ಕರ್ನಾಟಕ

karnataka

ETV Bharat / entertainment

'ಚಂದಮಾಮ'ನ ಸ್ಪರ್ಶಿಸಿದ ಭಾರತ: ಮತ್ತೊಮ್ಮೆ ಟ್ರೋಲ್​ ಆದ ಪ್ರಭಾಸ್​ 'ಆದಿಪುರುಷ್​'

Prabhas's Adipurush troll: ಕಡಿಮೆ ವೆಚ್ಚದಲ್ಲಿ ತಯಾರಾಗಿ ಇತಿಹಾಸ ಸೃಷ್ಟಿಸಿದ ಚಂದ್ರಯಾನ 3 ಅನ್ನು ಇಟ್ಟುಕೊಂಡು 'ಆದಿಪುರುಷ್'​ ಸಿನಿಮಾವನ್ನು ಟ್ರೋಲ್​ ಮಾಡಲಾಗುತ್ತಿದೆ.

By ETV Bharat Karnataka Team

Published : Aug 24, 2023, 3:52 PM IST

Adipurush as Chandrayaan-3
ಆದಿಪುರುಷ್​

ಈ ವರ್ಷ ತೆರೆಕಂಡ ಪೌರಾಣಿಕ ಕಥೆಯಾಧಾರಿತ ಸಿನಿಮಾ 'ಆದಿಪುರುಷ್​'. ಭಗವಾನ್​ ಶ್ರೀರಾಮನ ಪಾತ್ರದಲ್ಲಿ ಸೌತ್​ ಸೂಪರ್​ಸ್ಟಾರ್​ ಪ್ರಭಾಸ್​ ಮತ್ತು ಸೀತೆಯ ಪಾತ್ರದಲ್ಲಿ ಬಾಲಿವುಡ್​ ಬೆಡಗಿ ಕೃತಿ ಸನೋನ್​ ಕಾಣಿಸಿಕೊಂಡಿದ್ದರು. ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್​ ಆಗಿರಲಿಲ್ಲ. ಸಾಕಷ್ಟು ಟೀಕೆಗಳನ್ನು ಎದುರಿಸಿ ಪ್ರೇಕ್ಷಕರಿಂದ ನಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವೀಕರಿಸಿತ್ತು. ಇದೀಗ ಮತ್ತೊಮ್ಮೆ ಆದಿಪುರುಷ್​ ಟ್ರೋಲ್​ ಆಗಿದೆ. ಒಂದೆಡೆ ಚಂದ್ರಯಾನ 3 ಯಶಸ್ಸಿಗೆ ಅಭಿನಂದನೆ ಜೊತೆಗೆ ಶುಭಾಶಯ ಹರಿದುಬರುತ್ತಿದ್ದರೆ, ಆದಿಪುರುಷ್​ ಚಿತ್ರದ ಕುರಿತು ನೆಗೆಟಿವ್​ ಕಮೆಂಟ್​ಗಳು ಈಗಲೂ ವ್ಯಕ್ತವಾಗುತ್ತಿವೆ.

ಟ್ರೋಲ್​ ಆದ ಪ್ರಭಾಸ್​ 'ಆದಿಪುರುಷ್​'

ಹೌದು, ಆಗಸ್ಟ್​ 23 ಕೋಟ್ಯಂತರ ಭಾರತೀಯರ ಕನಸು ನನಸಾದ ಅದ್ಭುತ ದಿನ. ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತದ ಚಂದ್ರಯಾನ 3 ಗಗನ ನೌಕೆಯು ಯಶಸ್ವಿಯಾಗಿ ಲ್ಯಾಂಡ್​ ಆಗಿ ಐತಿಹಾಸ ಸೃಷ್ಟಿಸಿದ ಅಮೋಘ ಕ್ಷಣ. ಈ ವಿಶೇಷ ದಾಖಲೆ ಮಾಡಿದ ಭಾರತಕ್ಕೆ ವಿಶ್ವದ ನಾನಾ ಕಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ ಕಡಿಮೆ ವೆಚ್ಚದಲ್ಲಿ ತಯಾರಾದ ಚಂದ್ರಯಾನ 3ಯನ್ನು ಇಟ್ಟುಕೊಂಡು 'ಆದಿಪುರುಷ್'​ ಸಿನಿಮಾವನ್ನು ಟ್ರೋಲ್​ ಮಾಡಲಾಗುತ್ತಿದೆ.

