ಕರ್ನಾಟಕ

karnataka

By ETV Bharat Karnataka Team

Published : Sep 21, 2023, 2:14 PM IST

ETV Bharat / entertainment

'ಸಪ್ಲೈಯರ್ ಶಂಕರ'ನ ಪ್ರೇಮಗೀತೆಗೆ ರೀಲ್ಸ್​ ಮಾಡಿ ಬಂಪರ್​ ಬಹುಮಾನ ಗೆಲ್ಲಿ

'ಸಪ್ಲೈಯರ್ ಶಂಕರ' ಸಿನಿಮಾದ 'ಮಾಡೊ ಕೆಲಸವ ನೀನು ಮರೆಸಿದೆ..' ಪ್ರೇಮಗೀತೆಗೆ ರೀಲ್ಸ್​ ಮಾಡಿ, ಬಹುಮಾನ ಗೆಲ್ಲಿ..

Reels to the love song of Supplier Shankar and win a cash prize
'ಸಪ್ಲೈಯರ್ ಶಂಕರ'ನ ಪ್ರೇಮಗೀತೆಗೆ ರೀಲ್ಸ್​ ಮಾಡಿ ಬಂಪರ್​ ಬಹುಮಾನ ಗೆಲ್ಲಿ

ಬಣ್ಣದ ಲೋಕದಲ್ಲಿ ಒಂದು ಸಿನಿಮಾ ಮಾಡಿ ಅದನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ‌ ಮಾಡಲು ಆ ಚಿತ್ರದ ನಿರ್ದೇಶಕ ಹಾಗೂ ಚಿತ್ರತಂಡ ವಿಭಿನ್ನ ರೀತಿಯಲ್ಲಿ ಪ್ರಚಾರಕ್ಕೆ ಕೈ ಹಾಕುತ್ತಾರೆ. ಅದೇ ರೀತಿ ಯುವ ನಟ ನಿಶ್ಚಿತ್ ಕೊರೋಡಿ ಹಾಗೂ ದೀಪಿಕಾ ಆರಾಧ್ಯ ಅಭಿನಯದ 'ಸಪ್ಲೈಯರ್ ಶಂಕರ' ಚಿತ್ರತಂಡ ಸಿನಿಮಾ ಪ್ರೇಮಿಗಳಿಗೆ ಭರ್ಜರಿ ಆಫರ್​ವೊಂದನ್ನು ನೀಡಿದೆ. ಇತ್ತೀಚೆಗೆ ಈ ಚಿತ್ರದ 'ಮಾಡೊ ಕೆಲಸವ ನೀನು ಮರೆಸಿದೆ..' ಹಾಡು ಬಿಡುಗಡೆ ಆಗಿತ್ತು. ಈ ಹಾಡಿನಲ್ಲಿ ದೀಪಿಕಾ ಆರಾಧ್ಯ ಜೊತೆ ನಿಶ್ಚಿತ್ ರೊಮ್ಯಾನ್ಸ್ ಮಾಡಿದ್ದಾರೆ.

ಪ್ರಮೋದ್ ಮರವಂತೆ ಬರೆದಿರುವ ಈ ಪ್ರೇಮಗೀತೆ ನಕುಲ್ ಅಭಯಂಕರ್ ಹಾಗೂ ಐಶ್ವರ್ಯ ರಂಗರಾಜನ್ ಅವರ ಕಂಠದಲ್ಲಿ ಸುಮಧುರವಾಗಿ ಮೂಡಿಬಂದಿದ್ದು, ಆರ್ ಬಿ ಭರತ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆಯಾದ ತಕ್ಷಣದಿಂದಲೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ರೀಲ್ಸ್​ ಮಾಡಿ, ಬಹುಮಾನ ಗೆಲ್ಲಿ: ಈಗ ಈ ಹಾಡಿಗೆ ಆಸಕ್ತರು ರೀಲ್ಸ್ ಮಾಡಬಹುದು. ಯಾರ ರೀಲ್ಸ್​ಗೆ ಹೆಚ್ಚು ವೀಕ್ಷಣೆ ಹಾಗೂ ಮೆಚ್ಚುಗೆ ಬರುವುದೋ, ಅವರಿಗೆ ಚಿತ್ರತಂಡದಿಂದ I PHONE 15 ಮೊಬೈಲ್ ಸಿಗಲಿದೆ. ಯಾರು ಚೆನ್ನಾಗಿ ರೀಲ್ಸ್ ಮಾಡುತ್ತಾರೋ ಅವರಿಗೆ ಐಫೋನ್​ ಸಿಗಲಿದೆ. ಹೊಸ ಜನರೇಷನ್ ಐಫೋನ್ ಇದಾಗಿದ್ದು ಒಂದೂವರೆ ಲಕ್ಷ ರೂಪಾಯಿ ಬೆಲೆ ಬಾಳುತ್ತೆ. ಆಸಕ್ತರು ಈ ಕೆಳಗಿನ ನಿಯಮಗಳನ್ನು ಅನುಸರಿಸಿ.

1. Create Reel using Audio from Instagram “Mado Kelasava Neenu”
2. Follow @trinethra_films Instagram page.
3. Subscribe to Trinethra films YouTube Channel.
4. Use hashtag #MaadoKelasavaNeenuMareside and #SupplierShankara and tag @trinethra_films @aanandaaudio

ಸಪ್ಲೈಯರ್ ಶಂಕರ ಚಿತ್ರಕಥೆ: ಇದು ಬಾರ್​ ಸಪ್ಲೈಯರ್​ ಸುತ್ತ ನಡೆಯುವ ಕಥೆಯಾಗಿದೆ. ನಿಶ್ಚಿತ್ ಕರೋಡಿ ಈ ಚಿತ್ರದಲ್ಲಿ ಸಪ್ಲೈಯರ್ ಶಂಕರನಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕ ರಂಜಿತ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಲವ್, ಕಾಮಿಡಿ, ತಾಯಿ-ಮಗನ ಸೆಂಟಿಮೆಂಟ್ ಜೊತೆಗೆ ಸಸ್ಪೆನ್ ಥ್ರಿಲ್ಲರ್ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಸತೀಶ್ ಕುಮಾರ್ ಛಾಯಾಗ್ರಹಣ , ಸತೀಶ್ ಚಂದ್ರಯ್ಯ ಅವರ ಸಂಕಲನ ಹಾಗೂ ಬಾಲಾಜಿ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ.ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿದ್ದಾರೆ. ಚಿತ್ರವು ಈ ವರ್ಷ ತೆರೆ ಕಾಣಲಿದೆ.

ಇದನ್ನೂ ಓದಿ:'ಸಪ್ಲೈಯರ್​ ಶಂಕರ' ಪ್ರೇಮಗೀತೆಗೆ ದೀಪಿಕಾ ಜೊತೆ ನಿಶ್ಚಿತ್​ ರೊಮ್ಯಾನ್ಸ್​

ABOUT THE AUTHOR

...view details