ಕರ್ನಾಟಕ

karnataka

By

Published : Apr 18, 2023, 2:29 PM IST

Updated : Apr 18, 2023, 3:18 PM IST

ETV Bharat / entertainment

'ಬಿಸಿಲು ಕುದುರೆ'ಗೆ ಆ್ಯಕ್ಷನ್​ ಕಟ್ ಹೇಳಿದ ಸಾಹಿತಿ ಹೃದಯಶಿವ

ಬಿಸಿಲು ಕುದುರೆ ಸಿನಿಮಾದ ಹಾಡುಗಳು ಬಿಡುಗಡೆ ಆಗಿವೆ.

bisilu kudure
ಬಿಸಿಲು ಕುದುರೆ

ಕನ್ನಡ ಚಿತ್ರರಂಗದಲ್ಲಿ ಗೀತೆ ರಚನೆಕಾರರು ನಿರ್ದೇಶಕರಾಗೋದು ಹೊಸತೇನಲ್ಲ. ಈಗಾಗಲೇ ಸಾಕಷ್ಟು ಸಾಹಿತಿಗಳು ಡೈರೆಕ್ಟರ್ ಆಗಿ ಯಶಸ್ಸು ಸಹ ಕಂಡಿದ್ದಾರೆ. ಇದೀಗ ಮುಂಗಾರು ಮಳೆ, ಗಾಳಿಪಟ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಹಾಡು‌ ಬರೆದಿರುವ ಸಾಹಿತಿ ಹೃದಯಶಿವ ಬಿಸಿಲು ಕುದುರೆ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ಈಗಾಗಲೇ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಸಂಪತ್ ಮೈತ್ರೇಯ ಹಾಗೂ ಸುನೀತಾ ಅಭಿನಯಿಸಿರೋ ಬಿಸಿಲು ಕುದುರೆ ಸಿನಿಮಾಗೆ, ಹೃದಯಶಿವ ನಿರ್ದೇಶನ ಮಾಡಿದ್ದು, ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ಇತ್ತೀಚೆಗೆ ಈ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.

ಮೊದಲು ಮಾತನಾಡಿದ ನಿರ್ದೇಶಕ ಹೃದಯಶಿವ ಅವರು, ಕನ್ನಡ ಚಿತ್ರರಂಗದೊಂದಿಗೆ ನನಗೆ ಎರಡು ದಶಕಗಳ ನಂಟು. ಕನ್ನಡದ ಹಲವು ಚಿತ್ರಗಳಿಗೆ ಹಾಡು ಬರೆದಿದ್ದೇನೆ. ಕನ್ನಡದಲ್ಲಿ ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಅರುಣ್ಯದಂಚಿನಲ್ಲಿ ತುಂಡು ಭೂಮಿ ಹೊಂದಿರುವ ರೈತನ ಬವಣೆಯ ಕುರಿತಾದ ಚಿತ್ರವಿದು. ಒಂದೇ ಸರ್ಕಾರದಡಿ ಕಾರ್ಯ ನಿರ್ವಹಿಸುವ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದೇ ಹೋದಾಗ ಕಾಡಂಚಿನ ರೈತರ ಪಾಡು ಏನಾಗುತ್ತದೆ ಎಂಬುದೇ ಕಥಾಹಂದರ ಎಂದು ತಿಳಿಸಿದರು.

ಇಮ್ತಿಯಾಜ್ ಸುಲ್ತಾನ್ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳು ಹಾಗೂ ಮೂರು ಬೀಟ್ಸ್​​ಗಳು ಸುಮಧುರವಾಗಿ ಮೂಡಿ ಬಂದಿವೆ. ಅನೂಪ್ ಸೀಳಿನ್, ರವೀಂದ್ರ ಸೊರಗಾವಿ, ಇಮ್ತಿಯಾಜ್ ಸುಲ್ತಾನ್ ಹಾಡಿದ್ದಾರೆ. ಸಿನಿಮಾ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು. ಹೃದಯಶಿವ ಅವರು ನಿರ್ದೇಶನದ ಜೊತೆಗೆ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ.

