ಕರ್ನಾಟಕ

karnataka

ETV Bharat / entertainment

ಶೂಟಿಂಗ್​ನಲ್ಲಿ ಬ್ಯುಸಿಯಾದ ಮಾಜಿ ವಿಶ್ವಸುಂದರಿ: ಅಭಿಮಾನಿಗಳಲ್ಲಿ ಸಂತಸ - Aarya 3

ನಟಿ ಸುಶ್ಮಿತಾ ಸೇನ್ ಆರ್ಯ 3 ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ.

Sushmita Sen
ನಟಿ ಸುಶ್ಮಿತಾ ಸೇನ್

By

Published : Apr 25, 2023, 6:04 PM IST

ಮಾಜಿ ವಿಶ್ವಸುಂದರಿ, ನಟಿ ಸುಶ್ಮಿತಾ ಸೇನ್ ಅವರು ತಮ್ಮ ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ವೆಬ್ ಸರಣಿ 'ಆರ್ಯ ಸೀಸನ್ 3'ರ ಚಿತ್ರೀಕರಣವನ್ನು ಇಂದು ರಾಜಸ್ಥಾನದ ಜೈಪುರದಲ್ಲಿ ಪುನರಾರಂಭಿಸಿದ್ದಾರೆ. ನಟಿಯ ಆರೋಗ್ಯದಲ್ಲಿ ಚೇತರಿಕೆಯನ್ನು ಖಚಿತಪಡಿಸಿಕೊಂಡ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಅಲ್ಲದೇ ತಮ್ಮ ಮೆಚ್ಚಿನ ನಟಿಯನ್ನು ಶೀಘ್ರವೇ ತೆರೆ ಮೇಲೆ ನೋಡಲು ಕಾತರರಾಗಿದ್ದಾರೆ.

ಆರ್ಯ ವೆಬ್​ ಸೀರಿಸ್​ನಲ್ಲಿ ನಟಿ ಸುಶ್ಮಿತಾ ಸೇನ್ ಆ್ಯಕ್ಷನ್​ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಆರ್ಯ ಸೀಸನ್ 3' ಸೆಟ್‌ಗೆ ಮರಳಿದ ಬಗ್ಗೆ ಮಾತನಾಡಿದ ಸುಶ್ಮಿತಾ, "ಆರ್ಯ ಶಕ್ತಿಗಾಗಿ ನಿಂತಿದ್ದಾಳೆ ಮತ್ತು ಅವಳ ಮನೋಭಾವ ಸದ್ಯ ನನ್ನ ಅವಿಭಾಜ್ಯ ಭಾಗವಾಗಿದೆ. ಆರ್ಯ ಜೊತೆಯಲ್ಲಿ, ನಾನು ಸಂಪೂರ್ಣ ಹೊಸ ಪ್ರದೇಶಕ್ಕೆ ಕಾಲಿಟ್ಟಿದ್ದೇನೆ. ನಾವು ಹಿಂದೆಂದೂ ಮಾಡದಿರುವುದನ್ನು ಪ್ರಯತ್ನಿಸುವ ಸಮಯ ಬಂದಿದೆ. ಆರ್ಯ ಮೂರನೇ ಅಧ್ಯಾಯದೊಂದಿಗೆ, ಪ್ರೇಕ್ಷಕರು ಅವಳನ್ನು ನೋಡುತ್ತಾರೆ. ನಿರ್ಭೀತ ತಾಯಿ, ಮಗಳು ಮತ್ತು ಮಹಿಳೆಯಾಗಿ ಸಂಪೂರ್ಣ ಆ್ಯಕ್ಷನ್​ ಅವತಾರದಲ್ಲಿ ಬರಲಿದೆ. ನನ್ನ ಪಾತ್ರದ ಈ ಹೊಸ ಭಾಗಕ್ಕೆ ಧುಮುಕಲು ನಾನು ಉತ್ಸುಕಳಾಗಿದ್ದೇನೆ ಎಂದು ತಿಳಿಸಿದ್ದಾರೆ.

