ಕರ್ನಾಟಕ

karnataka

ETV Bharat / entertainment

ಮತ್ತೊಂದು ಕನ್ನಡ ಸಿನಿಮಾಕ್ಕೆ ಬಣ್ಣ ಹಚ್ಚಲಿರುವ ತೆಲುಗು ಹಾಸ್ಯನಟ ಬ್ರಹ್ಮಾನಂದಮ್​ - ಉಸಿರೇ ಉಸಿರೇ ಸಿನಿಮಾದಲ್ಲಿ ಬ್ರಹ್ಮಾನಂದಮ್ ನಟನೆ

ಪುನೀತ್​ ರಾಜಕುಮಾರ್​ ಅವರ ನಿನ್ನಿಂದಲೇ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ತೆಲುಗು ಹಾಸ್ಯ ನಟ ಬ್ರಹ್ಮಾನಂದಮ್​ ಅವರು, ರಾಜೀವ್​ ನಟನೆಯ ಉಸಿರೇ ಉಸಿರೇ ಸಿನಿಮಾದ ಮೂಲಕ ಮತ್ತೊಂದು ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ.

brahmanandam
ಬ್ರಹ್ಮಾನಂದಮ್

By

Published : Apr 13, 2022, 9:31 PM IST

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಕಾಮಿಡಿ ಮ್ಯಾನರಿಸಂನಿಂದ ಬಹುಬೇಡಿಕೆಯ ಹಾಸ್ಯ ನಟರಾಗಿ ಪ್ರಖ್ಯಾತಿ ಹೊಂದಿರುವ ನಟ ಬ್ರಹ್ಮಾನಂದಮ್. ಪುನೀತ್ ರಾಜ್‍ಕುಮಾರ್ ಅಭಿನಯದ ನಿನ್ನಿಂದಲೇ ಸಿನಿಮಾದಲ್ಲಿ ಬ್ರಹ್ಮಾನಂದಮ್ ಅವರು ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಬಳಿಕ ನಟ ರಾಜೀವ್ ನಟನೆಯ ಉಸಿರೇ ಉಸಿರೇ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಮತ್ತೆ ಸ್ಯಾಂಡಲ್​ವುಡ್ ಕಡೆ ಮುಖ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಡ್ರಾಮಾ ಮೇಷ್ಟ್ರು ಪಾತ್ರ ಮಾಡುತ್ತಿರುವ ಬ್ರಹ್ಮಾನಂದಮ್ ಅವರು ಡಾ.ರಾಜ್​ಕುಮಾರ್ ಹಾಗೂ ದಿವಂಗತ ಪುನೀತ್ ರಾಜ್‍ಕುಮಾರ್ ಜೊತೆ ಇದ್ದ ಒಡನಾಟವನ್ನ ಬಿಚ್ಚಿಟ್ಟರು. ಉಸಿರೇ ಉಸಿರೇ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೆಲುಗು ನಟ ಬ್ರಹ್ಮಾನಂದಮ್ ಅವರು, ಕನ್ನಡದಲ್ಲಿ ಸಿನಿಮಾ ಮಾಡೋದಿಕ್ಕೆ ಡಾ.ರಾಜಕುಮಾರ್ ಕಾರಣ. ಯಾಕೆಂದರೆ ರಾಜಕುಮಾರ್ ಅವರು ನಟರಾಗಿ, ಗಾಯಕರಾಗಿ, ಸರಳತೆಯ ರಾಯಭಾರಿಯಾಗಿದ್ದರು. ಅವರ ಮೇಲೆ ಇದ್ದ ಗೌರವವೇ ನಾನು ಕನ್ನಡದಲ್ಲಿ ಸಿನಿಮಾ ಮಾಡೋದಕ್ಕೆ ಸ್ಫೂರ್ತಿ ಅಂದರು.

ನಾನು ಅಭಿನಯ ಮಾಡುವ ಕಾಮಿಡಿ ಸೆನ್ಸ್ ಅವರಿಗೆ ಬಹಳ ಇಷ್ಟ ಅನ್ನೋದು ನನಗೆ ಗೊತ್ತಿರಲಿಲ್ಲ. ನನಗೆ ಶಿವರಾಜ್ ಕುಮಾರ್ ಅವರು ಅವರ ಮನೆಗೆ ಹೋದಾಗ ಅಪ್ಪಾಜಿ ಪ್ರತಿದಿನ ನಿಮ್ಮ ಕಾಮಿಡಿಯನ್ನು ನೋಡ್ತಾ ಇದ್ದರು ಅಂತಾ ಹೇಳಿದಾಗ ನನಗೆ ದೊಡ್ಡ ಪ್ರಶಸ್ತಿ ಸಿಕ್ಕ ಹಾಗೇ ಆಯಿತು ಅಂದರು. ಇನ್ನು ಪುನೀತ್ ರಾಜ್‍ಕುಮಾರ್ ಬಗ್ಗೆ ಮಾತನಾಡಿದ ಬ್ರಹ್ಮಾನಂದಮ್, ನಾನು ಪುನೀತ್ ಅವ್ರನ್ನ, ಮೂರು ಬಾರಿ ಭೇಟಿ ಮಾಡಿದ್ದೇನೆ. ಎಂಥಾ ಸಿಂಪಲ್ ವ್ಯಕ್ತಿ. ಅದ್ಭುತ ನಟನನ್ನ ಕಳೆದುಕೊಂಡಿದ್ದೀವಿ ಅಂತಾ ಮರುಗಿದರು.

ಇದನ್ನೂ ಓದಿ:ಹೊಸ ದಾಖಲೆ ಬರೆದ‌ ಕೆಜಿಎಫ್ ಚಾಪ್ಟರ್-2.. 12 ಸಾವಿರ ಪರದೆಗಳಲ್ಲಿ ರಾಕಿ ದರ್ಶನ!

ABOUT THE AUTHOR

...view details