ಕರ್ನಾಟಕ

karnataka

By

Published : Jun 3, 2022, 6:57 AM IST

Updated : Jun 3, 2022, 2:43 PM IST

ETV Bharat / entertainment

ಕನ್ನಡದ ಹಿರಿಯ ನಟ ಉದಯ್ ಹುತ್ತಿನಗದ್ದೆ ವಿಧಿವಶ

ಕನ್ನಡದ ಹಿರಿಯ ನಟ ಉದಯ್ ಹುತ್ತಿನಗದ್ದೆ ಇಹಲೋಕ ತ್ಯಜಿಸಿದ್ದಾರೆ. 1987ರಲ್ಲಿ ಡಾ.ರಾಜ್ ಕುಮಾರ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ದೇವತಾ ಮನುಷ್ಯ ಸೇರಿ ಹಲವು ಚಿತ್ರದಲ್ಲಿ ಇವರು ನಟಿಸಿದ್ದರು..

veteran actor Uday Huttinagadde
ನಟ ಉದಯ್ ಹುತ್ತಿನಗದ್ದೆ

ಕನ್ನಡದಲ್ಲಿ ನಟನಾಗಿ ಹಾಗೂ ಪೋಷಕ ಪಾತ್ರಗಳಿಂದ ಗಮನ ಸೆಳೆದಿದ್ದ ನಟ ಉದಯ್ ಹುತ್ತಿನಗದ್ದೆ ನಿನ್ನೆ (ಗುರುವಾರ) ಸಂಜೆ ನಿಧನರಾಗಿದ್ದಾರೆ‌. 1987ರಲ್ಲಿ ಆರಂಭ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಿದ್ದ ಇವರು, ಜಯಭೇರಿ, ಅಮೃತ ಬಿಂದು, ಕರ್ಮ, ಉಂಡುಹೋದ ಕೊಂಡಹೋದ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಆರಂಭ ಸಿನಿಮಾದಲ್ಲಿ ನಟ ಉದಯ್ ಹುತ್ತಿನಗದ್ದೆ

ಡಾ. ರಾಜ್ ಕುಮಾರ್ ಅಭಿನಯದ ದೇವತಾ ಮನುಷ್ಯ ಸಿನಿಮಾದಲ್ಲಿ ಸುಧಾರಾಣಿ ಜೋಡಿಯಾಗಿ ಉದಯ್ ಹುತ್ತಿನಗದ್ದೆ ನಟಿಸಿದರು. ಲಲಿತಾಂಜಲಿ ಎಂಬ ಕಿರುತೆರೆ ನಟಿಯನ್ನ ಮದುವೆಯಾದ ಇವರು, ಮಾಗಡಿ ರಸ್ತೆಯಲ್ಲಿ ವಾಸವಾಗಿದ್ದರು. ರಾಜಾಜಿನಗರದ ಬಾಷ್ಯಂ ಸರ್ಕಲ್‌ನಲ್ಲಿ ಉದಯ್ ಹುತ್ತಿನಗದ್ದೆ ಫೋಟೋಗ್ರಫಿ ಸ್ಟುಡಿಯೋ ನಡೆಸುತ್ತಿದ್ದರು. ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಹಿರಿಯ ನಟ ಉದಯ್ ಹುತ್ತಿನಗದ್ದೆ

ಇದನ್ನೂ ಓದಿ:ವಿಭಿನ್ನ ಪೋಸ್ಟರ್​ನಿಂದ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ರಿಯಲ್​ ಸ್ಟಾರ್​!

Last Updated : Jun 3, 2022, 2:43 PM IST

ABOUT THE AUTHOR

...view details