ನಟಿ ಸುಶ್ಮಿತಾ ಸೇನ್

'ಆರ್ಯ' ಸುಶ್ಮಿತಾ ಸೇನ್ ಅವರ ಪುನರಾಗಮನವನ್ನು ಗುರುತಿಸುತ್ತದೆ. ಇದು ಅವರ ಚೊಚ್ಚಲ ವೆಬ್​ ಸೀರಿಸ್. 2020ರ ಜೂನ್​ನಲ್ಲಿ 'ಆರ್ಯ' ಮೂಲಕ ಚಿತ್ರರಂಗಕ್ಕೆ ಕಮ್​ ಬ್ಯಾಕ್​ ಮಾಡಿದರು. ಸದ್ಯ ಸೀಸನ್​ 3 ಶೂಟಿಂಗ್​ ಚುರುಕುಗೊಂಡಿದೆ. ಈ ಸರಣಿಯಲ್ಲಿ ನಟಿ ಕಠಿಣ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಾರೆ. ಪಾತ್ರಧಾರಿ ತಮ್ಮ ಕುಟುಂಬವನ್ನು ರಕ್ಷಿಸಲು ಪಣ ತೊಡುತ್ತಾರೆ. ಗಡಿಗಳನ್ನು ಮೀರಿ ಹೋಗುತ್ತಾರೆ. ಮೊದಲ ಸೀಸನ್ ಅಂತಾರಾಷ್ಟ್ರೀಯ ಎಮ್ಮಿ ಅವಾರ್ಡ್ಸ್​​ನಲ್ಲಿ 'ಅತ್ಯುತ್ತಮ ನಾಟಕ' ವಿಭಾಗಕ್ಕೆ ನಾಮನಿರ್ದೇಶನಗೊಂಡಿತ್ತು.

ರಾಮ್ ಮಾಧವಾನಿ ನಿರ್ದೇಶನದ ಈ ಸರಣಿಯಲ್ಲಿ ನಮಿತ್ ದಾಸ್, ಮನೀಶ್ ಚೌಧರಿ, ಸಿಕಂದರ್ ಖೇರ್ ಮತ್ತು ವಿನೋದ್ ರಾವತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್ಯ ಎರಡನೇ ಸೀಸನ್ ಡಿಸೆಂಬರ್ 2021ರಲ್ಲಿ ಬಿಡುಗಡೆಯಾಯಿತು. ಸದ್ಯ ನಿರ್ಮಾಣ ಹಂತದಲ್ಲಿರುವ ಮೂರನೇ ಸೀಸನ್‌ನ ಬಿಡುಗಡೆಯ ದಿನಾಂಕವನ್ನು ತಯಾರಕರು ಇನ್ನೂ ಬಹಿರಂಗಪಡಿಸಿಲ್ಲ. ಈ ಸರಣಿಯು ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತದೆ. ಇದಲ್ಲದೇ, ಸುಶ್ಮಿತಾ ಅವರು 'ತಾಲಿ' ಶೀರ್ಷಿಕೆಯ ಹೊಸ ವೆಬ್ ಸರಣಿಯಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ತೃತೀಯಲಿಂಗಿ ಕಾರ್ಯಕರ್ತೆ ಗೌರಿ ಸಾವಂತ್ ಪಾತ್ರಕ್ಕೆ ಜಿವ ತುಂಬುತ್ತಿದ್ದಾರೆ.

ಇದನ್ನೂ ಓದಿ:KKBKKJ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ: ಮಂಗಳೂರಿಗೆ ಬಂದು ಹೆಬ್ಬಲಸು, ಏಡಿ ಸುಕ್ಕ ಸವಿದ ಪೂಜಾ ಹೆಗ್ಡೆ

ಮಾರ್ಚ್​ ತಿಂಗಳ ಆರಂಭದಲ್ಲಿ ಸುಶ್ಮಿತಾ ಸೇನ್ ಹೃದಯಾಘಾತಕ್ಕೆ ಒಳಗಾಗಿದ್ದರು. ಸೂಕ್ತ ಚಿಕಿತ್ಸೆ ಪಡೆದು, ಭಯ ಪಡುವ ಅಗತ್ಯ ಇಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು. ಬಳಿಕ ಕೆಲ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆದರು. ಇದೀಗ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ:ಒಟ್ಟಿಗೆ ಕಾಣಿಸಿಕೊಂಡ ರೂಮರ್ ಲವ್​ ಬರ್ಡ್ಸ್​ ವಿಜಯ್ ವರ್ಮಾ ತಮನ್ನಾ ಭಾಟಿಯಾ

ABOUT THE AUTHOR

...view details