ಕರ್ನಾಟಕ

karnataka

By

Published : Aug 11, 2023, 12:50 PM IST

ETV Bharat / entertainment

'ಸತ್ಯಕ್ಕೆ ದೂರವಾದ ವಿಚಾರ': ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ವದಂತಿ ಬಗ್ಗೆ ನಟ ವಿಶಾಲ್​ ಸ್ಪಷ್ಟನೆ

ಸ್ಟಾರ್​ ನಟಿ ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ಕುರಿತಾದ ವದಂತಿಗೆ ನಟ ವಿಶಾಲ್​ ಪ್ರತಿಕ್ರಿಯಿಸಿದ್ದಾರೆ.

vishal
ವಿಶಾಲ್​

ಕಾಲಿವುಡ್​ ಮೋಸ್ಟ್​ ಹ್ಯಾಂಡ್ಸಮ್​ ಬ್ಯಾಚುಲರ್​ ನಟ ವಿಶಾಲ್​ ಮದುವೆಯ ಬಗ್ಗೆ ಕೆಲವು ವದಂತಿಗಳು ಇತ್ತೀಚೆಗೆ ಕೇಳಿ ಬರುತ್ತಿದೆ. ತಮಿಳು ಸ್ಟಾರ್​ ನಟಿ ಲಕ್ಷ್ಮಿ ಮೆನನ್ ಜೊತೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿದೆ. ಈ ವಿಚಾರವಾಗಿ ಇದೀಗ ವಿಶಾಲ್​ ಪ್ರತಿಕ್ರಿಯಿಸಿದ್ದಾರೆ. ಇಲ್ಲ ಸಲ್ಲದ ವದಂತಿಗಳು ಲಕ್ಷ್ಮಿ ಮೆನನ್ ಮೇಲೆ ಹೆಚ್ಚು ಪರಿಣಾಮ ಬೀರುವ ಕಾರಣಕ್ಕಾಗಿ ಈ ವಿಚಾರವಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ವದಂತಿ ಬಗ್ಗೆ ವಿಶಾಲ್​ ಕ್ಲಾರಿಟಿ: ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ಕುರಿತಾದ ವದಂತಿಗೆ ಸೋಷಿಯಲ್​ ಮೀಡಿಯಾದ ಮೂಲಕ ವಿಶಾಲ್​ ಸ್ಪಷ್ಟನೆ ನೀಡಿದ್ದಾರೆ. "ಸಾಮಾನ್ಯವಾಗಿ ನಾನು ನನ್ನ ಬಗ್ಗೆ ಸುಳ್ಳು ಸುದ್ದಿ ಅಥವಾ ಇನ್ನಿತರ ವದಂತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ಇದು ಅನಗತ್ಯ ಎಂದು ನಾನು ಭಾವಿಸುತ್ತೇನೆ. ಆದರೆ ಇದೀಗ ಲಕ್ಷ್ಮಿ ಮೆನನ್ ಜೊತೆಗೆ ನನ್ನ ಮದುವೆಯ ಬಗ್ಗೆ ವದಂತಿಗಳಿವೆ. ಈ ವಿಚಾರವನ್ನು ಸಲೀಸಾಗಿ ಅಲ್ಲಗಳೆಯುತ್ತೇನೆ ಮತ್ತು ಇದು ಸತ್ಯಕ್ಕೂ ದೂರವಾದ ಸುದ್ದಿ" ಎಂದು ಹೇಳಿದ್ದಾರೆ.

ಅಲ್ಲದೇ, ಲಕ್ಷ್ಮಿ ಮೆನನ್​ ಜೊತೆಗಿನ ಮದುವೆ ವದಂತಿ ಬಗ್ಗೆ ಮೌನ ಮುರಿದ ಕಾರಣವನ್ನು ನಟ ಬಹಿರಂಗಪಡಿಸಿದ್ದಾರೆ. ಆಕೆ ಒಬ್ಬಳು ಹುಡುಗಿಯಾಗಿ ಅವಳ ಮೇಲೆ ಕೆಟ್ಟ ಇಮೇಜ್​ ಸೃಷ್ಟಿಯಾಗುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ವಿಚಾರವಾಗಿ ಮಾತನಾಡುತ್ತಿರುವುದಾಗಿ ಅವರು ಹೇಳಿದ್ದಾರೆ. "ಅವರೊಬ್ಬ ನಟಿ ಎನ್ನುವುದಕ್ಕಿಂತ ಹೆಚ್ಚಾಗಿ ಹುಡುಗಿ ಎಂಬ ಕಾರಣಕ್ಕೆ ಪ್ರತಿಕ್ರಿಯಿಸುತ್ತಿದ್ದೇನೆ. ಒಬ್ಬಳು ಹುಡುಗಿಯ ವೈಯಕ್ತಿಕ ಜೀವನದ ಬಗ್ಗೆ ಹೀಗೆಲ್ಲಾ ವದಂತಿ ಸೃಷ್ಟಿಸುತ್ತಾ ಅವರ ಖಾಸಗಿತನವನ್ನು ಆಕ್ರಮಿಸಿಕೊಳ್ಳುತ್ತಿದ್ದೀರಿ. ಇದು ನಟಿಯ ಇಮೇಜ್​ ಅನ್ನು ಹಾಳು ಮಾಡುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Vijay Deverakonda: ಕೊನೆಗೂ ಮದುವೆ ಬಗ್ಗೆ ಮಾತನಾಡಿದ ವಿಜಯ್​ ದೇವರಕೊಂಡ - ವಧು ಯಾರು?

