ಕರ್ನಾಟಕ

karnataka

ತತ್ಸಮ ತದ್ಭವ ಚಿತ್ರತಂಡದಿಂದ 'ದೂರಿ ಲಾಲಿ ಚಾಲೆಂಜ್': ಗೆದ್ರೆ ಮೇಘನಾ ರಾಜ್ ಭೇಟಿಯಾಗುವ ಚಾನ್ಸ್

By

Published : Aug 16, 2023, 4:28 PM IST

Updated : Aug 16, 2023, 5:07 PM IST

Tatsama Tadbhava Movie: ತತ್ಸಮ ತದ್ಭವ ಚಿತ್ರತಂಡ ಎಲ್ಲಾ ತಾಯಂದಿರಿಗೆ 'ದೂರಿ ಲಾಲಿ ಚಾಲೆಂಜ್' ನೀಡಿದೆ. ಗೆದ್ದವರು ನಟಿ ಮೇಘನಾ ರಾಜ್ ಅವರನ್ನು ಭೇಟಿಯಾಗಬಹುದು.

Doori Laali challenge
ದೂರಿ ಲಾಲಿ ಚಾಲೆಂಜ್

ಕನ್ನಡ ಚಿತ್ರರಂಗದಲ್ಲಿ ಬಹು ಸಮಯದಿಂದ ಗುರುತಿಸಿಕೊಂಡಿರುವ ನಟಿ ಮೇಘನಾ ರಾಜ್ ಸಣ್ಣ ಬ್ರೇಕ್​ ಬಳಿಕ ಸಿನಿಮಾಗೆ ಮರಳಿದ್ದಾರೆ. ಪ್ರಮುಖ ಪಾತ್ರದಲ್ಲಿ ಮೇಘನಾ ರಾಜ್ ಅಭಿನಯಿಸಿದ್ದು, ವಿಶಾಲ್ ಆತ್ರೇಯ ನಿರ್ದೇಶನ ಮಾಡಿರುವ 'ತತ್ಸಮ ತದ್ಭವ' ಸ್ಯಾಂಡಲ್​​ವುಡ್​ನಲ್ಲಿ ಒಂದಲ್ಲೊಂದು ವಿಚಾರವಾಗಿ ಗಮನ‌ ಸೆಳೆಯುತ್ತಿದೆ. ಸಿನಿಪ್ರಿಯರು ಚಿತ್ರದ ಬಗ್ಗೆ ‌ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ದೂರಿ ಲಾಲಿ ಹಾಡು...: ಶೀರ್ಷಿಕೆಯಿಂದ ಕುತೂಹಲ ಹುಟ್ಟಿಸಿರುವ ತತ್ಸಮ ತದ್ಭವ ಚಿತ್ರ ಸಣ್ಣ ಟೀಸರ್​ನಿಂದ‌ ಭರವಸೆ ಹುಟ್ಟಿಸಿದೆ. ಇತ್ತೀಚೆಗೆ ಚಿತ್ರದ ಮೊದಲ ಹಾಡು 'ದೂರಿ ಲಾಲಿ' ಬೆಟೆಲ್​ (Betel) ಮ್ಯೂಸಿಕ್​ ಯೂಟ್ಯೂಬ್ ಚಾನೆಲ್​ ಮೂಲಕ ಬಿಡುಗಡೆ ಆಗಿದ್ದು, ಜನಮನ ಗೆಲ್ಲುತ್ತಿದೆ. ವಾಸುಕಿ ವೈಭವ್ ಹಾಡು ಬರೆದು, ಸಂಗೀತ ನೀಡಿದ್ದಾರೆ. ಸುನಿಧಿ ಗಣೇಶ್ ಹಾಡಿದ್ದಾರೆ. ಮೇಘನಾ ರಾಜ್ ಹಾಗೂ ಮಹತಿ ಅಭಿನಯಿಸಿದ್ದಾರೆ.

'ದೂರಿ ಲಾಲಿ ಚಾಲೆಂಜ್': ಹಾಡು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಅಮ್ಮಂದಿರಿಗೆ ಒಂದು ಚಾಲೆಂಜ್ ನೀಡಿದೆ. ಈಗಾಗಲೇ ಸಿನಿ ಪ್ರೇಮಿಗಳ, ಗಾನಪ್ರಿಯರ ಮನಸ್ಸು ಕದ್ದಿರುವ 'ದೂರಿ ಲಾಲಿ' ಹಾಡನ್ನು ಹಾಡುತ್ತಾ (ತಾಯಿಯರು) ತಮ್ಮ ಮಗುವನ್ನು ಹೇಗೆ ಮಲಗಿಸುತ್ತೀರಾ? ಎಂಬ ವಿಡಿಯೋವನ್ನು ನಿಮ್ಮ ಇನ್ಸ್ಟಾಗ್ರಾಮ್ ಮೂಲಕ ಈ ಕೆಳಕಂಡ ಐಡಿಗೆ ಟ್ಯಾಗ್​ ಮಾಡುವಂತೆ ತಿಳಿಸಿದೆ.

