ಕರ್ನಾಟಕ

karnataka

By

Published : Apr 24, 2022, 7:14 AM IST

Updated : Apr 24, 2022, 12:27 PM IST

ETV Bharat / entertainment

ಆರ್​ಜಿವಿ ಹಾಗೂ ರಿಯಲ್ ಸ್ಟಾರ್ ಡೆಡ್ಲಿ ಜೋಡಿ ಎಂದ ಅಭಿನಯ ಚಕ್ರವರ್ತಿ!

ಐ ಯಾಮ್ ಆರ್.. ಸಿನಿಮಾದ ಬಗ್ಗೆ ಗುಟ್ಟು ಬಿಟ್ಟು ಕೊಡದ ನಿರ್ದೇಶಕ, ಇದೊಂದು ಗ್ಯಾಂಗ್ ಸ್ಟಾರ್ ಸಿನಿಮಾ, ಇವಾಗ್ಲೇ ಈ ಸಿನಿಮಾದ‌‌ ಟೈಟಲ್ ಸುಳಿವು ನೀಡಿದ್ರೆ, ಸಿನಿಮಾದ ಮಿಸ್ಟರಿ ಬಿಟ್ಟು‌‌ ಕೊಟ್ಟಾಗ ಹಾಗೇ ಆಗುತ್ತೆ ಎಂದರು ಆರ್‌ಜಿವಿ..

Sudeep launched title of I am R movie
ಐ ಆಮ್​ ಆರ್​ ಸಿನಿಮಾದ ಟೈಟಲ್​ ಲಾಂಚ್​ ಮಾಡಿದ ನಟ ಸುದೀಪ್​

ಬೆಂಗಳೂರು :ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಜಮಾನ ಜೋರಾಗಿದೆ. ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯ ವಿವಾದಾತ್ಮಕ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಬಳಿಕ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಖಾತ್ರಾ ಡೇಂಜರಸ್ ಸಿನಿಮಾ ಬಳಿಕ ಸೌತ್ ಇಂಡಸ್ಟ್ರಿ ತಿರುಗಿ ನೋಡುವಂತೆ, ಗ್ಯಾಂಗ್ ಸ್ಟಾರ್ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.

ಐ ಆಮ್​ ಆರ್​ ಸಿನಿಮಾದ ಟೈಟಲ್​ ಲಾಂಚ್​ ಮಾಡಿದ ನಟ ಸುದೀಪ್​

ಬಾಲಿವುಡ್​ನ ​ಅಮಿತಾಭ್ ಬಚ್ಚನ್, ವಿವೇಕ್ ಓಬೆರಾಯ್, ಜೆಡಿ ಚಕ್ರವರ್ತಿ ಹಾಗೂ ಸೂರ್ಯ ಜೊತೆ ಸಿನಿಮಾ ಮಾಡಿ‌ ಸೈ ಎನಿಸಿಕೊಂಡ ನಿರ್ದೇಶಕ, ರಾಮ್ ಗೋಪಾಲ್ ವರ್ಮಾ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಬಳಿಕ ಈಗ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಸಿನಿಮಾ‌‌ ಮಾಡ್ತಾ ಇದ್ದಾರೆ. ಈ ಸಿನಿಮಾದ ಆಫೀಶಿಯಲ್ ಟೈಟಲ್ ಲಾಂಚ್ ಕಾರ್ಯಕ್ರಮ ಖಾಸಗಿ ಹೋಟೆಲ್​ನಲ್ಲಿ ನಿನ್ನೆ ನಡೆದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಈ ಟೈಟಲ್ ಅನಾವರಣ ಮಾಡುವ ಮೂಲಕ, ಇಡೀ ಚಿತ್ರತಂಡಕ್ಕೆ ಗುಡ್ ಲಕ್ ಹೇಳಿದರು.

ಡಾ.ರಾಜ್ ಕುಮಾರ್ ಅಭಿನಯದ ಭಲೇ ರಾಜ, ಪ್ರೇಮದ ಕಾಣಿಕೆ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿರುವ ಹಿರಿಯ ನಿರ್ಮಾಪಕ ಯಜಮಾನ್ ಮೋತಿ ಸುಪುತ್ರ, ರಾಜ್ ಯಜಮಾನ್, ಎ ಸ್ಕೈಯರ್ ಪ್ರೊಡಕ್ಷನ್ ಅಡಿಯಲ್ಲಿ ರಾಮ್ ಗೋಪಾಲ್ ವರ್ಮ ನಿರ್ದೇಶನದ ಹಾಗೂ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ವೇಳೆ ಮಾತನಾಡಿದ ಸುದೀಪ್​, ಈ ಟೈಟಲ್ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಕೌತುಕ ಹುಟ್ಟಿಸುವ ಹಾಗೆ ಇದೆ. ಸಿಕ್ಕಾಪಟ್ಟೇ ಸ್ಟೈಲ್ ಆಗಿ ಇರುವ ಉಪೇಂದ್ರ ಸರ್, ಸಿನಿಮಾ ಚಿತ್ರೀಕರಣದಲ್ಲಿ ಸೌಂಡ್ ಇಲ್ಲದೇ ಕೆಲಸ ಮಾಡುವ ಆರ್​ಜಿವಿ ಸರ್ ಡೆಡ್ಲಿ ಕಾಂಬಿನೇಷನ್ ಸೂಪರ್ ಆಗಿದೆ. ನಾನು ಉಪೇಂದ್ರ ಸರ್ ದೊಡ್ಡ ಅಭಿಮಾನಿ‌‌ ಎಂದು ಹೆಮ್ಮೆಯಿಂದ‌ ಹೇಳಿಕೊಳ್ಳುವ ಮೂಲಕ ಇಡೀ‌ ಚಿತ್ರತಂಡಕ್ಕೆ ಹಾರೈಸಿದರು.

