ಕರ್ನಾಟಕ

karnataka

ETV Bharat / entertainment

'ರವಿಕೆ ಪ್ರಸಂಗ'ದ ಟೈಟಲ್ ಸಾಂಗ್​​ ಬಿಡುಗಡೆ - Ravike Prasanga song

ರವಿಕೆ ಪ್ರಸಂಗ ಸಿನಿಮಾದ ಟೈಟಲ್​ ಸಾಂಗ್​ ಅನಾವರಣಗೊಂಡಿದೆ.

Ravike Prasanga
ರವಿಕೆ ಪ್ರಸಂಗ ಸಿನಿಮಾ

By ETV Bharat Karnataka Team

Published : Sep 15, 2023, 4:08 PM IST

ಮಹಿಳೆಯರು ನಿತ್ಯ ಧರಿಸುವ ಸೀರೆ, ಓಲೆ, ಬಳೆ ಹಾಗು ಗೆಜ್ಜೆ ಸೇರಿದಂತೆ ಹಲವು ವಸ್ತುಗಳ ಬಗ್ಗೆ ಸಾಕಷ್ಟು ಹಾಡುಗಳು ಬಂದಿವೆ. ಆದರೆ ರವಿಕೆ ಬಗ್ಗೆ ಈವರೆಗೂ ಯಾವುದೇ ಹಾಡು, ಸಿನಿಮಾ ಮೂಡಿಬಂದಿಲ್ಲ. ಇದೀಗ ರವಿಕೆ ಕುರಿತಾಗಿಯೇ ಸಿನಿಮಾ ನಿರ್ಮಾಣವಾಗುತ್ತಿದ್ದು ಅದರ ಹೆಸರು 'ರವಿಕೆ ಪ್ರಸಂಗ'. ಕಿರುತೆರೆ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ ಭಾರತಿ ಈ ಚಿತ್ರದ ಮೂಲಕ ಹೀರೋಯಿನ್​ ಆಗಿ ಹೊರಹೊಮ್ಮುತ್ತಿದ್ದಾರೆ. ಶೀರ್ಷಿಕೆಯಿಂದಾಗಿ ಕುತೂಹಲ ಹುಟ್ಟಿಸಿರೋ 'ರವಿಕೆ ಪ್ರಸಂಗ' ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

ಸದ್ಯ ರವಿಕೆ ಪ್ರಸಂಗ ಚಿತ್ರದ ಟೈಟಲ್ ಸಾಂಗ್​​ ಅನಾವರಣಗೊಂಡಿದೆ. ಈ ಹಾಡಿನಲ್ಲಿ ಬ್ರಹ್ಮಗಂಟು ನಟಿ ಸಖತ್ತಾಗಿ ಮೈ ಬಳುಕಿಸಿದ್ದಾರೆ. ಕಿರಣ್ ಕಾವೇರಪ್ಪ ಬರೆದಿರುವ "ರವಿ, ರವಿ, ರವಿಕೆ ಪ್ರಸಂಗ" ಎಂಬ ಟೈಟಲ್ ಸಾಂಗ್ ಜಂಕಾರ್ ಮ್ಯೂಸಿಕ್ ಮೂಲಕ ಅನಾವರಣವಾಗಿದೆ. ಈ ಹಾಡಿಗೆ ವಿನಯ್ ಶರ್ಮಾ ಸಂಗೀತ ನೀಡಿದ್ದು, ಚೈತ್ರ ಹಾಗೂ ಚೇತನ್ ನಾಯಕ್ ಧ್ವನಿ ನೀಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಈ ಹಾಡು ಬಿಡುಗಡೆಗೊಳಿಸಿ, ಸಿನಿಮಾ ಯಶಸ್ಸು ಕಾಣಲೆಂದು ಶುಭ ಹಾರೈಸಿದರು.

