ಕರ್ನಾಟಕ

karnataka

By ETV Bharat Karnataka Team

Published : Nov 11, 2023, 12:17 PM IST

Updated : Nov 11, 2023, 2:05 PM IST

ETV Bharat / entertainment

ಹಿರಿಯ ನಟ ಚಂದ್ರಮೋಹನ್ ನಿಧನ; ಶೋಕ ಸಾಗರದಲ್ಲಿ ಮುಳುಗಿದ ಟಾಲಿವುಡ್

Tollywood senior actor chandramohan passed away: ಟಾಲಿವುಡ್ ಹಿರಿಯ ನಟ ಚಂದ್ರಮೋಹನ್ ನಿಧನರಾಗಿದ್ದಾರೆ. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

Tollywood senior actor chandramohan  senior actor chandramohan passed away  actor chandramohan films  ಹಿರಿಯ ನಟ ಚಂದ್ರಮೋಹನ್ ನಿಧನ  ಶೋಕ ಸಾಗರದಲ್ಲಿ ಮುಳುಗಿದ ಟಾಲಿವುಡ್  ಖ್ಯಾತ ನಟ ಚಂದ್ರಮೋಹನ್  ಹೈದರಾಬಾದ್‌ನ ಅಪೋಲೋ ಆಸ್ಪತ್ರೆ  ತೆಲುಗು ಚಿತ್ರರಂಗದಲ್ಲಿ ದುಃಖದ ಛಾಯೆ  ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕದಲ್ಲಿ ಜನಿಸಿದ ಚಂದ್ರಮೋಹನ್
ಹಿರಿಯ ನಟ ಚಂದ್ರಮೋಹನ್ ನಿಧನ

ಹೈದರಾಬಾದ್:ಖ್ಯಾತ ನಟ ಚಂದ್ರಮೋಹನ್ (80) ನಿಧನರಾಗಿದ್ದಾರೆ. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಇದು ಟಾಲಿವುಡ್​ ಚಿತ್ರರಂಗದಲ್ಲಿ ದುಃಖದ ಛಾಯೆ ಆವರಿಸಿದೆ. ಅವರ ನಿಧನಕ್ಕೆ ಹಲವು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.

ಮೇ 23, 1943 ರಂದು ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕದಲ್ಲಿ ಜನಿಸಿದ್ದ ಚಂದ್ರಮೋಹನ್ ಅವರ ಮೂಲ ಹೆಸರು ಮಲ್ಲಂಪಲ್ಲಿ ಚಂದ್ರಶೇಖರ್ ರಾವ್. ಪದವಿಯನ್ನು ಬಾಪಟ್ಲ ಕೃಷಿ ಕಾಲೇಜಿನಲ್ಲಿ ಮುಗಿಸಿದ್ದರು. ಅವರು 1966 ರಲ್ಲಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಅನೇಕ ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ವೃತ್ತಿಬದುಕಿನ ಆರಂಭದಲ್ಲಿ ಹೀರೋ ಕ್ಯಾರೆಕ್ಟರ್ ಮಾಡಿ, ನಂತರ ಹಾಸ್ಯನಟನಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ತಮ್ಮ ವಿಶಿಷ್ಟ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದರು.

