ಕರ್ನಾಟಕ

karnataka

By ETV Bharat Karnataka Team

Published : Sep 15, 2023, 10:19 PM IST

ETV Bharat / entertainment

ಸಿನಿಮಾಗಳ ಮುಹೂರ್ತ ಪೂಜೆಯಲ್ಲಿ ನಟ ಮಹೇಶ್​ ಬಾಬು ಭಾಗಿಯಾಗಲ್ಲ! ಯಾಕೆ ಗೊತ್ತೇ?

ಟಾಲಿವುಡ್​ ಸ್ಟಾರ್​ ನಟ ಮಹೇಶ್​​ ಬಾಬು ತಮ್ಮ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಹಾಜರಾಗುವುದೇ ಇಲ್ಲ. ಯಾಕೆ?

Mahesh babu
ಸಿನಿಮಾಗಳ ಮುಹೂರ್ತ ಪೂಜೆಯಲ್ಲಿ ನಟ ಮಹೇಶ್​ ಬಾಬು ಭಾಗಿಯಾಗಲ್ಲ! ಯಾಕೆ ಗೊತ್ತೇ?

'ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ' ಎಂಬ ಮಾತಿಗೆ ಟಾಲಿವುಡ್​ ಸ್ಟಾರ್​ ನಟ ಮಹೇಶ್​​ ಬಾಬು ಉತ್ತಮ ಉದಾಹರಣೆ. 48 ವರ್ಷ ವಯಸ್ಸಾಗಿದ್ದರೂ, ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಸದಾ ಮುಂದಿದ್ದಾರೆ. ಇವರ ಇತ್ತೀಚಿನ ಫೋಟೋಗಳನ್ನು ನೋಡಿದರೆ, ಈ ಸಂಗತಿ ನಿಮಗೆ ತಿಳಿಯಬಹುದು. ಸಿನಿಮಾ ಜೊತೆಗೆ ಫ್ಯಾಮಿಲಿಗೂ ಅಷ್ಟೇ ಟೈಮ್​ ಕೊಡುವ ನಟ ಇತ್ತೀಚೆಗೆ ಹೆಂಡತಿ ಮಕ್ಕಳ ಜೊತೆ ಟ್ರಿಪ್​ ಹೋಗಿದ್ದರು. ಇದೀಗ ಮತ್ತೆ ಅವರ ಬಹುನಿರೀಕ್ಷಿತ ಮುಂದಿನ ಸಿನಿಮಾ 'ಗುಂಟೂರು ಖಾರಂ' ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ.

ಆದರೆ ಇತ್ತೀಚಿನ ಇವರ ಕುರಿತಾದ ಇಂಟ್ರಸ್ಟಿಂಗ್​ ವಿಚಾರವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಬಾಲ ಕಲಾವಿದನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮಹೇಶ್​ ಬಾಬು ಈವರೆಗೆ ಸುಮಾರು 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಹಲವು ಸೂಪರ್​ ಹಿಟ್​ ಚಿತ್ರಗಳನ್ನು ತಮ್ಮ ಖಾತೆಯಲ್ಲಿ ಇಟ್ಟುಕೊಂಡಿರುವ ಮಹೇಶ್​ ತಮ್ಮ ವೃತ್ತಿಜೀವನದಲ್ಲಿ ಒಂದು ವಿಚಾರವನ್ನು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ಅವರು ತಮ್ಮ ಯಾವುದೇ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಹಾಜರಾಗುವುದೇ ಇಲ್ಲ.

ಅವರ ಇಡೀ ವೃತ್ತಿ ಜೀವನದಲ್ಲಿ ಈವರೆಗೆ ಯಾವುದೇ ಸಿನಿಮಾದ ಪೂಜಾ ಕಾರ್ಯಕ್ರಮಕ್ಕೂ ಅವರು ಹಾಜರಾಗಿದ್ದೇ ಇಲ್ಲ. ಅವರು ತಮ್ಮ ಮೊದಲ ಸಿನಿಮಾದಿಂದಲೂ ಇದೇ ರೂಢಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಮಹೇಶ್​ ಬಾಬು ಬದಲಿಗೆ ಅವರ ಪತ್ನಿ ನಮ್ರತಾ ಶಿರೋಡ್ಕರ್ ಅಥವಾ ಅವರ ಮಕ್ಕಳಾದ ಗೌತಮ್​ ಮತ್ತು ಸಿತಾರಾ ಸಿನಿಮಾಗಳ ಪೂಜಾ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ. ಆದರೆ ಮಹೇಶ್​ ಯಾಕಾಗಿ ಈ ಕ್ರಮವನ್ನು ಅನುಸರಿಸುತ್ತಿದ್ದಾರೆ ಎಂಬ ಕಾರಣ ಮಾತ್ರ ತಿಳಿದುಬಂದಿಲ್ಲ.

ಇದನ್ನೂ ಓದಿ:ರಾಜಮೌಳಿ - ಮಹೇಶ್​ ಬಾಬು ಕಾಂಬೋದ ಮುಂದಿನ ಸಿನಿಮಾದಲ್ಲಿ ಹಾಲಿವುಡ್​ ಸ್ಟಾರ್ಸ್!

ಸದ್ಯ ಮಹೇಶ್​​ ಬಾಬು ಗುಂಟೂರು ಖಾರಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತ್ರಿವಿಕ್ರಮ್​ ನಿರ್ದೇಶನದಲ್ಲಿ ಈ ಸಿನಿಮಾದಲ್ಲಿ ಟಾಲಿವುಡ್​ ಪ್ರಿನ್ಸ್​ ಫುಲ್​ ಮಾಸ್​ ಆಕ್ಷನ್​ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು 2024ರ ಜನವರಿ 24 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ನಾಯಕಿಯಾಗಿ ಕನ್ನಡದ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮೀನಾಕ್ಷಿ ಚೌಧರಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಆ್ಯಕ್ಷನ್​ ಸಿನಿಮಾವನ್ನು ಎಸ್. ರಾಧಾ ಕೃಷ್ಣ ಅವರ ಬ್ಯಾನರ್ ಹಾರಿಕಾ & ಹಸ್ಸಿನ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ.

ಇದರ ಹೊರತಾಗಿ ಆರ್​ಆರ್​ಆರ್​ ಖ್ಯಾತಿಯ ಎಸ್​ಎಸ್​ ರಾಜಮೌಳಿ ಜೊತೆಗೆ ಮಹೇಶ್​ ಬಾಬು ಕೈ ಜೋಡಿಸಲಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ. ರಾಜಮೌಳಿ ಜೊತೆಗಿನ ಮಹೇಶ್​ ಬಾಬು ಅವರ ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗುತ್ತಿದೆ. ಜೊತೆಗೆ ಇದೊಂದು ಆ್ಯಕ್ಷನ್​ ಅಡ್ವೆಂಚರ್​ ಸಿನಿಮಾ ಎನ್ನಲಾಗಿದೆ. ಗುಂಟೂರು ಖಾರಂ ಬಳಿಕ ಈ ಸಿನಿಮಾದ ಶೂಟಿಂಗ್​ ಆರಂಭಗೊಳ್ಳಲಿದೆ.

ಇದನ್ನೂ ಓದಿ:'ಕಿಂಗ್​ ಜೊತೆ ಕಿಂಗ್​​ ಸೈಜ್​ ಎಂಟರ್​​ಟೈನ್​ಮೆಂಟ್​ ಸಿನಿಮಾ': ಜವಾನ್​​ ಬಗ್ಗೆ ಮಹೇಶ್​ ಬಾಬು ಗುಣಗಾನ

ABOUT THE AUTHOR

...view details