ಕರ್ನಾಟಕ

karnataka

ETV Bharat / entertainment

ಟ್ವೀಟ್ ವಾರ್​: ದಿ ಕೇರಳ ಸ್ಟೋರಿ ನಿಷೇಧ ಕುರಿತ ನವಾಜುದ್ದೀನ್ ಹೇಳಿಕೆಗೆ ಅಗ್ನಿಹೋತ್ರಿ ಪ್ರತಿರೋಧ..

ಸಂದರ್ಶನವೊಂದರಲ್ಲಿ ಇತ್ತೀಚೆಗೆ 'ದಿ ಕೇರಳ ಸ್ಟೋರಿ' ಚಿತ್ರದ ನಿಷೇಧದ ಕುರಿತಾಗಿ ಬಾಲಿವುಡ್​ ನಟ ನವಾಜುದ್ದೀನ್ ಸಿದ್ದಿಕಿ ಹೇಳಿದ್ದರು. ಇದನ್ನೂ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಟ್ವೀಟ್​​ನಲ್ಲಿ ತೀಕ್ಷ್ಣವಾಗಿ ಹೇಳಿಕೆ ಖಂಡಿಸಿ ಸಿದ್ದಕಿಗೆ ಪ್ರತಿರೋಧ ತೋರಿದ್ದರು. ನಂತರ ತಮ್ಮ ಟ್ವೀಟ್​ ಡಿಲೀಟ್​ ​​ ಮಾಡಿದ್ದರು.

By

Published : May 27, 2023, 7:09 PM IST

Famous director Vivek Agnihotri, actor Nawazuddin Siddiqui
ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ​ ನಟ ನವಾಜುದ್ದೀನ್ ಸಿದ್ದಿಕಿ

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್​​

ಹೈದರಾಬಾದ್: ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಟ್ವಿಟರ್‌ನಲ್ಲಿ ಸಕ್ರಿಯವಾಗಿ ಯಾರ ಮುಲಾಜೂ ಇಲ್ಲದೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್​ವೊಂದನ್ನು ಪೋಸ್ಟ್ ಮಾಡಿ, 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ನಟ ನವಾಜುದ್ದಿನ್ ಸಿದ್ದಿಕಿ ಅವರನ್ನು ಪ್ರಶ್ನೆ ಮಾಡಿದ್ದರು. ನಂತರ ಅದೇನ್​​ ಅನ್ನಿಸಿತೋ ಏನೋ ಆ ಟ್ವೀಟ್​ ಅನ್ನು ಡಿಲೀಟ್ ಮಾಡಿದ್ದರು.

ಸಂದರ್ಶನದಲ್ಲಿ ನವಾಜುದ್ದೀನ್​ ಸಿದ್ದಕಿ ಹೇಳಿದ್ದೇನು?:ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ 'ದಿ ಕೇರಳ ಸ್ಟೋರಿ' ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ನವಾಜುದ್ದಿನ್ ಸಿದ್ದಿಕಿ , ಒಂದು ಚಲನಚಿತ್ರವು 'ಯಾರನ್ನಾದರೂ ನೋಯಿಸಿದರೆ ಅದು ತಪ್ಪು ಮತ್ತು ಪ್ರೇಕ್ಷಕರಿಗೆ ಅಥವಾ ಅವರ ಭಾವನೆಗಳಿಗೆ ಧಕ್ಕೆ ತರುವ ಚಲನಚಿತ್ರಗಳನ್ನು ಮಾಡುವುದು ಸಮಂಜಸವಲ್ಲ, ಅಂಥ ಚಿತ್ರಗಳನ್ನು ಮಾಡುವುದು ತರವಲ್ಲ ಎಂದು ಹೇಳಿಕೊಂಡಿದ್ದರು.

ನವಾಜುದ್ದಿನ್ ಹೇಳಿಕೆಯನ್ನು ಖಂಡಿಸುವ ರೀತಿ ವಿವೇಕ್ ಆಗ್ನಿಹೋತ್ರಿ ಅವರು ತಮ್ಮ ಟೀಟ್​ದಲ್ಲಿ ಬರೆದುಕೊಂಡಿದ್ದರು.' ಬಹುತೇಕ ಭಾರತೀಯ ಮಧ್ಯಮ ವರ್ಗದ ಕುಟುಂಬಗಳು ಅನಗತ್ಯ ನಿಂದನೆ, ಹಿಂಸಾಚಾರದ ಸಂಬಂಧಿಸಿದ ಚಿತ್ರಗಳು OTT ಶೋಗಳಲ್ಲಿ ವಿಕೃತಿ ಅನುಭವಿಸುತ್ತವೆ, ಅವರ ಮಕ್ಕಳಿಗೆ ನೋವುಂಟು ಮಾಡುತ್ತವೆ… ನವಾಜ್ ಅವರ ಹೆಚ್ಚಿನ ಬಹುತೇಕ ಚಲನಚಿತ್ರಗಳು ಇಂತಹವುಗಳೇ ಹೆಚ್ಚು, OTT ಯಲ್ಲಿ ಸಿದ್ದಕಿ ಚಿತ್ರದ ಪ್ರದರ್ಶನಗಳನ್ನು ನಿಷೇಧಿಸಬೇಕೇ? ನಿಮ್ಮ ಅಭಿಪ್ರಾಯಗಳೇನು?” ಎಂದು ಟ್ವೀಟ್ ಮಾಡಿದ್ದರು. ನಂತರ ಆ ಟ್ವೀಟ್​ ಅನ್ನು ಡಿಲಿಟ್​ ಮಾಡಿದ್ದರು.

