಾಪಾರಿ
- ಭದ್ರತೆ ಹಾಗೂ ಹೌಸ್ ಕೀಪಿಂಗ್ ಸಿಬ್ಬಂದಿಗಳು
- ನ್ಯಾಯಾಂಗ ಅಧಿಕಾರಿಗಳು
- ವಯೋವೃದ್ಧರ ಆರೈಕೆದಾರರು
- ಮಕ್ಕಳ ಸಂರಕ್ಷಣಾಧಿಕಾರಿಗಳು
- ಮಾಧ್ಯಮದವರು
- ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು
- ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು
- ಭಾರತೀಯ ಆಹಾರ ನಿಗಮ ಸಿಬ್ಬಂದಿ
- ಎಪಿಎಂಸಿ ಕೆಲಸಗಾರರು
- ವೃದ್ಧಾಶ್ರಮ ವಾಸಿ, ನಿರ್ಗತಿಕರು


ಆದ್ಯತೆ ಗುಂಪುಗಳು
- ಕಟ್ಟಡ ಕಾರ್ಮಿಕರು
- ಟೆಲಿಕಾಂ ಮತ್ತು ಇಂಟರ್ ನೆಟ್ ಸೇವಾದಾರರು
- ವಿಮಾನಯಾನ ಸಂಸ್ಥೆ ಸಿಬ್ಬಂದಿಗಳು
- ಬ್ಯಾಂಕ್ ಸಿಬ್ಬಂದಿ
- ಪೆಟ್ರೋಲ್ ಬಂಕ್ ಕೆಲಸಗಾರರು
- ಚಿತ್ರೋದ್ಯಮ ಸಿಬ್ಬಂದಿಗಳು, ಕಾರ್ಯಕರ್ತರು, ಉದ್ಯಮಿಗಳು
- ಅಡ್ವೋಕೇಟ್ ಗಳು
- ಹೋಟೇಲ್ ಸೇವಾದಾರರು
- ಕೆ.ಎಂ.ಎಫ್ ಸಿಬ್ಬಂದಿಗಳು
- ರೈಲ್ವೆ ಸಿಬ್ಬಂದಿಗಳು
- ಗಾರ್ಮೆಂಟ್ ಕಾರ್ಖಾನೆ ಸಿಬ್ಬಂದಿಗಳು
- ಅರಣ್ಯ ಇಲಾಖೆ‌ ಸಿಬ್ಬಂದಿಗಳು
- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿಬ್ಬಂದಿ
- ಗೈಲ್ ಸಿಬ್ಬಂದಿ
- RSK ಕೆಲಸಗಾರರು
- ರಾಜ್ಯ- ರಾಷ್ಟ್ರ ಮಟ್ಟದ ಆಟಗಾರರು
- ಸ್ವಧಾರ್ ಗೃಹ ವಾಸಿಗಳುಣ ರಾಜ್ಯ ಮಹಿಳಾ ನಿಲಯವಾಸಿಗಳು,
- ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ಸಿಬ್ಬಂದಿಗಳು


ಅನುಷ್ಠಾನಾಧಿಕಾರಿಗಳ ಜವಾಬ್ದಾರಿಗಳು
- ಪ್ರತಿ ಆದ್ಯತೆ ಗುಂಪಿನ ಲಸಿಕಾಕರಣಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು
- ಆಯಾ ಗುಂಪಿನ ನೋಡಲ್ ಅಧಿಕಾರಿಗಳು ಫಲಾನುಭವಿಗಳಿಗೆ ಅರ್ಹತಾ ಪ್ರಮಾಣ ಪತ್ರ, ಲಸಿಕೆ ಪಡೆಯುವ ದಿನಾಂಕ, ಸ್ಥಳ, ಸಮಯ ನಿಗದಿ ಮಾಡುವುದು
- ಲಸಿಕೆ ನೀಡಿದ ದೈನಂದಿನ ಮಾಹಿತಿ ನೀಡಬೇಕು

ಕೋವಿಡ್ -19 ಲಸಿಕಾಕರಣದ ಅನುಷ್ಠಾನ
- ರಾಜ್ಯ ಸರ್ಕಾರ 18- 44 ಫಲಾನುಭವಿಗಳಿಗಾಗಿ ಖರೀದಿಸಿದ ಲಸಿಕೆಯನ್ನೇ ಬಳಸಿಕೊಳ್ಳುವುದು, ಇದರ ಲಭ್ಯತೆ ಖಾತರಿಪಡಿಸಿಕೊಳ್ಳುವುದು
- ಲಭ್ಯ ಇರುವ ಲಸಿಕೆ, ಮಾನವ ಸಂಪನ್ಮೂಲ, ಅರ್ಹ ಫಲಾನುಭವಿಗಳ ಸಂಖ್ಯೆ ಆಧರಿಸಿ ಕ್ರಿಯಾ ಯೋಜನೆ ತಯಾರಿಸಿ ಪ್ರತಿ ದಿನದ ಮಾಹಿತಿ ನೀಡಲು ತಿಳಿಸಲಾಗಿದೆ.

ABOUT THE AUTHOR

...view details