'ಬಂಗಾರು ಪಿಚ್ಚುಕ', 'ಆತ್ಮೆಯುಲು', 'ತಲ್ಲಿದಂಡ್ರುಲು', 'ಬೊಮ್ಮಬೊರುಸು', 'ಸೀತಾಮಾಲಕ್ಷ್ಮಿ', 'ಶಂಕರಾಭರಣಂ', 'ತಾಯರಮ್ಮ ಬಂಗಾರಾಯ', 'ಇಂಟಿಂಟಿ ರಾಮಾಯಣ', 'ಕೋರಿಕಲೆ ಗುರ್ರಲೈತೆ', 'ಮಂಗಳ ತೋರಣಲು', 'ಕೊತ್ತನೀರು', ' ಸಂತೋಷಿಮಾತಾ ವ್ರತಂ', 'ಮೂಡು ಮುಳ್ಳು', 'ಚಂಟಬ್ಬಾಯ್​', 'ಶ್ರೀ ಶಿರಿಡಿ ಸಾಯಿಬಾಬಾ ಮಹಾತ್ಯಂ', 'ವಿವಾಹ ಬೋಜನಂಬು', 'ತ್ರಿನೇತ್ರುಡು', 'ಯೋಗಿ ವೇಮನ', 'ಆದಿತ್ಯ 369', 'ಪೆದ್ದರಿಕಂ', 'ಗುಲಾಬಿ', 'ರಾಮುಡೊಚ್ಚಾಡು', 'ನಿನ್ನೆ ಪೆಳ್ಳಾಡತ', 'ಪ್ರೇಮಿಂಚುಕುಂದಾಂ ರಾ ', 'ಚಂದ್ರಲೇಖ', 'ಅಂದರೂ ಹೀರೋಲೆ' ಸಿನಿಮಾಗಳಲ್ಲಿ ನಟಿಸಿದ್ದಾರೆ. 1966 ರಲ್ಲಿ 'ರಂಗುಲ ರಾಟ್ನಂ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಚಂದ್ರಮೋಹನ್​ ಅವರು ತಮ್ಮ 6 ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅನೇಕ ಅದ್ಭುತ ಪಾತ್ರಗಳನ್ನು ನಿರ್ವಹಿಸಿದ್ದರು.

ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯಕ್ಕಾಗಿ ಅವರು ಫಿಲ್ಮ್‌ಫೇರ್ ಮತ್ತು ನಂದಿ ಪ್ರಶಸ್ತಿಗಳನ್ನು ಪಡೆದರು. 'ಪದಹರೆಲ್ಲಾ ಅವಧ್' ಮತ್ತು 'ಸಿರಿ ಸಿರಿ ಮುವ್ವ' ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟನಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದರು.

ಚಂದ್ರಮೋಹನ್ ಅವರು ಹಿರಿಯ ನಟರೊಂದಿಗೆ ಮಾತ್ರವಲ್ಲದೆ ಯುವ ತಾರೆಯರೊಂದಿಗೂ ತೆರೆ ಹಂಚಿಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಎರಡು ಫಿಲ್ಮ್‌ಫೇರ್ ಮತ್ತು ಆರು ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. 'ಪದಹರೆಲ್ಲ ಅವಧ್' ಮತ್ತು 'ಸಿರಿ ಸಿರಿ ಮುವ್ವ' ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟನಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದರು. 2005 ರಲ್ಲಿ ಅವರು 'ಅತನೊಕ್ಕಡೆ' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟನ ನಂದಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 1987ರಲ್ಲಿ ‘ಚಂದಮಾಮ ರಾವೆ’ ಚಿತ್ರಕ್ಕೆ ಅತ್ಯುತ್ತಮ ಹಾಸ್ಯನಟನಾಗಿ ನಂದಿ ಪ್ರಶಸ್ತಿ ಸ್ವೀಕರಿಸಿದ್ದರು. ಅಂತಿಮವಾಗಿ 2017ರಲ್ಲಿ ‘ಆಕ್ಸಿಜನ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಚಂದ್ರಮೋಹನ್ ಅವರು ದಿವಂಗತ ನಿರ್ದೇಶಕ ಕೆ. ವಿಶ್ವನಾಥ್ ಅವರ ಹತ್ತಿರದ ಸಂಬಂಧಿ.

ಗಣ್ಯರ ಸಂತಾಪ..

"ತೆಲುಗಿನ ಖ್ಯಾತ ನಟ ಚಂದ್ರಮೋಹನ್ ಅವರು ನಿಧನರಾಗಿದ್ದಾರೆಂದು ತಿಳಿದು ನನಗೆ ಅತೀವ ದುಃಖವಾಗಿದೆ. ಹಿಂದಿನ ಕಾಲದ ಚಿತ್ರಗಳಿಂದ ಆರಂಭವಾಗಿ ಇಂದಿನ ಕಾಲದ ಚಿತ್ರಗಳವರೆಗೆ, ನಟನಾಗಿ ಅವರ ಪ್ರಾಮುಖ್ಯತೆಯು ಅಳೆಯಲಾಗದು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ" - ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

''ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಖ್ಯಾತ ನಟ ಚಂದ್ರಮೋಹನ್ ಅವರು ವಿಧಿವಶರಾಗಿದ್ದು ದುಃಖ ತಂದಿದೆ. ಅವರು ತಮ್ಮ ಮೊದಲ ಚಿತ್ರಕ್ಕೆ ನಂದಿ ಪ್ರಶಸ್ತಿಯನ್ನು ಗೆದ್ದರು ಮತ್ತು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದರು. ತೆಲುಗು ಜನರ ಹೃದಯದಲ್ಲಿ ಛಾಪು ಮೂಡಿಸಿದರು. ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಬಯಸುತ್ತೇನೆ" - ಎಪಿ ಮುಖ್ಯಮಂತ್ರಿ ಜಗನ್

‘ಸಿರಿಸಿರಿಮುವ್ವ’, ‘ಶಂಕರಾಭರಣಂ’, ‘ರಾಧಾಕಲ್ಯಾಣಂ’, ‘ನಾಕೂ ಪೆಳ್ಳಾಂ ಕಾವಾಲಿ’ ಮುಂತಾದ ಹಲವು ಚಿತ್ರಗಳಲ್ಲಿ ತಮ್ಮ ವೈವಿಧ್ಯಮಯ ಅಭಿನಯದ ಮೂಲಕ ತೆಲುಗರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಹಿರಿಯ ನಟ, ನಾಯಕ ಚಂದ್ರಮೋಹನ್ ಅವರು ಇನ್ನಿಲ್ಲ ಎಂಬುದು ದುಃಖದ ಸುದ್ದಿ. ನನ್ನ ಮೊದಲ ಚಿತ್ರ ‘ಪ್ರಣಾಮ್ ಖರೀದು’ದಲ್ಲಿ ಮೂಕನಾಗಿ ಅತ್ಯುತ್ತಮ ಅಭಿನಯ ಮಾಡಿದ್ದರು. ಆ ಸಂದರ್ಭದಲ್ಲಿ ನಮ್ಮ ಮೊದಲ ಪರಿಚಯವು ಉತ್ತಮ ಸ್ನೇಹ ಮತ್ತು ಇನ್ನೂ ಹೆಚ್ಚಿನ ಬಂಧವಾಗಿ ಮಾರ್ಪಟ್ಟಿತು. ಇನ್ನು ಅವರ ಹತ್ತಿರ ಇರದಿರುವುದು ನನಗೆ ವೈಯಕ್ತಿಕ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ" - ಚಿರಂಜೀವಿ

''ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ವಿಶೇಷ ಮನ್ನಣೆ ಗಳಿಸಿದ್ದ ಚಂದ್ರಮೋಹನ್ ಅವರ ಅಕಾಲಿಕ ಮರಣ ದುಃಖ ತಂದಿದೆ. ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ" - ಎನ್‌ಟಿಆರ್

''ಹಿರಿಯ ನಟ ಚಂದ್ರಮೋಹನ್ ಅವರ ನಿಧನ ದುಃಖ ತಂದಿದೆ. ನಾಯಕ, ಹಾಸ್ಯನಟ ಮತ್ತು ಪೋಷಕ ನಟನಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ ಅವರು, ಅವರ ನಿಧನವು ತೆಲುಗು ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.” - ನಾರಾ ಲೋಕೇಶ

''ಅಪ್ರತಿಮ ನಟ ಚಂದ್ರಮೋಹನ್ ಅವರ ಅಕಾಲಿಕ ಮರಣವು ಸಿನಿಮಾ ಲೋಕಕ್ಕೆ ತುಂಬಲಾರದ ನಷ್ಟ. ಅವರ ಜತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ, ಹಲವು ವಿಷಯಗಳನ್ನು ಕಲಿತಿದ್ದೇನೆ. ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪಗಳು" - ಕಲ್ಯಾಣ್ ರಾಮ್

ಓದಿ:ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ: ಆರೋಪಿಗಳ ವಿರುದ್ಧ ಎಫ್ಐಆರ್​

Last Updated : Nov 11, 2023, 2:05 PM IST

ABOUT THE AUTHOR

...view details