ಕರ್ನಾಟಕ

karnataka

ETV Bharat / entertainment

'Guntur Kaaram' ಶೂಟಿಂಗ್​ ಪೂರ್ಣಗೊಳಿಸಿದ ಮೀನಾಕ್ಷಿ ಚೌಧರಿ.. ಮಹೇಶ್​ ಬಾಬು ಬಗ್ಗೆ ನಟಿ ಹೇಳಿದ್ದೇನು?

ನಟಿ ಮೀನಾಕ್ಷಿ ಚೌಧರಿ 'ಗುಂಟೂರು ಖಾರಂ' ವೇಳಾಪಟ್ಟಿಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ.

By

Published : Jul 17, 2023, 7:59 PM IST

Guntur Kaaram
'ಗುಂಟೂರು ಖಾರಂ'

'ಗುಂಟೂರು ಖಾರಂ' ಸೌತ್​ ಸಿನಿಮಾ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ. ಟಾಲಿವುಡ್​​ ಸೂಪರ್​ ಸ್ಟಾರ್​ ಮಹೇಶ್ ಬಾಬು, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದಲ್ಲಿ ಮೂಡಿ ಬರುತ್ತಿರುವ 'ಗುಂಟೂರು ಖಾರಂ' ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಕಾಸ್ಟಿಂಗ್​, ರಿಲೀಸ್​ ಡೇಟ್, ಕಥೆ, ಸಂಗೀತ ನಿರ್ದೇಶಕ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇದೆ. ಇಷ್ಟು ದಿನ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸಿನಿಮಾದ ಬಗ್ಗೆ ಪಾಸಿಟಿವ್​ ವೈಬ್​ ಸಿಕ್ಕಿದೆ.

ತೆಲುಗು ನಟಿ ಮೀನಾಕ್ಷಿ ಚೌಧರಿ ಈ ಸಿನಿಮಾಗೆ ಅಧಿಕೃತ ಸೇರ್ಪಡೆಯಾಗಿರುವುದು ಗೊತ್ತೇ ಇದೆ. ಸದ್ಯ ಅವರು 'ಗುಂಟೂರು ಖಾರಂ' ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ. ಚಿತ್ರದ ತಯಾರಕರು ಮೀನಾಕ್ಷಿ ಚೌಧರಿ ಅವರನ್ನು ಎರಡನೇ ನಾಯಕಿಯಾಗಿ ಸ್ವಾಗತಿಸಿದ್ದಾರೆ. ಮೊದಲ ಸುತ್ತಿನ ಶೂಟಿಂಗ್​ ಮುಗಿಸಿರುವುದಾಗಿ ನಟಿ ತಿಳಿಸಿದ್ದಾರೆ. ಈ ಮೂಲಕ ಸಿನಿಮಾ ಅಪ್​ಡೇಟ್​ಗಾಗಿ ಕಾಯುತ್ತಿದ್ದ ಫ್ಯಾನ್ಸ್​ ಮುಖದಲ್ಲಿ ಸಂತಸದ ಹೊನಲು ಹರಿದಿದೆ.

ವರದಿಗಳ ಪ್ರಕಾರ, ಮೀನಾಕ್ಷಿ ಛೌಧರಿ 'ಗುಂಟೂರು ಖಾರಂ' ತಂಡವನ್ನು ಸೇರಲಿದ್ದಾರೆ. ಆದರೆ ನಟಿ ಪೂಜಾ ಹೆಗ್ಡೆ ಸ್ಥಾನಕ್ಕೆ ಮೀನಾಕ್ಷಿ ಚೌಧರಿ ಬರುತ್ತಿಲ್ಲ. ಶ್ರೀಲೀಲಾ ಅವರಿಗೆ ಆಫರ್ ಮಾಡಿದ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿತ್ತು. ನಟಿ ಶ್ರೀಲೀಲಾ 'ಗುಂಟೂರು ಖಾರಂ'ನಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕೆ ಶ್ರೀಲೀಲಾ ಜೀವ ತುಂಬಬೇಕೆಂದು ಚಿತ್ರ ತಯಾರಕರು ನಿರ್ಧರಿಸಿದ್ದಾರೆ. ಹಾಗಾಗಿ ಮೀನಾಕ್ಷಿ ಚೌಧರಿ ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯಷ್ಟೇ ಈವರೆಗೆ ತಿಳಿದಿತ್ತು.