ಐ ಯಾಮ್ ಆರ್.. ಸಿನಿಮಾದ ಬಗ್ಗೆ ಗುಟ್ಟು ಬಿಟ್ಟು ಕೊಡದ ನಿರ್ದೇಶಕ, ಇದೊಂದು ಗ್ಯಾಂಗ್ ಸ್ಟಾರ್ ಸಿನಿಮಾ ಎಂದು ಹೇಳಿದರು. ಇವಾಗ್ಲೇ ಈ ಸಿನಿಮಾದ‌‌ ಟೈಟಲ್ ಸುಳಿವು ನೀಡಿದ್ರೆ, ಸಿನಿಮಾದ ಮಿಸ್ಟರಿ ಬಿಟ್ಟು‌‌ ಕೊಟ್ಟಾಗ ಹಾಗೇ ಆಗುತ್ತೆ ಎಂದರು. ಉಪೇಂದ್ರ‌ ಮಾತನಾಡಿ, ಈ‌ ಸಿನಿಮಾ ನಿರ್ಮಾಣ‌ ಮಾಡುತ್ತಿರುವ ರಾಜ್‌ ಯಜಮಾನ್‌ ಜೊತೆ ಹಲವಾರು ವರ್ಷಗಳ ಸ್ನೇಹ. ನಾ‌ನು ಉಪೇಂದ್ರ ಸಿನಿಮಾ‌ ಮಾಡಿದಾಗ, ದಾಮಿನಿ‌ ಲವರ್ ಪಾತ್ರದಲ್ಲಿ ಆ್ಯಕ್ಟ್ ಮಾಡಿರುವರು. ಐ ಯಾಮ್ ಆರ್​ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ರಾಜ್ ಯಜಮಾನ್ ಎಂದು ಹೇಳಿದರು.

ನಾನು ರಾಮ್ ಗೋಪಾಲ್ ವರ್ಮಾ ಅವರ ತೆಲುಗು ಸಿನಿಮಾ ಶಿವ ನೋಡಿ ಫಿದಾ ಆಗಿದ್ದೆ. ಆಗ ನನ್ನ ಓಂ ಸಿನಿಮಾದ ಕಥೆ ‌ಒಂದೇ ತರ ಇತ್ತು. ಅದಕ್ಕೆ ನಾಲ್ಕು ವರ್ಷ ಕಥೆ ಹಾಗೂ ಸ್ಕ್ರೀನ್ ಪ್ಲೇ ಬದಲಾವಣೆ ಮಾಡಿಕೊಂಡು ಓಂ ಸಿನಿಮಾ ಮಾಡಿದೆ‌. ಐ ಯಾಮ್ ಆರ್ ಅಂದ್ರೆ ಅದ್ಭುತ ಕಥೆ, ನಾನು ಇಂಡಿಯಾದಲ್ಲಿ ಹೆದರದೆ ಉತ್ತರ ಕೊಡುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಟೈಟಲ್ ಬಗ್ಗೆ ನಾನು ಹೇಳಿದ್ರೆ ಮಿಸ್ಟ್ರಿ ಮಿಸ್ ಆಗುತ್ತೆ.‌‌ ಐ ಯಾಮ್‌ ಆರ್ ಸಿನಿಮಾ ಇತಿಹಾಸ ಕ್ರಿಯೇಟ್ ಮಾಡುತ್ತೆ ಎಂದರು‌.

ಸದ್ಯ ಉಪೇಂದ್ರ ಹಾಗೂ ಆರ್​ಜಿವಿ‌ ಕಾಂಬಿನೇಷನ್ ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಸೌಂಡ್ ಮಾಡುತ್ತಿದ್ದು, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಸಿನಿಮಾದಲ್ಲಿ ಯಾರೆಲ್ಲ ತಾರ ಬಳಗ ಇರುತ್ತೆ‌ ಅನ್ನೋದು ಕಾದು ನೋಡಬೇಕು.

ಇದನ್ನೂ ಓದಿ:ಅಡಿಕೆ ಬೆಳೆಗಾರನಾಗಿ ದಿಗಂತ್‌, ವಕೀಲೆಯಾಗಿ ಐಂದ್ರಿತಾ: ಸದ್ಯದಲ್ಲೇ ತೆರೆಗೆ ಬರ್ತಿದೆ ಹೊಸ ಚಿತ್ರ!

Last Updated : Apr 24, 2022, 12:27 PM IST

ABOUT THE AUTHOR

...view details