ಕರ್ನಾಟಕ

karnataka

ಕಾಫಿ ವಿತ್ ಕರಣ್ ಇನ್ಮುಂದೆ ಪ್ರದರ್ಶನವಿಲ್ಲ.. ಭಾವನಾತ್ಮಕ ಸಂದೇಶ ಬರೆದ ನಿರೂಪಕ

By

Published : May 4, 2022, 3:00 PM IST

ಕರಣ್ ಜೋಹರ್ ಅವರ ಪ್ರಸಿದ್ಧ ಟಿವಿ ಶೋ, 'ಕಾಫಿ ವಿತ್ ಕರಣ್' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಪ್ರಕಟಣೆಯು ಅಭಿಮಾನಿಗಳನ್ನು ನಿರಾಶೆಗೊಳಿಸಿದೆ.

ಕಾಫಿ ವಿತ್ ಕರಣ್ ಇನ್ಮುಂದೆ ಪ್ರದರ್ಶನವಿಲ್ಲ... ಭಾವನಾತ್ಮಕ ಸಂದೇಶ ಬರೆದ ನಿರೂಪಕ
ಕಾಫಿ ವಿತ್ ಕರಣ್ ಇನ್ಮುಂದೆ ಪ್ರದರ್ಶನವಿಲ್ಲ... ಭಾವನಾತ್ಮಕ ಸಂದೇಶ ಬರೆದ ನಿರೂಪಕ

ಹೈದರಾಬಾದ್​: ಕಾಫಿ ವಿತ್ ಕರಣ್ ಪ್ರೇಕ್ಷಕರ ಮನದಲ್ಲಿ ಹೆಚ್ಚು ಹೆಸರುವಾಸಿಯಾಗಿತ್ತು. ಆದಾಗ್ಯೂ, ಆರು ಯಶಸ್ವಿ ಸೀಸನ್‌ಗಳ ನಂತರ ಪ್ರದರ್ಶನವು ಕೊನೆಗೊಂಡಿದೆ. ಚಲನಚಿತ್ರ ನಿರ್ಮಾಪಕ ಮತ್ತು ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, 'ಕಾಫಿ ವಿತ್ ಕರಣ್' ಮತ್ತೆ ಹಿಂತಿರುಗುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಕರಣ್ ಜೋಹರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. 'ಕಾಫಿ ವಿತ್ ಕರಣ್' ನನ್ನ ಮತ್ತು ನಿಮ್ಮ ಜೀವನದ ಭಾಗವಾಗಿದೆ. ನಾವು ಅದರ 6 ಸೀಸನ್‌ಗಳನ್ನು ಪೂರ್ಣಗೊಳಿಸಿದ್ದೇವೆ. ಈ ಕಾರ್ಯಕ್ರಮದ ಮೂಲಕ ನಾವು ಜನರ ಮೇಲೆ ಪ್ರಭಾವ ಬೀರಿದ್ದೇವೆ. ಮತ್ತು ಪಾಪ್ ಸಂಸ್ಕೃತಿಯ ವಾರ್ಷಿಕಗಳಲ್ಲಿ ಸ್ಥಾನವನ್ನು ಪಡೆದಿದ್ದೇವೆ. ಆದ್ದರಿಂದ, 'ಕಾಫಿ ವಿತ್ ಕರಣ್' ಇನ್ನು ಮುಂದೆ ಹಿಂತಿರುಗುವುದಿಲ್ಲ ಎಂದು ನಾನು ಭಾರವಾದ ಹೃದಯದಿಂದ ಇದನ್ನು ಘೋಷಿಸಲು ಬಯಸುತ್ತೇನೆ. ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಸ್ನೇಹಿತೆಯ ಮದುವೆಗೆ ತೆರಳಿ ವಿವಾದಕ್ಕೀಡಾದ ರಾಹುಲ್​ ಗಾಂಧಿ: ಇವರು ಯಾರು ಗೊತ್ತೇ?

ಶಾರುಖ್ ಖಾನ್, ಕಾಜೋಲ್, ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್, ಸಾರಾ ಅಲಿ ಖಾನ್, ಅರ್ಜುನ್ ಕಪೂರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ABOUT THE AUTHOR

...view details