ಕರ್ನಾಟಕ

karnataka

ಕೆಜಿಎಫ್ ತಾತ ಕೃಷ್ಣ ಜಿ ರಾವ್ ಆಸ್ಪತ್ರೆಗೆ ದಾಖಲು: ಐಸಿಯುವಿನಲ್ಲಿ ಚಿಕಿತ್ಸೆ

By

Published : Dec 1, 2022, 12:05 PM IST

ಕೆಜಿಎಫ್ ತಾತ ಎಂದೇ ಕರೆಸಿಕೊಳ್ಳುವ ನಟ ಕೃಷ್ಣ ಜಿ ರಾವ್ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ‌.‌

kgf-actor-krishna-rao-hospitalised-in-bengaluru
ಕೆಜಿಎಫ್ ತಾತ ಕೃಷ್ಣ ಜಿ ರಾವ್ ಆಸ್ಪತ್ರೆಗೆ ದಾಖಲು: ಐಸಿಯುವಿನಲ್ಲಿ ಚಿಕಿತ್ಸೆ

ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿ ಗಳಿಸಿ, ಕೆಜಿಎಫ್ ತಾತ ಎಂದೇ ಕರೆಸಿಕೊಳ್ಳುವ ಕೃಷ್ಣ ಜಿ ರಾವ್ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ‌.‌ ಬುಧವಾರ ಸಂಬಂಧಿಕರ ಮನೆಗೆ ಕೃಷ್ಣ ಅವರು ಹೋಗಿದ್ದರು ಎನ್ನಲಾಗಿದ್ದು, ಅಲ್ಲಿ ಸುಸ್ತು ಕಂಡುಬಂದ ಕಾರಣ ಮಧ್ಯರಾತ್ರಿ ಆಸ್ಪತ್ರೆಗೆ ‌ದಾಖಲಿಸಲಾಗಿದೆ.

ಸದ್ಯ ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಯ ಐಸಿಯುವಿನಲ್ಲಿ ಕೃಷ್ಣ ಜಿ ರಾವ್ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾದಲ್ಲಿನ ಪಾತ್ರವು ಕೃಷ್ಣ ಅವರಿಗೆ ದೊಡ್ಡಮಟ್ಟದ ಖ್ಯಾತಿ ತಂದುಕೊಟ್ಟಿದೆ.

ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೃಷ್ಣ ಜಿ ರಾವ್

ಕೆಜಿಎಫ್ ಯಶಸ್ಸಿನ ಬಳಿಕ ಕೃಷ್ಣಾಜಿರಾವ್ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಕೃಷ್ಣ ರಾವ್ ಆರೋಗ್ಯ ಸ್ಥಿರವಾಗಿದೆ ಅಂತಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:ಲೈಗರ್ ಹಣದ ಮೂಲ ತನಿಖೆ: ಇಡಿ ಕಚೇರಿಗೆ ಹಾಜರಾದ ನಟ ವಿಜಯ್ ದೇವರಕೊಂಡ

ABOUT THE AUTHOR

...view details