ಕರ್ನಾಟಕ

karnataka

ನವದಂಪತಿ ಸಿದ್ಧಾರ್ಥ್-ಕಿಯಾರಾ ಕ್ಷಮೆ ಕೇಳಿದ ರಾಮ್​ ಚರಣ್​ ಪತ್ನಿ!

By

Published : Feb 8, 2023, 7:22 PM IST

ನಟಿ ಕಿಯಾರಾ ಅಡ್ವಾಣಿ ತಮ್ಮ ಮದುವೆ ಫೋಟೋ ಹಂಚಿಕೊಂಡಿದ್ದು, ರಾಮ್​ ಚರಣ್​ ಪತ್ನಿ ಉಪಾಸನಾ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Ram Charan wife Upasana apologises to newlyweds
ಬಾಲಿವುಡ್​ ನವದಂಪತಿ ಬಳಿ ಕ್ಷಮೆ ಕೇಳಿದ ರಾಮ್​ ಚರಣ್​ ಪತ್ನಿ ಉಪಾಸನಾ

ನಿನ್ನೆ (ಫೆಬ್ರವರಿ 7, ಮಂಗಳವಾರ) ಬಾಲಿವುಡ್​ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ದಾಂಪತ್ಯ ಜೀವನ ಆರಂಭಿಸಿದ್ದಾರೆ. ರಾಜಸ್ಥಾನದ ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೆಸ್ ಹೋಟೆಲ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆದಿದೆ. ಈ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಆತ್ಮೀಯರು ಸೇರಿದಂತೆ ಬಾಲಿವುಡ್​ನ ಕೆಲವು ಗಣ್ಯರು ಸಾಕ್ಷಿಯಾಗಿದ್ದರು. ಚಿತ್ರರಂಗದವರಿಗಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಮದುವೆ ಶಾಸ್ತ್ರಗಳು ಪೂರ್ಣಗೊಂಡ ಕೂಡಲೇ ನವದಂಪತಿ ನಿನ್ನೆ ಸಂಜೆ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ಚಿತ್ರಗಳು ಹೊರಬರುತ್ತಿದ್ದಂತೆ ನವ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಆಹ್ವಾನಿತರ ಪಟ್ಟಿಯಲ್ಲಿದ್ದ ರಾಮ್​ಚರಣ್​ ಪತ್ನಿ ಉಪಾಸನಾ ಕಾಮಿನೇನಿ ಸೋಶಿಯಲ್​ ಮೀಡಿಯಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಬಳಿ ಕ್ಷಮೆ ಯಾಚಿಸಿದ್ದಾರೆ.

ಫೆಬ್ರವರಿ 7ರ ರಾತ್ರಿ 10.30 ರ ವೇಳೆಗೆ ಕಿಯಾರಾ ಅಡ್ವಾಣಿ ಮದುವೆಯ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡ ಕೂಡಲೇ ಮೆಚ್ಚುಗೆಯ ಮಳೆ ಸುರಿದಿದೆ. ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಮದುವೆಗೆ ಶುಭಾಶಯಗಳನ್ನು ನೀಡಲು ಪ್ರಾರಂಭಿಸಿದರು. ಈ ಶುಭಾಶಯ ಸಂದೇಶ ಇನ್ನೂ ಮುಂದುವರೆದಿದೆ. 'ಆರ್‌ಆರ್‌ಆರ್' ಖ್ಯಾತಿಯ ಸೂಪರ್​ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ಸಿದ್ಧಾರ್ಥ್-ಕಿಯಾರಾ ಅವರ ಮದುವೆಯ ಚಿತ್ರಗಳನ್ನು ಇಷ್ಟಪಟ್ಟಿದ್ದಾರೆ. ಜೊತೆಗೆ ಕ್ಷಮೆಯನ್ನೂ ಕೇಳಿದ್ದಾರೆ.

''ನವದಂಪತಿಗೆ ಅಭಿನಂದನೆಗಳು. ಫೋಟೋ ಮತ್ತು ಜೋಡಿ ಬಹಳ ಸುಂದರವಾಗಿದೆ. ನಾವು ನಿಮ್ಮ ಈ ವಿಶೇಷ ಕ್ಷಣದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ, ಕ್ಷಮೆ ಇರಲಿ. ನಿಮ್ಮನ್ನು ಪ್ರೀತಿಸುವೆ'' ಎಂದು ಪ್ರತಿಕ್ರಿಯಿಸಿದ್ದಾರೆ. ಕಿಯಾರಾ ಜೊತೆ ತೆರೆ ಹಂಚಿಕೊಳ್ಳಲಿರುವ​ ನಟ ರಾಮ್ ಚರಣ್ ಕೂಡ ಶುಭ ಕೋರಿದ್ದು, "ಮ್ಯಾಚ್ ಮೇಡ್ ಇನ್ ಹೆವೆನ್, ಅಭಿನಂದನೆಗಳು" ಎಂದು ಬರೆದಿದ್ದಾರೆ.

ಇದನ್ನೂ ಓದಿ:ಸಿದ್ಧಾರ್ಥ್ ಕಿಯಾರಾ ಮದುವೆ: ರಾಮ್​ಚರಣ್​, ಕತ್ರಿನಾ ಸೇರಿ ಸೂಪರ್ ಸ್ಟಾರ್​ಗಳಿಂದ ಶುಭಾಶಯ

ಕಿಯಾರಾ ಅಡ್ವಾಣಿ ಮತ್ತು ರಾಮ್ ಚರಣ್ ತಮ್ಮ ಮುಂದಿನ ಚಿತ್ರ 'RC 15'ನಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ದಕ್ಷಿಣದ ಹಿರಿಯ ನಿರ್ದೇಶಕ ಶಂಕರ್ ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಈ ಬಗ್ಗೆ ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕಿಯಾರಾ ಅಡ್ವಾಣಿ ತಮ್ಮ ಸಹ ನಟ ರಾಮ್ ಚರಣ್ ಅವರನ್ನು ಕುಟುಂಬಸ್ಥರೊಂದಿಗೆ ಮದುವೆಗೆ ಬರುವಂತೆ ಆಹ್ವಾನಿಸಿದ್ದರು. ಆದರೆ ಅವರು ಬರಲು ಸಾಧ್ಯವಾಗಲಿಲ್ಲ. ಉಪಾಸನಾ ಗರ್ಭಿಣಿ ಆಗಿದ್ದು ಸುರಕ್ಷತಾ ದೃಷ್ಟಿಯಿಂದ ಮದುವೆಗೆ ಪ್ರಯಾಣ ಬೆಳೆಸಿಲ್ಲ.

ಇದನ್ನೂ ಓದಿ:ಸಪ್ತಪದಿ ತುಳಿದ ಸಿದ್ಧಾರ್ಥ್-ಕಿಯಾರಾ: ಬಾಲಿವುಡ್​ ತಾರಾ ಜೋಡಿ ಮದುವೆಯ ಸುಂದರ ಕ್ಷಣಗಳು ಇಲ್ಲಿವೆ

ABOUT THE AUTHOR

...view details