ಇದನ್ನೂ ಓದಿ:ಸುಂದರ ಫೋಟೋಗಳಲ್ಲಿ ಶಾರುಖ್​ ಖಾನ್​ ಕುಟುಂಬ: 'ಪಠಾಣ್​ ಫ್ಯಾಮಿಲಿ' ಎಂದ ಫ್ಯಾನ್ಸ್

ಈ ಚಿತ್ರದಲ್ಲಿ ಸಂಪತ್ ಮೈತ್ರೇಯ ಮತ್ತು ಸುನೀತಾ ಮುಖ್ಯಭೂಮಿಕೆಯಲ್ಲಿದ್ದು, ಕರಿಸುಬ್ಬು, ಜೊಸೈಮನ್, ವಿಕ್ಟರಿ ವಾಸು, ವೆಂಕಟೇಶ್, ಭಾಸ್ಕರ್ ಸೂರ್ಯಣ ಮಳವಳ್ಳಿ ಸಾಯಿಕೃಷ್ಣ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಾಗಾರ್ಜುನ್ ಡಿ ಛಾಯಾಗ್ರಹಣವಿದ್ದು, ಬಿ.ಎಸ್ ಕೆಂಪರಾಜು ಈ ಚಿತ್ರಕ್ಕೆ ಸಂಕಲಕಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಟ್ರೇಲರ್​ನಿಂದ ಸದ್ದು ಮಾಡುತ್ತಿರುವ ಬಿಸಿಲು ಕುದುರೆ ಸಿನಿಮಾ ಇದೇ ಏಪ್ರಿಲ್ 21ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ:'ಪ್ರೀತಿಸಲು ನನಗೆ ಸಮಯವಿಲ್ಲ': ಶೆಹನಾಜ್ ಜೊತೆ ಡೇಟಿಂಗ್​​ ವದಂತಿಗೆ ರಾಘವ್ ಪ್ರತಿಕ್ರಿಯೆದ್ಯಂತ ಬಿಡುಗಡೆಯಾಗುತ್ತಿದೆ

ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಸಿನಿಮಾಗಳು ಮೂಡಿಬರುತ್ತಿವೆ. ಕಥೆಗೆ ಅಭಿಮಾನಿಗಳು ಮನ ಸೋಲುತ್ತಿದ್ದಾರೆ. ಎಲ್ಲವೂ ಹಿಟ್​ ಸಾಲಿಗೆ ಸೇರದಿದ್ದರೂ ಬಹುತೇಕ ಚಿತ್ರಗಳು ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಯಶಸ್ವಿ ಆಗುತ್ತವೆ. ಅದರಂತೆ ರೈತನ ಬವಣೆಯ ಕಥೆಯನ್ನು ಸಾರುವ ಈ ಬಿಸಿಲು ಕುದುರೆ ಚಿತ್ರ ಕೂಡ ಪ್ರೇಕ್ಷಕರನ್ನು ತಲುಪಲಿದೆ ಅನ್ನೋದು ಚಿತ್ರತಂಡದ ವಿಶ್ವಾಸ. ಎಷ್ಟರ ಮಟ್ಟಿಗೆ ಈ ಸಿನಿಮಾ ಯಶಸ್ವಿ ಆಗಲಿದೆ ಅನ್ನೋದು ಇದೇ ಏಪ್ರಿಲ್ 21ರಂದು ತಿಳಿದು ಬರಲಿದೆ. ಚಿತ್ರ ತೆರೆಕಾಣಲು ದಿನಗಣನೆ ಆರಂಭಗೊಂಡಿದೆ.

Last Updated : Apr 18, 2023, 3:18 PM IST

ABOUT THE AUTHOR

...view details