ಇದನ್ನೂ ಓದಿ:'ಅವಳು ಚಂಡಮಾರುತದ ಮೊದಲು ಬರುವ ಗುಡುಗು': 'ಜವಾನ್​'ನಲ್ಲಿ ನಯನತಾರಾ ಲುಕ್​ ಹೀಗಿದೆ ನೋಡಿ..

ಬಳಿಕ ಮೀನಾಕ್ಷಿ ಅವರು ತಮ್ಮ ಮುಂಬರುವ ದ್ವಿಭಾಷಾ ಚಿತ್ರ 'ಹತ್ಯಾ' ಪ್ರಚಾರ ಕಾರ್ಯಕ್ರಮದಲ್ಲಿ ಚಿತ್ರದ ತಮ್ಮ ಪಾತ್ರವನ್ನು ದೃಢಪಡಿಸಿದರು. 'ಗುಂಟೂರು ಖಾರಂ' ಬಗ್ಗೆ ಪ್ರಶ್ನಿಸಿದಾಗ, "ನಾನು ಯಾವಾಗಲೂ ಮಹೇಶ್ ಬಾಬು ಅವರ ದೊಡ್ಡ ಅಭಿಮಾನಿ. ನಾವು ಮೊದಲ ಶೆಡ್ಯೂಲ್ ಅನ್ನು ಮುಗಿಸಿದ್ದೇವೆ ಮತ್ತು ನನ್ನ ಮೊದಲ ದಿನದ ಮೊದಲ ಶಾಟ್ ಮಹೇಶ್ ಬಾಬು ಅವರ ಜೊತೆಯಲ್ಲಿತ್ತು. ನಾನು ಕೃತಜ್ಞತೆಯನ್ನು ಮೀರಿದ್ದೆ" ಎಂದು ಹೇಳಿದ್ದಾರೆ.

ಮೀನಾಕ್ಷಿ ತಮ್ಮ ಮಾಡೆಲಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿ, ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2018 ಪ್ರಶಸ್ತಿಯನ್ನು ಮೊದಲ ರನ್ನರ್ ಅಪ್ ಆಗಿ ಗೆದ್ದರು. 2021 ರಲ್ಲಿ ಬಿಡುಗಡೆಯಾದ ತೆಲುಗು ಚಲನಚಿತ್ರ ಇಚಟ ವಾಹನಮುಲು ನಿಲುಪರಡು (Ichata Vahanamulu Niluparadu) ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ಅವರು ಮಿಸ್ಟರಿ ಥ್ರಿಲ್ಲರ್ 'ಹಿಟ್ : ದಿ ಫಸ್ಟ್ ಕೇಸ್‌'ನ ಸೀಕ್ವೆಲ್​​ನ ನಾಯಕಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡರು.

ಮಹೇಶ್ ಬಾಬು ಅವರ 28ನೇ ಚಿತ್ರವಾಗಿರುವ 'ಗುಂಟೂರು ಖಾರಂ', ಜನವರಿ 13, 2024 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದ್ರೆ ಸಿನಿಮಾ ವಿಚಾರವಾಗಿ ಈಗಾಗಲೇ ಹಲವು ಬದಲಾವಣೆ ಆಗಿದ್ದು, ಸಿನಿಮಾ ವಿಳಂಬವಾಗುವ ಸಾಧ್ಯತೆ ಕೂಡ ಇದೆ. ಈ ಆ್ಯಕ್ಷನ್​ ಸಿನಿಮಾವನ್ನು ಎಸ್. ರಾಧಾ ಕೃಷ್ಣ ಅವರ ಬ್ಯಾನರ್ ಹಾರಿಕಾ & ಹಸ್ಸಿನ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ.

ಇದನ್ನೂ ಓದಿ:ಕುಟುಂಬದ ಮುದ್ದು ಫೋಟೋ ಹಂಚಿಕೊಂಡ ನಟ ಅಜಯ್ ದೇವಗನ್​​; ಇದಕ್ಕಿಂತ ಉತ್ತಮ ಸ್ಥಳ ಬೇಕೇ ಎಂದ ನಟ!

ABOUT THE AUTHOR

...view details