ಕರ್ನಾಟಕ

karnataka

ETV Bharat / entertainment

ಹೊಸ ಪ್ರತಿಭೆಗಳ 'ಬುದ್ಧ' ಫಸ್ಟ್ ಲುಕ್ ರಿಲೀಸ್​ - Buddha movie

ಹೊಸಬರ 'ಬುದ್ಧ' ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ.

Buddha first look release
'ಬುದ್ಧ' ಫಸ್ಟ್ ಲುಕ್ ರಿಲೀಸ್​

By

Published : Feb 15, 2023, 4:16 PM IST

ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಚಿತ್ರದ ಕಥೆ, ಮೇಕಿಂಗ್​, ತಾರಾಗಣ ಎಲ್ಲರ ಗಮನ ಸೆಳೆಯುತ್ತಿದೆ. ಕೆಜಿಎಫ್​, ಕಾಂತಾರ ಯಶಸ್ಸಿನ ಬಳಿಕ ಸ್ಯಾಂಡಲ್​ವುಡ್​ ವರ್ಚಸ್ಸು ​ಉತ್ತುಂಗಕ್ಕೇರಿದೆ. ಈ ಹಿನ್ನೆಲೆ ಇಡೀ ಭಾರತೀಯ ಚಿತ್ರರಂಗದ ಕಣ್ಣು ಕನ್ನಡ ಚಿತ್ರರಂದ ಮೇಲಿದೆ. ಈ ಮಧ್ಯೆ ಸ್ಯಾಂಡಲ್​ವುಡ್​ಗೆ ಪ್ರತಿಭಾನ್ವಿತ ನಿರ್ದೇಶಕರಿಂದ ಹಿಡಿದು ಯುವ ನಟ, ‌ನಟಿಯರ ಎಂಟ್ರಿ ಆಗುತ್ತಿದೆ. ಯಶಸ್ಸು ಕಾಣಬೇಕು ಎಂಬ ಗುರಿಯನ್ನಿಟ್ಟುಕೊಂಡು ಚಿತ್ರರಂಗಕ್ಕೆ ಅನೇಕರು ಎಂಟ್ರಿ ಕೊಡುತ್ತಾರೆ. ಕೆಲವರಿಗೆ ಈ ರಂಗ ಕೈ ಹಿಡಿಯುತ್ತದೆ.

'ಬುದ್ಧ' ಫಸ್ಟ್ ಲುಕ್ ರಿಲೀಸ್​

ಬುದ್ಧ ಚಿತ್ರದ ಫಸ್ಟ್ ಲುಕ್: ಇದೀಗ ಬುದ್ಧ ಅನ್ನೋ ಶೀರ್ಷಿಕೆಯೊಂದಿಗೆ ಹೊಸ ಚಿತ್ರ ತಂಡವೊಂದು ಚಂದನವನಕ್ಕೆ ಎಂಟ್ರಿ ಕೊಟ್ಟಿದೆ. ಮಹೇಶ್ ಬಾಬು ಎಂಬ ಯುವ ನಟ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ರಾಮ್ ಪೆರಿಯಸಾಮಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬುದ್ಧ ಚಿತ್ರದ ಫಸ್ಟ್ ಲುಕ್ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಆಗಿದೆ. ಚಿತ್ರದ ಫಸ್ಟ್ ಲುಕ್ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ.

'ಬುದ್ಧ' ಫಸ್ಟ್ ಲುಕ್ ರಿಲೀಸ್​

ಮೊದಲ ಹಂತದ ಚಿತ್ರೀಕರಣ ಮುಕ್ತಾಯ:ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಅಭಿನಯದ ಬಗ್ಗೆ ತರಬೇತಿ ಪಡೆದಿರುವ ಮಹೇಶ್ ಬಾಬು ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಮಹೇಶ್ ಜೋಡಿಯಾಗಿ ವಿದ್ಯಾರಾಜ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಾಶಿಯಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುವ ಯೋಜನೆ ಈ ಚಿತ್ರತಂಡಕ್ಕಿದೆ.

ಇದನ್ನೂ ಓದಿ:ಬಹುನಿರೀಕ್ಷಿತ ಜೂಲಿಯೆಟ್‌ 2 ಟ್ರೇಲರ್​ ರಿಲೀಸ್​: ಆ್ಯಕ್ಷನ್​ ಅವತಾರದಲ್ಲಿ ಬೃಂದಾ ಆಚಾರ್ಯ

ವಿಭಿನ್ನ ಕಥಾಹಂದರದ 'ಬುದ್ಧ':"ಬುದ್ಧ" ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಚಿತ್ರದಲ್ಲಿ ಕಳೆದು ಹೋದವರನ್ನು ನಾಯಕ ಹುಡುಕಿ ಕೊಡುತ್ತಾನೆ. ಈ ಚಿತ್ರದ ಕಥೆಯಲ್ಲಿ ನಾಯಕನೇ ಕಳೆದು ಹೋಗುತ್ತಾನೆ, ಮುಂದೇನು? ಎಂಬುದೇ ಕುತೂಹಲ ಎಂದು ಚಿತ್ರ ಕಥೆಯ ತಿರುಳನ್ನು ನಾಯಕ ಮಹೇಶ್ ಬಾಬು ವಿವರಿಸಿದರು. ಇದೊಂದು ಕೌಟುಂಬಿಕ ಚಿತ್ರ ಎಂದು ಸಹ ತಿಳಿಸಿದರು.

ಇದನ್ನೂ ಓದಿ:ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ!

ಬುದ್ಧ ಚಿತ್ರತಂಡ: ಚಿತದಲ್ಲಿ ಐದು ಹಾಡುಗಳಿವೆ. ಒಂದು ಹಾಡನ್ನು ಡಾ.ವಿ ನಾಗೇಂದ್ರ ಪ್ರಸಾದ್, ನಾಲ್ಕು ಹಾಡುಗಳನ್ನು ಚೇತನ್ ಕುಮಾರ್ ಬರೆಯತ್ತಿದ್ದಾರೆ. ರಾಘವೇಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ನಾಗ ಶೆಟ್ಟಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಹೇಶ್ ಬಾಬು, ವಿದ್ಯಾರಾಜ್ ಜೊತೆಗೆ ರಾಮಕೃಷ್ಣ (ತಮಿಳು), ತಬಲನಾಣಿ, ಸಿದ್ಲಿಂಗು ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರು ಈ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟಿ ಪವಿತ್ರ ಲೋಕೇಶ್ ಅವರು ಸಹ ಎರಡನೇ ಹಂತದ ಚಿತ್ರೀಕರಣದಲ್ಲಿ ನಟಿಸುವ ಸಾಧ್ಯತೆ ಇದೆ. ವರ್ತನ್​​ ಪಿಕ್ಚರ್ಸ್ ಲಾಂಛನದಲ್ಲಿ ಸುರೇಶ್ ಭಾರದ್ವಾಜ್ ಕನಕಪುರ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:ಮರುಮದುವೆ ಸಂತಸದಲ್ಲಿ ಹಾರ್ದಿಕ್ ಪಾಂಡ್ಯ ದಂಪತಿ: ಪುತ್ರನಿಗೆ ಪೋಷಕರ ವಿವಾಹ ನೋಡುವ ಭಾಗ್ಯ

ABOUT THE AUTHOR

...view details