ಈ ಇನ್​ಸ್ಟಾಗ್ರಾಮ್​ ಐಡಿಗಳಿಗೆ ಟ್ಯಾಗ್ ಮಾಡಿ:ನಿಮ್ಮ ವಿಡಿಯೋಗಳನ್ನು @megsraj @prajwaldevaraj @pannagabharana @vishal.atreya @vasuki_vaibhav_ @pbstudios_productions @anvitcinemas @tatsamatadbhava @betelmusic.in ಇನ್​ಸ್ಟಾಗ್ರಾಮ್​ ಐಡಿಗಳಿಗೆ ಟ್ಯಾಗ್ ಮಾಡಬೇಕು. ಈ ವಿಡಿಯೋಗಳ ಪೈಕಿ ಮೂರನ್ನು ಆಯ್ಕೆ ಮಾಡಲಾಗುವುದು. ಆ ಮೂವರು ತಮ್ಮ ಮಕ್ಕಳೊಂದಿಗೆ ನಟಿ ಮೇಘನಾ ರಾಜ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಊಟ ಮಾಡುತ್ತಾ, ಮಾತುಕತೆ ನಡೆಸಬಹುದು ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ:'ಸಂಜು ವೆಡ್ಸ್ ಗೀತಾ 2' ಟೀಸರ್ ರಿಲೀಸ್​: ಅದ್ಭುತ ಪ್ರೇಮಕಥೆಯ ಶೂಟಿಂಗ್​ ಶುರು

ಪನ್ನಗ ಭರಣ‌, ಸ್ಫೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿಶಾಲ್ ಆತ್ರೇಯ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಸದ್ಯ ಹಾಡುಗಳಿಂದ ಸದ್ದು ಮಾಡುತ್ತಿರುವ ತತ್ಸಮ ತದ್ಭವ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ:ದುನಿಯಾ ವಿಜಯ್ ಅಭಿಮಾನಿಗಳೇ ರೆಡಿಯಾಗಿ - 'ಭೀಮ'ನ ದರ್ಶನಕ್ಕೆ‌ ಮುಹೂರ್ತ ಫಿಕ್ಸ್

ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಮೇಘನಾ ರಾಜ್:ಪ್ರೀತಿಸಿ, ಹಸೆಮಣೆ ಏರಿ ಮಾದರಿ ಜೀವನ ನಡೆಸಿದ ಸ್ಯಾಂಡಲ್​ವುಡ್​​ ಸೆಲೆಬ್ರಿಟಿ ಕಪಲ್​ ಪೈಕಿ ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ಕೂಡ ಓರ್ವರು. ಆದ್ರೆ ವಿಧಿಯಾಟಕ್ಕೆ ಚಿರು ಕಿರಿ ವಯಸ್ಸಿನಲ್ಲೇ ಕೊನೆಯುಸಿರೆಳೆದರು. ಬಹುಬೇಡಿಕೆಯ ನಟನ ಅಕಾಲಿಕ ಮರಣ ಕುಟುಂಬಸ್ಥರು, ಕನ್ನಡ ಚಿತ್ರರಂಗದವರು ಸೇರಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ನಟ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದ ವೇಳೆ ಮೇಘನಾ ರಾಜ್ ತುಂಬು ಗರ್ಭಿಣಿ. ಪತಿಯ ನಿಧನ, ಹೆರಿಗೆ, ಪುತ್ರನ ಆರೈಕೆ ಎಂದು ಬ್ಯುಸಿಯಾಗಿದ್ದ ನಟಿ ತತ್ಸಮ ತದ್ಭವ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ರೀ ಎಂಟ್ರಿ ಕೊಡುತ್ತಿದ್ದು, ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತಾರೆಂಬುದನ್ನು ಕಾದು ನೋಡಬೇಕಿದೆ.

Last Updated : Aug 16, 2023, 5:07 PM IST

ABOUT THE AUTHOR

...view details