ನಿರ್ಮಾಪಕ ಸಂತೋಷ್ ಕೊಡೆಂಕೆರಿ ಮಾತನಾಡಿ, ಕಿರಣ್ ಕಾವೇರಪ್ಪ ರವಿಕೆ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ‌‌. ಅಷ್ಟೇ ಚೆನ್ನಾಗಿ ಚೈತ್ರ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ವಿನಯ್ ಶರ್ಮಾ ಸಂಗೀತದಲ್ಲಿ ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರಹ್ಮಗಂಟು ಸೀರಿಯಲ್ ಮೂಲಕ ಛಾಪು ಮೂಡಿಸಿರುವ ಗೀತಾ ಭಾರತಿ ಇದೇ ಮೊದಲ ಬಾರಿಗೆ ನಾಯಕ ನಟಿಯಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಗೀತಾ ಭಾರತಿ, ಚಿತ್ರದಲ್ಲಿ ನನ್ನ ಪಾತ್ರ ಬಹಳ ಚೆನ್ನಾಗಿದೆ. ಇಂದು ಬಿಡುಗಡೆ ಆಗಿರುವ "ರವಿಕೆ" ಹಾಡು ಹಾಗೂ ಚಿತ್ರ ಪ್ರೇಕ್ಷಕರ ಮನಗೆಲ್ಲಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸೈಮಾ 2023: ದುಬೈಗೆ ಹಾರಿದ ರಿಷಬ್​ ಶೆಟ್ಟಿ ಕಪಲ್​​ ಕಾಂತಾರ, ಕೆಜಿಎಫ್​ 2 ಮೇಲೆ ಬೆಟ್ಟದಷ್ಟು ನಿರೀಕ್ಷೆ

ಕಥೆ ಹಾಗೂ ಸಂಭಾಷಣೆ ಬರೆದಿರುವ ಪಾವನ ಸಂತೋಷ್ ಮಾತನಾಡಿ, ಹೆಣ್ಣುಮಕ್ಕಳಿಗೆ ಸೀರೆಗಿಂತ ಹೆಚ್ಚಿನ ಪ್ರೀತಿ ರವಿಕೆ ಮೇಲಿರುತ್ತದೆ. ಆ ರವಿಕೆ ಕುರಿತು ಕಥೆ ಬರೆದಿದ್ದೇನೆ. ಸಹಕಾರ ನೀಡಿದ ನನ್ನ ಪತಿ ಸಂತೋಷ್ ಹಾಗೂ ಇಡೀ ಚಿತ್ರತಂಡಕ್ಕೆ ನಾನು ಆಭಾರಿ ಎಂದರು. ಹಿರಿಯ ನಟಿ ಪದ್ಮಜಾರಾವ್ ಮಾತನಾಡಿ, ಈ ತಂಡದೊಂದಿಗೆ ಕೆಲಸ ಮಾಡಿದ್ದು ಸಂತೋಷವಾಗಿದೆ. ರವಿಕೆ ಕುರಿತಾಗಿ ಬರುತ್ತಿರುವ ಈ ಚಿತ್ರ ಎಲ್ಲಾ ಹೆಣ್ಣುಮಕ್ಕಳ ಮನಸ್ಸಿಗೆ ಹತ್ತಿರವಾಗಲಿದೆ ಎಂದು ತಿಳಿಸಿದರು.

ರವಿಕೆ ಪ್ರಸಂಗ ಚಿತ್ರತಂಡ

ಗೀತಾ ಭಾರತಿ ಹಾಗೂ ಪದ್ಮಜಾರಾವ್ ಅಲ್ಲದೇ ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್, ಪದ್ಮಜಾರಾವ್, ರಘು ಪಾಂಡೇಶ್ವರ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ಮೀನಾ ಸೇರಿದಂತೆ ಮೊದಲಾದವರು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ ಪವರ್​​ಫುಲ್​ ಕಪಲ್​ ಭೇಟಿಯಾದ ಅಫ್ಘನ್​ ಕ್ರಿಕೆಟಿಗ: ರಾಲಿಯಾ ಜೊತೆ ರಶೀದ್​ ಖಾನ್​ ಫೋಟೋ

ದೃಷ್ಟಿ ಮೀಡಿಯಾ ಆ್ಯಂಡ್​ ಪ್ರೊಡಕ್ಷನ್ ವತಿಯಿಂದ ಸಿನಿಮಾ ನಿರ್ಮಾಣವಾಗಿದೆ. ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ ಶಿವರುದ್ರಯ್ಯ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ವಿನಯ್ ಶರ್ಮಾ ಸಂಗೀತ ನಿರ್ದೇಶನ, ಮುರಳಿಧರ್ ಎನ್. ಛಾಯಾಗ್ರಹಣ ಹಾಗೂ ರಘು ಶಿವರಾಮ್ ಅವರ ಸಂಕಲನ ಇದೆ. ಬಹುತೇಕ ಶೂಟಿಂಗ್​​ ಮುಗಿಸಿರುವ ಚಿತ್ರವನ್ನು ಇದೇ ವರ್ಷ ಬಿಡುಗಡೆಗೊಳಿಸಲು ಸಿದ್ಧತೆ ನಡೆಯುತ್ತಿದೆ.

ABOUT THE AUTHOR

...view details