ಜೊತೆಗೆ, 45 ವರ್ಷದ ನಟ ಸಮಯ ಬಂದಾಗ ಮದುವೆ ವಿಚಾರ ತಿಳಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಎಲ್ಲವನ್ನು ನಿರ್ಧರಿಸಲು ಇದು ಬರ್ಮುಡಾ ಟ್ರಯಾಂಗಲ್​ ಅಲ್ಲ ಎಂದಿದ್ದಾರೆ. "ವರ್ಷ, ದಿನಾಂಕ, ಸಮಯ ಮತ್ತು ಭವಿಷ್ಯದಲ್ಲಿ ನಾನು ಯಾರನ್ನು ಮದುವೆಯಾಗಲಿದ್ದೇನೆ ಎಂದು ನಿರ್ಧರಿಸಲು ಇದು ಬರ್ಮುಡಾ ಟ್ರಯಾಂಗಲ್​ ಅಲ್ಲ. ಸಮಯ ಬಂದಾಗ ಅಧಿಕೃತವಾಗಿ ನನ್ನ ಮದುವೆ ವಿಚಾರವನ್ನು ಪ್ರಕಟಿಸುತ್ತೇನೆ. ದೇವರು ಆಶೀರ್ವದಿಸಲಿ" ಎಂದು ಹೇಳಿದ್ದಾರೆ. ಈ ಮೂಲಕ ಲಕ್ಷ್ಮಿ ಮೆನನ್​ ಜೊತೆಗಿನ ಮದುವೆ ವದಂತಿಗೆ ವಿಶಾಲ್​ ತೆರೆ ಎಳೆದಿದ್ದಾರೆ.

ವಿಶಾಲ್​ ಮತ್ತು ಲಕ್ಷ್ಮಿ ಮೆನನ್ ಮದುವೆ ವದಂತಿ ಇತ್ತೀಚೆಗೆ ಪ್ರಾರಂಭವಾಯಿತು. ಇವರಿಬ್ಬರ ಆತ್ಮೀಯ ಸ್ನೇಹವು ಈ ಊಹಾಪೋಹಗಳನ್ನು ಸೃಷ್ಟಿಸಿತು. ಹಾಗಂತ ವಿಶಾಲ್​ ಮದುವೆಯ ವದಂತಿಗಳು ಕೇಳಿ ಬರುತ್ತಿರುವುದೇನು ಇದೇ ಮೊದಲಲ್ಲ. ಇದಕ್ಕೂ ಮುಂಚೆ, ನಾಡೋಡಿಗಳು ಚಿತ್ರದ ನಟಿ ಅಭಿನಯಾ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ವಿಚಾರವನ್ನು ವಿಶಾಲ್​ ಮತ್ತು ಅಭಿನಯಾ ಮುಕ್ತವಾಗಿ ನಿರಾಕರಿಸಿದ್ದರು.

ಇನ್ನೂ ವಿಶಾಲ್​ ಸಿನಿಮಾ ವಿಚಾರವಾಗಿ ನೋಡುವುದಾದರೆ, ನಿರ್ದೇಶಕ ಅಧಿಕ್​ ರವಿಚಂದ್ರನ್​ ಅವರ ಮುಂಬರುವ ಚಿತ್ರ ಮಾರ್ಕ್​ ಆಂಟೋನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ರಿತು ವರ್ಮಾ, ಎಸ್​ಜೆ ಸೂರ್ಯ ಮತ್ತು ಸೆಲ್ವರಾಘವನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಈ ವರ್ಷ ಸೆಪ್ಟೆಂಬರ್​ 15 ರಂದು ತೆರೆ ಕಾಣಲಿದೆ. ಇದಲ್ಲದೇ ಆಕ್ಷನ್​ ಪ್ರಾಕ್ಡ್​ ಥ್ರಿಲ್ಲರ್​ ಸಿನಿಮಾ ತುಪ್ಪರಿವಾಲನ್​ನಲ್ಲಿ ನಟಿಸಲಿದ್ದಾರೆ. ಇದನ್ನು ಮಿಸ್ಕಿನ್​ ಬರೆದು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:'ನಾನು ಈಗಾಗಲೇ ಮದುವೆಯಾಗಿದ್ದೇನೆ, ಅವನನ್ನು ತುಂಬಾ ಪ್ರೀತಿಸುತ್ತೇನೆ': ಫ್ಯಾನ್ಸ್​ಗೆ ಶಾಕ್​ ಕೊಟ್ಟ ರಶ್ಮಿಕಾ ಮಂದಣ್ಣ

ABOUT THE AUTHOR

...view details