ಕರ್ನಾಟಕ

karnataka

ETV Bharat / entertainment

ಹೊಸಬರ 'ಹೊಸ ದಿನಚರಿ'ಗೆ ಹಿರಿಯ ನಿರ್ದೇಶಕ ನಾಗಾಭರಣ ಬೆಂಬಲ - ಹೊಸ ದಿನಚರಿ ಪೋಸ್ಟರ್

ಹೊಸ ತಂಡದಿಂದ ನಿರ್ಮಾಣವಾಗಿರುವ 'ಹೊಸ ದಿನಚರಿ' ಸಿನಿಮಾದ ಟೀಸರ್, ಪೋಸ್ಟರ್ ಅನ್ನು ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

director t s nagabharana released hosa dinachari teaser
ಹೊಸಬರ 'ಹೊಸ ದಿನಚರಿ'ಗೆ ನಿರ್ದೇಶಕ ನಾಗಾಭರಣ ಸಪೋರ್ಟ್

By

Published : Oct 20, 2022, 4:47 PM IST

ಕನ್ನಡ ಚಿತ್ರರಂಗದಲ್ಲಿ ಹೊಸ ತಂಡದಿಂದ 'ಹೊಸ ದಿನಚರಿ' ಎಂಬ ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಪೋಸ್ಟರ್, ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಅವರು ಹೊಸ ದಿನಚರಿಯ ಸಿನಿಮಾದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಹೊಸ ದಿನಚರಿ ಪೋಸ್ಟರ್

ಕನ್ನಡ ಚಿತ್ರರಂಗದಲ್ಲಿ ಎರಡು ದಶಕಕ್ಕೊಮ್ಮೆ ಒಂದು ಬದಲಾವಣೆ ಆಗುತ್ತಿರುತ್ತದೆ. ಎಂಭತ್ತರಲ್ಲಿ, ಎರಡು ಸಾವಿರನೇ ಇಸವಿಯಲ್ಲಿ, ಈಗ ಎರಡು ಸಾವಿರದ ಇಪ್ಪತ್ತರಲ್ಲಿ. ಟೀಸರ್ ನೋಡಿದರೆ ಈ ತಂಡದಿಂದ ಒಳ್ಳೆಯ ಚಿತ್ರ ಬರುವ ನಿರೀಕ್ಷೆಯಿದೆ ಟಿ ಎಸ್ ನಾಗಾಭರಣ ಹೇಳಿದರು.

ಯುವ ನ‌ಟರಾದ ದೀಪಕ್ ಸುಬ್ರಹ್ಮಣ್ಯ ಹಾಗೂ ಚೇತನ್ ವಿಕ್ಕಿ, ನಟಿಯರಾದ ಮಂದಾರ ಹಾಗೂ ವರ್ಷ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ‌. ಇದರ ಜೊತೆಗೆ ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಮಂದಾರ, ವರ್ಷ, ಚೇತನ್ ವಿಕ್ಕಿ, ವಿವೇಕ್ ದೇವ್, ಶ್ರೀಪ್ರಿಯ, ಸುಪ್ರೀತಾ ಗೌಡ ಹಾಗೂ ಬೇಬಿ ಮಾನಿನಿ ತಾರಾ ಬಳಗದಲ್ಲಿದ್ದಾರೆ.

'ಹೊಸ ದಿನಚರಿ' ತಂಡ

ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ಜಂಟಿ ನಿರ್ದೇಶನ ಮಾಡಿದ್ದಾರೆ. ಎಲ್ಲರ ಜೀವನದಲ್ಲೂ ಪ್ರೀತಿ ಇದ್ದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ? ಎಂಬುದೇ 'ಹೊಸ ದಿನಚರಿ'ಯ ಕಥಾ ಸಾರಾಂಶವಂತೆ. ಚಿತ್ರ ತಂಡದ ಅನೇಕ ಸದಸ್ಯರು ಹೊಸಬರು. ಈ ಸಿನಿಮಾಗೆ ರಾಕಿ ಕ್ಯಾಮರಾ ವರ್ಕ್ ಮಾಡಿದ್ದು, ನಿರ್ಮಾಪಕ ಗಂಗಾಧರ ಸಾಲಿಮಠ ನಿರ್ಮಾಣ ಮಾಡಿದ್ದಾರೆ‌.

'ಹೊಸ ದಿನಚರಿ' ತಂಡ

ಇದನ್ನೂ ಓದಿ:ಕನ್ನಡ ರಾಜ್ಯೋತ್ಸವದಂದು ಪುನೀತ್‌ಗೆ ಮರಣೋತ್ತರ 'ಕರ್ನಾಟಕ ರತ್ನ ಪ್ರಶಸ್ತಿ' ಪ್ರದಾನ

ನಾನು ಈ ಹಿಂದೆ 'ಆಯನ' ನಿರ್ಮಿಸಿದ್ದೆ. ಇದು ಎರಡನೇ ಚಿತ್ರ.‌ ಕಥೆ ಇಷ್ಟವಾಯಿತು, ಹಾಗಾಗಿ ನಿರ್ಮಾಣ ಮಾಡಿದ್ದೇನೆ ಅಂತಾ ನಿರ್ಮಾಪಕ ಗಂಗಾಧರ ಸಾಲಿಮಠ ಹೇಳಿದರು. ಬಹುತೇಕ ಚಿತ್ರೀಕರಣ ಮುಗಿಸಿರೋ ಹೊಸ‌ ದಿನಚರಿ ಡಿಸೆಂಬರ್ 9ರಂದು ತೆರೆಗೆ ಬರಲು ಸಜ್ಜಾಗಿದೆ.

ABOUT THE AUTHOR

...view details