ಕರ್ನಾಟಕ

karnataka

ETV Bharat / entertainment

'ಹೃದಯಪೂರ್ವಕ ಧನ್ಯವಾದ ಕರ್ನಾಟಕ': ಕಾಟೇರ ಗೆಲುವಿಗೆ ದರ್ಶನ್ ಖುಷ್‌ - Darshan kaatera movie

Kaatera: 'ಕಾಟೇರ' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

Actor Darshan
ಚಾಲೆಂಜಿಂಗ್​ ಸ್ಟಾರ್ ದರ್ಶನ್​​

By ETV Bharat Karnataka Team

Published : Dec 31, 2023, 11:51 AM IST

2022ರಲ್ಲಿ 'ಕೆಜಿಎಫ್​ 2', 'ಕಾಂತಾರ', 'ವಿಕ್ರಾಂತ್​ ರೋಣ', 'ವೇದ' ಸೇರಿದಂತೆ ಕೆಲವು ಸಿನಿಮಾಗಳು ತೆರೆಕಂಡು ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ನೋಡುವಂತಾಯಿತು. ಸ್ಯಾಂಡಲ್​ವುಡ್​ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಕಂಟೆಂಟ್​, ಮೇಕಿಂಗ್​, ನಿರ್ದೇಶನದ ಶೈಲಿಗೆ ಪ್ರೇಕ್ಷಕರು ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತನಾಮರಿಂದ ಪ್ರಶಂಸೆಯ ಮಳೆ ಸುರಿಯಿತು. ಆದರೆ, 2023ರ ಕೊನೆವರೆಗೂ ಸ್ಟಾರ್ ನಟರ ಬಿಗ್​ ಪ್ರಾಜೆಕ್ಟ್​ಗಳು ತೆರೆಗೆ ಬರಲೇ ಇಲ್ಲ.

ಆರಂಭದಲ್ಲಿ 'ಕಬ್ಜ' ತೆರೆಕಂಡು ಒಂದು ಮಟ್ಟಿಗೆ ಸದ್ದು ಮಾಡಿದ್ದು ಬಿಟ್ಟರೆ, ಬೇರಾವುದೇ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಸಿಲ್ವರ್ ಸ್ಕ್ರೀನ್‌ನಲ್ಲಿ ರಾರಾಜಿಸಲಿಲ್ಲ. ಸ್ಯಾಂಡಲ್​ವುಡ್​​ ಮಟ್ಟಿಗೆ ತೆರೆಕಂಡ ಹಲವು ಚಿತ್ರಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಆದರೆ ಸೂಪರ್​ ಸ್ಟಾರ್​​ಗಳ ಬಿಗ್​ ಪ್ರಾಜೆಕ್ಟ್​ ಅನ್ನು ಸಿನಿಪ್ರಿಯರು ನಿರೀಕ್ಷಿಸಿದ್ದರು. ಅಂತೂ ಇಂತೂ 2023 ಕೊನೆಯಾಗುವ ಹೊತ್ತಿಗೆ ಬಂದ ಕಾಟೇರ ನಿರೀಕ್ಷೆ ಮೀರಿದ ಗೆಲುವು ಸಾಧಿಸಿದೆ.

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಮುಖ್ಯಭೂಮಿಕೆಯ ಕಾಟೇರ ಶುಕ್ರವಾರ ಚಿತ್ರಮಂದಿರ ಪ್ರವೇಶಿಸಿತು. ಗುರುವಾರ ಮಧ್ಯರಾತ್ರಿಯಿಂದಲೇ ಥಿಯೇಟರ್‌ಗಳ ಬಳಿ ಅಭಿಮಾನಿಗಳ ಹಬ್ಬಾಚರಣೆ ಶುರುವಾಗಿತ್ತು. ಬಹುನಿರೀಕ್ಷಿತ ಸಿನಿಮಾವನ್ನು ಸಿನಿಪ್ರಿಯರು ಅದ್ಧೂರಿಯಾಗಿ ಸ್ವಾಗತಿಸಿದ್ದರು. ಸಿನಿಮಾ ಬಹುತೇಕ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದೆ. ತೆರೆಕಂಡ ಮೊದಲ ದಿನವೇ 19 ಕೋಟಿ 75 ಲಕ್ಷ ರೂ. ಕಲೆಕ್ಷನ್​ ಮಾಡಿದೆ ಎಂದು ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಕಾಟೇರ ಎರಡು ದಿನಗಳಲ್ಲಿ ಸರಿಸುಮಾರು 40 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ವರದಿಗಳು ಹೇಳುತ್ತಿವೆ. ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ದರ್ಶನ್,​​​ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ದರ್ಶನ್​ ಪೋಸ್ಟ್: ''ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕ್ಕೆ ಕೊನೆಯೆಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ. ಮಾತು ಬರುತ್ತಿಲ್ಲ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್​ಗೆ ಫ್ಯಾನ್ಸ್ ಫಿದಾ; ಮೊದಲ ದಿನವೇ ​'ಕಾಟೇರ' ಭರ್ಜರಿ ಗಳಿಕೆ

ತರುಣ್ ಸುಧೀರ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ರಾಬರ್ಟ್ ಬಳಿಕ ತರುಣ್ ದರ್ಶನ್​ ಕಾಂಬೋದಲ್ಲಿ ಬಂದ ಮತ್ತೊಂದು ಚಿತ್ರವಿದು. ಹಿರಿಯ ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರ ಚೊಚ್ಚಲ ಚಿತ್ರವಿದು. ಮೊದಲ ಸಿನಿಮಾದಲ್ಲೇ ಇವರು ಸ್ಟಾರ್ ನಟನೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇನ್ನುಳಿದಂತೆ, ಜಗಪತಿ ಬಾಬು, ವಿನೋದ್ ಆಳ್ವಾ, ಅವಿನಾಶ್, ಕುಮಾರ ಗೋವಿಂದ್, ವೈಜನಾಥ್ ಬಿರಾದಾರ್, ಶ್ರುತಿ, ಪದ್ಮಾವಸಂತಿ, ಮಾಸ್ಟರ್ ಲೋಹಿತ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ:'ಕಿರಿಕ್​ ಪಾರ್ಟಿ'ಗೆ 7 ವರ್ಷ: ಜ.26ಕ್ಕೆ 'ಬ್ಯಾಚುಲರ್ ಪಾರ್ಟಿ'

ABOUT THE AUTHOR

...view details