ಟ್ರೋಲ್​ ಆದ ಪ್ರಭಾಸ್​ 'ಆದಿಪುರುಷ್​'

ಆದಿಪುರುಷ್​ನ ಬಜೆಟ್​ಗಿಂತ ಚಂದ್ರಯಾನ 3 ಬಜೆಟ್​ ಕಡಿಮೆಯಿತ್ತು. ಆದರೂ ಚಂದ್ರಯಾನ 3 ಯಶಸ್ವಿಯಾಗಿದೆ ಎಂದು ಸೋಷಿಯಲ್​ ಮೀಡಿಯಾ ಬಳಕೆದಾರರು ಆದಿಪುರುಷ್​ ಅನ್ನು ಟೀಕಿಸುತ್ತಿದ್ದಾರೆ. ಸುಮಾರು 700 ಕೋಟಿ ರೂಪಾಯಿಗಳ ಬೃಹತ್​ ವೆಚ್ಚದಲ್ಲಿ ಆದಿಪುರುಷ್​ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಚಿತ್ರವು ಸಂಪೂರ್ಣ ಕಳಪೆ ಪ್ರದರ್ಶನ ಕಂಡಿತು. ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಆದರೆ ಚಂದ್ರಯಾನ 3 ಕೇವಲ 615 ಕೋಟಿ ರೂಪಾಯಿಯಲ್ಲಿ ತಯಾರಾಗಿ ಇತಿಹಾಸ ಬರೆಯಿತು ಎಂದು ಚಂದ್ರಯಾನ 3 ಯಶಸ್ಸನ್ನು ಆಚರಿಸುವುದರೊಂದಿಗೆ ಆದಿಪುರುಷ್​ ಅನ್ನು ಟೀಕಿಸಲಾಗುತ್ತಿದೆ.

ಟ್ರೋಲ್​ ಆದ ಪ್ರಭಾಸ್​ 'ಆದಿಪುರುಷ್​'

ಇದನ್ನೂ ಓದಿ:1.75 ಕೋಟಿ ರೂ. ಕಲೆಕ್ಷನ್​​: ಅತಿ ಕಡಿಮೆ ಸಂಪಾದನೆ ಮಾಡಿದ 'ಆದಿಪುರುಷ್​'!

ಆದಿಪುರುಷ್​ ಸಿನಿಮಾ ಈವರೆಗೆ ತಯಾರಾದ ಅತ್ಯಂತ ದುಬಾರಿ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಓಂ ರಾವುತ್​ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರ ಗ್ರಾಫಿಕ್ಸ್, ಡೈಲಾಗ್ಸ್, ಕಥೆ ರವಾನಿಸಿದ ರೀತಿ, ಪಾತ್ರಗಳ ಚಿತ್ರಣ ಸೇರಿದಂತೆ ಕೆಲ ವಿಷಯಗಳ ಹಿನ್ನೆಲೆಯಲ್ಲಿ ಪ್ರೇಕ್ಷಕರು, ವಿಮರ್ಷಕರಿಂದ ನಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿತು. ಹನುಮಾನ್​ ಡೈಲಾಗ್​ಗಳು ಹೆಚ್ಚಿನ ಟೀಕೆಗೆ ಒಳಗಾಗಿದ್ದವು.

ಟ್ರೋಲ್​ ಆದ ಪ್ರಭಾಸ್​ 'ಆದಿಪುರುಷ್​'

ಮಹಾಕಾವ್ಯ ರಾಮಾಯಣ ಆಧಾರಿತ ಸಿನಿಮಾ ಇದಾಗಿದ್ದು, ಕೆಲ ಡೈಲಾಗ್​​ಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಭಾಷಣೆ ಬರಹಗಾರ ಮನೋಜ್​ ಮುಂತಶಿರ್ ಶುಕ್ಲಾ​ ವಿರುದ್ಧ ಪ್ರೇಕ್ಷಕರು ಕಿಡಿಕಾರಿದ್ದರು. ಬಳಿಕ ಡೈಲಾಗ್​ ರೈಟರ್​ ಜನತೆಯಲ್ಲಿ ಕ್ಷಮೆಯಾಚಿಸಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ನಿರ್ದೇಶಕರು ನಟಿಗೆ ಚುಂಬಿಸಿದ್ದ ವಿಚಾರವೂ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಮೊದಲೆರಡು ದಿನ ಅದ್ಭುತ ಪ್ರದರ್ಶನ ಕಂಡ ಸಿನಿಮಾ, ನೆಗೆಟಿವ್​ ಟಾಕ್​ ಸ್ಪ್ರೆಡ್​ ಆದ ಬೆನ್ನಲ್ಲೇ ಬಾಕ್ಸ್​ ಆಫೀಸ್​ನಲ್ಲಿ ಕುಸಿತ ಕಂಡಿತ್ತು.

ಟ್ರೋಲ್​ ಆದ ಪ್ರಭಾಸ್​ 'ಆದಿಪುರುಷ್​'

ಇದನ್ನೂ ಓದಿ:'ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ': ಆದಿಪುರುಷ್​​ ಡೈಲಾಗ್​ ರೈಟರ್

ABOUT THE AUTHOR

...view details