ಕರ್ನಾಟಕ

karnataka

By

Published : Jun 14, 2022, 1:36 PM IST

ETV Bharat / entertainment

ಸುದೀಪ್‌ ಆತ್ಮೀಯ ಜಾಕ್ ಮಂಜು ಆಸ್ಪತ್ರೆಗೆ ದಾಖಲು!

ಬಜರಂಗಿ, ಅಂಬಿ ನಿಂಗ್ ವಯಸ್ಸಾಯ್ತೋ ಮತ್ತು ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಪಕ ಜಾಕ್ ಮುಂಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

Vikrant Rona film producer Jack Manju admitted to the hospital
ಚಿಕಿತ್ಸೆ ಪಡೆಯುತ್ತಿರುವ ಜಾಕ್​ ಮಂಜು

ನಿರ್ಮಾಪಕ ಜಾಕ್ ಮುಂಜುಗೆ ಹೃದಯ ಸಂಬಂಧಿ ಸಮಸ್ಯೆ ಉಂಟಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಚ್ಚ ಸುದೀಪ್ ಜೊತೆ ಹಲವು ವರ್ಷಗಳಿಂದ ಜೊತೆಗಿರುವ ಜಾಕ್ ಮಂಜು, ಬಹು ಕೋಟಿ ವೆಚ್ಚದ ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಕರೂ ಹೌದು. ಸದ್ಯ ಹೃದಯ ಸಂಬಂಧಿ ಸಮಸ್ಯೆ ಎದುರಿಸುತ್ತಿರುವ ಅವರು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.

ಸುದೀಪ್‌ ಜೊತೆ ಜಾಕ್ ಮಂಜು

ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮಕ್ಕಾಗಿ ಅತಿಥಿಯಾಗಿ ಹೋಗಿದ್ದ ಜಾಕ್​​ ಮಂಜು ಕಾಲಿಗೆ ಪೆಟ್ಟಾದ್ದರಿಂದ ಆಪರೇಷನ್​​ಗೆ ಒಳಗಾಗಿದ್ದರು‌. ಕಳೆದ 20 ದಿನದ ಹಿಂದೆ ಈ ಘಟನೆ ನಡೆದಿತ್ತು. ಕೊನೆಗೆ‌ ಕಾಲಿಗೆ ಚಿಕಿತ್ಸೆ ಪಡೆಯುತ್ತಿದ್ರು. ಆದರೆ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಊತ ಬಂದಿತ್ತು. ಇದಲ್ಲದೇ ಹೃದಯ ಸಂಬಂಧಿ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಜಾಕ್ ಮಂಜು ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಆಸ್ಪತ್ರೆಯ ವೈದರು ತಿಳಿಸಿದ್ದಾರೆ.

ಸುದೀಪ್‌ ಜೊತೆ ಜಾಕ್ ಮಂಜು

ಸದ್ಯ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾವನ್ನ ಅದ್ಧೂರಿ ವೆಚ್ಚದಲ್ಲಿ ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಟೀಸರ್ ಹಾಗೂ ಹಾಡುಗಳಿಂದ ಸೆನ್ಸಷನ್ ಕ್ರಿಯೇಟ್ ಮಾಡಿರೋ ವಿಕ್ರಾಂತ್ ರೋಣ ಸಿನಿಮಾ ಇದೇ ಜುಲೈ 28ಕ್ಕೆ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಜಾನ್ ಟಾಕ್ ಆಗುತ್ತಿದೆ. ಈ ಸಿನಿಮಾದ ಬಿಡುಗಡೆ ಒತ್ತಡ ಕೂಡ ನಿರ್ಮಾಪಕ ಜಾಕ್ ಮಂಜು ಮೇಲೆ ಇರೋ ಕಾರಣ ಸದ್ಯ ಆರೋಗ್ಯದಲ್ಲಿ ಏರುಪೇರು ಆಗಿದೆ ಅಂತಾ ಅವರು ಕುಟುಂಬದವರು ತಿಳಿಸಿದ್ದಾರೆ.

ಜಾಕ್ ಮಂಜು

ಇದನ್ನು ಓದಿ:ಬ್ರಹ್ಮಾಸ್ತ್ರ ಚಿತ್ರದ ಮೌನಿ ರಾಯ್ ಫಸ್ಟ್​ ಲುಕ್​ ಬಿಡುಗಡೆ

ABOUT THE AUTHOR

...view details