ಚೆನ್ನೈ:ತಮಿಳು ಚಿತ್ರೋದ್ಯಮದ ಪ್ರಖ್ಯಾತ ನಿರ್ಮಾಪಕ, ಲಕ್ಷ್ಮೀ ಮೂವಿ ಮೇಕರ್ ಪ್ರೊಡಕ್ಷನ್ ಸಂಸ್ಥೆಯ ಕಾರ್ಯದರ್ಶಿಯಲ್ಲೊಬ್ಬರಾಗಿರುವ ಕೆ ಮುರುಳೀಧರನ್(65) ಹೃದಾಯಘಾತದಿಂದ ಸಾವನ್ನಪ್ಪಿದ್ದಾರೆ. ಗುರುವಾರ ಅವರು ಕುಂಭಕೋಣಂನ ನಚಿಯಾರ್ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಮುರಳೀಧರ್ ಪ್ರಮುಖ ನಿರ್ಮಾಪಕರಾಗಿದ್ದರು. 'ಅನ್ಬೆ ಶಿವಂ' ಮತ್ತು 'ಪಧುಪೆಟ್ಟಾಯಿ'ಯಂತಹ ಅನೇಕ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 1944ರಲ್ಲಿ ತಮ್ಮ ನಿರ್ಮಾಣ ವೃತ್ತಿ ಆರಂಭಿಸಿದ ಅವರು, ಮೊದಲಿಗೆ ಅರ್ನಂನಯಿ ಕವಾಲನ್ ಚಿತ್ರವನ್ನು ನಿರ್ಮಾಣ ಮಾಡಿದ್ದರು.