ನಂತರ ಅದನ್ನು ವೀಕ್ಷಕರು ಸ್ಕ್ರೀನ್‌ಶಾಟ್​​ನಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆಗ ನವಾಜುದ್ದೀನ್ ಸಿದ್ದಿಕಿ ಅವರು 'ದಿ ಕೇರಳ ಸ್ಟೋರಿ' ಬ್ಯಾನ್ ಕುರಿತಾದ ಹೇಳಿಕೆಗಳು ವೈರಲ್ ಆಗಲು ಪ್ರಾರಂಭಿಸಿದ ತಕ್ಷಣ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಸಿನಿಮಾವನ್ನು ಬ್ಯಾನ್ ಮಾಡುವುದನ್ನು ನಾನು ಎಂದಿಗೂ ಬಯಸುವುದಿಲ್ಲ ಎಂದು ನವಾಜ್ ಕೂಡಾ ತಿಳಿಸಿದ್ದರು.

ನವಾಜುದ್ದೀನ್ ಸಿದ್ದಿಕಿ "ದಯವಿಟ್ಟು ಕೆಲವು ವೀಕ್ಷಣೆಗಳು ಮತ್ತು ಹಿಟ್‌ಗಳನ್ನು ಪಡೆಯಲು ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ, ಅದನ್ನು ಅಗ್ಗದ ಟಿಆರ್‌ಪಿ ಆಗುತ್ತದೆಂದು ಹೇಳಲು ಇಚ್ಛಿಸುವುದಿಲ್ಲ. ಯಾವುದೇ ಚಲನಚಿತ್ರವನ್ನು ಎಂದಿಗೂ ನಿಷೇಧಿಸಬೇಕೆಂದು ನಾನು ಎಂದಿಗೂ ಬಯಸುವುದಿಲ್ಲ. ಚಲನಚಿತ್ರಗಳನ್ನು ನಿಷೇಧಿಸುವುದನ್ನು ನಿಲ್ಲಿಸಿ. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ..! ಎಂದು ಟ್ವೀಟ್‌ನಲ್ಲಿ ಬರೆದು ಪ್ರದರ್ಶಿಸಿದ್ದಾರೆ.

ದಿ ಕೇರಳ ಸ್ಟೋರಿ ಯಶಸ್ವಿ ಪ್ರದರ್ಶನ:ದಿ ಕೇರಳ ಸ್ಟೋರಿ ಚಿತ್ರವೂ ಬಿಡುಗಡೆಗೊಂಡು 20 ದಿನ ಕಳೆದರೂ, ಇಂದಿಗೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಸಹಿತ 200 ಕೋಟಿ ರೂ ಗಳನ್ನು ಗಳಿಸಿ ಮುನ್ನಡೆಯುತ್ತಿದೆ. ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೆ ವಿರೋಧ, ವಿವಾದ ,ನಿಷೇಧದ ನಡುವೆಯೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

'ದಿ ಕಾಶ್ಮೀರ್​​ ಫೈಲ್ಸ್​ದಿಂದ ಅಗ್ನಿಹೋತ್ರಿ ಜನಪ್ರಿಯತೆ ಹೆಚ್ಚಳ:ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದ 'ದಿ ಕಾಶ್ಮೀರ್​​ ಫೈಲ್ಸ್​​' ಸಿನಿಮಾ ಮಾ.11ರಂದು ಬಿಡುಗಡೆಗೊಂಡು ದೇಶಾದ್ಯಂತ ಜನರ ಮೆಚ್ಚುಗೆ ಪಡೆಯಿತು.ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿ, ಅಪಾರ ಹಣ ಗಳಿಸುವುದಲ್ಲಿ ಯಶಸ್ವಿಯಾಯಿತು. ದಿ ಕಾಶ್ಮೀರ್​​ ಫೈಲ್ಸ್​​' ಸಿನಿಮಾ ನಿರ್ದೇಶನಕ್ಕೆ ಪಿಎಂ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದರು.

'ದಿ ಕಾಶ್ಮೀರ್​​ ಫೈಲ್ಸ್​​' ದಲ್ಲಿ 90ರ ದಶಕದಲ್ಲಿ ಕಾಶ್ಮೀರಿ ಪಂಡಿತರು ಎದುರಿಸಿದ ನೋವು, ಸಂಕಟ, ಹೋರಾಟ ಮತ್ತು ಆಘಾತದ ಕುರಿತ ಹೃದಯ ವಿದ್ರಾವಕ ಆಧಾರಿತ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿತ್ತು.ಆದರೆ ಸಿನಿಮಾ ರಿಲೀಸ್​ ಆದಾಗಿನಿಂದ ವಿಮರ್ಶಕರಿಂದ, ವೀಕ್ಷಕರಿಂದ ಸಾಕಷ್ಟು ಟೀಕೆಗಳು ಟಿಪ್ಪಣಿಗಳು ಕೇಳಿ ಬಂದಿದ್ದವು.

ಇದನ್ನೂಓದಿ:ಕೀರ್ತಿ ಮದುವೆಯಾಗುತ್ತಿಲ್ಲ.. ಅದು ಸುಳ್ಳು ಸುದ್ದಿ: ತಂದೆ, ಖ್ಯಾತ ನಿರ್ಮಾಪಕ ಸುರೇಶ್ ಕುಮಾರ್ ಸ್ಪಷ್ಟನೆ

ABOUT THE AUTHOR

...view details