ಕರ್ನಾಟಕ

karnataka

By

Published : Jul 19, 2019, 6:44 AM IST

Updated : Jul 19, 2019, 6:51 AM IST

ETV Bharat / headlines

ನೇಪಾಳದಲ್ಲಿ ವರುಣನ ರೌದ್ರಾವತಾರ: 90ಕ್ಕೆ ಏರಿದ ಸಾವಿನ ಸಂಖ್ಯೆ

ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹದ ಹಾಗೂ ಭೂ ಕುಸಿತ ಉಂಟಾಗಿದ್ದು, 90 ಮಂದಿಯನ್ನು ಈ ಮಹಾಮಳೆ ಬಲಿಪಡೆದುಕೊಂಡಿದೆ.

ನೇಪಾಳದಲ್ಲಿ ವರುಣನ ರೌದ್ರಾವತಾರ: 90ಕ್ಕೆ ಏರಿದ ಸಾವಿನ ಸಂಖ್ಯೆ

ಜನಕ್‌ಪುರ(ನೇಪಾಳ):ನೇಪಾಳದಲ್ಲಿ ಉಂಟಾಗಿರುವ ಪ್ರವಾಹದ ಹಾಗೂ ಭೂ ಕುಸಿತದಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 90 ಕ್ಕೆ ತಲುಪಿದ್ದು, 29 ಜನರು ನಾಪತ್ತೆಯಾಗಿದ್ದಾರೆ.

ಭಾರಿ ವರ್ಷಧಾರೆಯ ಪರಿಣಾಮ ಹಲವು ಗ್ರಾಮಗಳು ಸಂಪೂರ್ಣ ಜಲಾವೃತವಾಗಿದೆ. ಇನ್ನು ಈ ಕುರಿತು ಮಾಹಿತಿ ನೀಡಿರುವ ನೇಪಾಳ ಗೃಹ ಸಚಿವಾಲಯ ಈವರೆಗೆ 90 ಮಂದಿ ಸಾವಿಗೀಡಾಗಿದ್ದು, 29 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ತಿಳಿಸಿದೆ.

ರಾಷ್ಟ್ರಾದ್ಯಂತ 3,366 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಪರಿಹಾರ ವಿತರಣೆ ಮತ್ತು ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ನೇಪಾಳದ ಪ್ರವಾಹ ಭಾರತಕ್ಕೂ ತಟ್ಟಿದ್ದು, ಬಿಹಾರದಲ್ಲೂ ನೆರೆ ಪರಿಸ್ಥಿತಿ ಉಂಟಾಗಿದೆ.

Last Updated : Jul 19, 2019, 6:51 AM IST

For All Latest Updates

TAGGED:

Nepal

ABOUT THE AUTHOR

...view details