ಕರ್ನಾಟಕ

karnataka

ETV Bharat / entertainment

ಥಾಯ್ಲೆಂಡ್‌ನಲ್ಲಿ ಬಾಕ್ಸಿಂಗ್​ ಚಾಂಪಿಯನ್‌ ಆದ 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್‌

'ಕನ್ನಡತಿ' ಧಾರಾವಾಹಿ, 'ರೋನಿ' ಸಿನಿಮಾದಲ್ಲಿ ನಟಿಸಿರುವ ಕಿರಣ್ ರಾಜ್ ಅವರು ಥಾಯ್ಲೆಂಡ್‌ನಲ್ಲಿ ನಡೆದ ಬೇಕೆಮ್ ಮುಯ್ಥಯಿ ಬಾಕ್ಸಿಂಗ್​ನಲ್ಲಿ ಚಾಂಪಿಯನ್ ಆಗಿದ್ದಾರೆ.

By ETV Bharat Karnataka Team

Published : Jan 15, 2024, 11:44 AM IST

kannadathi seria  ronny movie  kiran raj  muathai champion  ಥೈಲ್ಯಾಂಡ್ ಮುಯ್ಥಯಿ ಬಾಕ್ಸಿಂಗ್  ಕಿರಣ್ ರಾಜ್  ಬಾಕ್ಸಿಂಗ್​ನಲ್ಲಿ ಚಾಂಪಿಯನ್
ಥೈಲ್ಯಾಂಡ್ ಮುಯ್ಥಯಿ ಬಾಕ್ಸಿಂಗ್​ನಲ್ಲಿ ಗೆದ್ದು ಬಿಗಿದ ‘ಕನ್ನಡತಿ’ ಕಿರಣ್ ರಾಜ್

ಕಿರುತೆರೆಯ 'ಕನ್ನಡತಿ' ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದ ನಟ ಕಿರಣ್ ರಾಜ್ ಸಿನಿಮಾದಲ್ಲೂ ಮೋಡಿ ಮಾಡುತ್ತಿರುವ ಪ್ರತಿಭೆ. 'ಬಡ್ಡೀಸ್' ಚಿತ್ರದ ಬಳಿಕ ಇವರು 'ರಾನಿ' ಎಂಬ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಜೊತೆಗೆ ಲವ್ ಸ್ಟೋರಿ ಹೊಂದಿರುವ ಚಿತ್ರ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಕಿರಣ್ ರಾಜ್ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ ರಾನಿ ಟೈಟಲ್ ಬಿಡುಗಡೆ ಮಾಡಿ ಗಮನ ಸೆಳೆದಿದ್ದರು. ಹಿಮಾಚಲ ಪ್ರದೇಶಕ್ಕೆ ತೆರಳಿ, ಸೋಲೋ ಪ್ಯಾರಾ ಗ್ಲೈಡಿಂಗ್ ಮಾಡುವ ಮೂಲಕವೂ ಸುದ್ದಿಯಾಗಿದ್ದರು. ಇದೀಗ ಮತ್ತೊಂದು ಸಾಹಸ ಮಾಡಿದ್ದಾರೆ‌. ಥಾಯ್ಲೆಂಡ್‌​ನ ಪಟ್ಟಾಯದಲ್ಲಿ ರೇಜ್‌ ಫೈಟ್‌ ಕ್ಲಬ್‌ (Rage Fight Club) ಆಯೋಜಿಸಿದ್ದ ಮುಯ್ಥಯಿ (Muayathai) ಬಾಕ್ಸಿಂಗ್ ಪಂದ್ಯದಲ್ಲಿ ವಿಜೇತರಾಗಿದ್ದಾರೆ.

ಕಿರಣ್ ರಾಜ್

ಇದೊಂದು ಅಂತಾರಾಷ್ಟ್ರೀಯ ಕೂಟವಾಗಿದ್ದು, ವಿವಿಧ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಕಿರಣ್ ರಾಜ್ ಇದಕ್ಕಾಗಿ ಎರಡು ತಿಂಗಳು ಜಾನಿ ಟೆಲ್ಲೊ ಅವರಿಂದ ತರಬೇತಿ ಪಡೆದಿದ್ದರು. ಇದೀಗ ಮುಯ್ಥಯಿ ಗೆದ್ದ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗುರುತೇಜ್ ಶೆಟ್ಟಿ ನಿರ್ದೇಶನದ 'ರಾನಿ'ಯಲ್ಲಿ ಕಿರಣ್ ರಾಜ್ ಮಾಸ್ ಲುಕ್‌ನಲ್ಲಿ ಅಭಿನಯಿಸಿದ್ದಾರೆ. ಟೀಸರ್, ಪೋಸ್ಟರ್‌ನಿಂದ ಭಾರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರಕ್ಕೆ ಟಿ ಸೀರಿಸ್ ಜೊತೆಯಾಗಿದೆ. ಮಣಿಕಾಂತ್ ಕದ್ರಿ ಐದು ಹಾಡುಗಳನ್ನು ಸಂಯೋಜಿಸಿದ್ದಾರೆ. 'ಕಾಂತಾರ' ಖ್ಯಾತಿಯ ಪ್ರಮೋದ್ ಮರವಂತೆ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ಕುನಾಲ್ ಗಾಂಜಾವಾಲ, ಹಂಸಿಕ ಐಯ್ಯರ್, ಶ್ವೇತಾ ಮೋಹನ್ ಅವರಂತಹ ಹೆಸರಾಂತ ಗಾಯಕರು ಹಾಡುಗಳನ್ನು ಹಾಡಿದ್ದಾರೆ.

ಕಿರಣ್ ರಾಜ್

ರವಿಶಂಕರ್‌, ಮೈಕೋ ನಾಗರಾಜ್‌, ನಾಗತಿಹಳ್ಳಿ ಚಂದ್ರಶೇಖರ್‌, ಬಿ.ಸುರೇಶ್‌, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್‌ ಹೆಗ್ಡೆ, ಪೃಥ್ವಿರಾಜ್‌, ಯಶ್‌ ಶೆಟ್ಟಿ, ಉಮೇಶ್‌, ಸುಜಯ್‌ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್‌ ಮಲಾನಿ, ಅನಿಲ್‌, ಧರ್ಮೇಂದ್ರ ಅರಸ್‌, ಮನಮೋಹನ ರೈ ಮೊದಲಾದವರು ನಟಿಸಿದ್ದಾರೆ. ಸದ್ಯ ಚಿತ್ರೀಕರಣ ಮುಗಿದಿದೆ. ಯುಗಾದಿ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಂದ್ರಕಾಂತ್ ಪೂಜಾರಿ ಉಮೇಶ ಹೆಗ್ಡೆ ನಿರ್ಮಾಣದ ಚಿತ್ರಕ್ಕೆ ಗುರುತೇಜ್ ಶೆಟ್ಟಿ ನಿರ್ದೇಶನವಿದೆ.

ಕಿರಣ್ ರಾಜ್

ಇದನ್ನೂ ಓದಿ:'ರಾನಿ' ಶೂಟಿಂಗ್​ ಮುಕ್ತಾಯ​: ವಿಷ್ಣು ಸ್ಮಾರಕದ ಮುಂದೆ ಕುಂಬಳಕಾಯಿ ಹೊಡೆದ ಚಿತ್ರತಂಡ

ABOUT THE AUTHOR

...view details