ಕರ್ನಾಟಕ

karnataka

ETV Bharat / entertainment

ಬಾಲಿವುಡ್​ನಲ್ಲಿ ತಮಗಾದ ಮತ್ತೊಂದು ಕಹಿ ಘಟನೆ ಬಹಿರಂಗಪಡಿಸಿದ ನಟಿ ಪ್ರಿಯಾಂಕಾ ಚೋಪ್ರಾ - ಅಂಡರ್​ವೇರ್​ನಲ್ಲಿ ನೋಡಲು ಬಯಸಿದ್ದರು

ತಮ್ಮ ಆರಂಭಿಕ ಸಿನಿ ಜೀವನದಲ್ಲಿ ನಿರ್ದೇಶಕರು ಎಷ್ಟು ಅಮಾನವೀಯವಾಗಿ ವರ್ತಿಸಿದರು ಎಂಬ ಘಟನೆಯನ್ನು ಸಂದರ್ಶನದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ.

Actress Priyanka Chopra revealed another bitter incident of hers in Bollywood
Actress Priyanka Chopra revealed another bitter incident of hers in Bollywood

By

Published : May 24, 2023, 4:54 PM IST

ಮುಂಬೈ: ಗ್ಲೋಬಲ್​ ಐಕಾನ್​ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್​ನಲ್ಲಿ ತಮಗೆ ಆದಾ ಕಹಿ ಘಟನೆಗಳು ಕುರಿತು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಈ ಹಿಂದೆ ಹೇಗೆ ಬಾಲಿವುಡ್​ ತಮ್ಮನ್ನು ನಡೆಸಿಕೊಂಡಿತು ಎಂಬ ಬಗ್ಗೆ ಅವರು ಮಾತನಾಡಿದ್ದರು. ಅದೇ ರೀತಿ ತಮ್ಮ ಸಿನಿ ಜೀವನದ ಆರಂಭ ಸಮಯದಲ್ಲಿ ಚಿತ್ರ ನಿರ್ದೇಶಕರೊಬ್ಬರು ತಮ್ಮನ್ನು ಅಂಡರ್​ವೇರ್​ನಲ್ಲಿ ನೋಡಲು ಬಯಸಿದ್ದರು ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದೊಂದು ಅಮಾನವೀಯ ಘಟನೆಯಾಗಿದ್ದು, ಇದರಿಂದಾಗಿ ಚಿತ್ರದಿಂದ ಹೊರ ನಡೆದಿದ್ದಾಗಿ ತಿಳಿಸಿದ್ದಾರೆ.

2002 ಅಥವಾ 2003ರಲ್ಲಿ ನಾನು ಅಂಡರ್​ಕವರ್​ನಲ್ಲಿದ್ದು, ಹುಡುಗನನ್ನು ಮೋಹಿಸುವ ಪಾತ್ರ ನಿರ್ವಹಿಸುತ್ತಿದ್ದೆ. ಈ ವೇಳೆ ನನ್ನ ಬಟ್ಟೆಗಳನ್ನು ತೆಗೆಯಬೇಕಿತ್ತು. ಈ ವೇಳೆ ಚಿತ್ರ ನಿರ್ದೇಶಕರು ನನ್ನನ್ನು ಅಂಡರ್​​ವೇರ್​ನಲ್ಲಿ ನೋಡ ಬಯಸಿದ್ದರು. ಇದರ ಕುರಿತು ಮಾತನಾಡಿದ ನಿರ್ದೇಶಕರು. ಈ ರೀತಿ ಮಾಡದಿದ್ದರೆ, ಯಾರಾದರೂ ಯಾತಕ್ಕಾಗಿ ಈ ಸಿನಿಮಾವನ್ನು ಬಂದು ನೋಡಬೇಕು ಎಂದು ಪ್ರಶ್ನಿಸಿದ್ದರು ಎಂದು ತಿಳಿಸಿದರು.

ಈ ವಿಚಾರವನ್ನು ನಿರ್ದೇಶಕರು ನೇರವಾಗಿ ನನಗೆ ಹೇಳಿಲಿಲ್ಲ. ನನ್ನ ಸ್ಟೈಲಿಶ್​ ಮುಂದೆ ಇದನ್ನು ತಿಳಿಸಿದರು. ಇದು ನಿಜಕ್ಕೂ ಅಮಾನವೀಯ ಘಟನೆ. ಇದರಿಂದಾಗಿಯೇ ಈ ಚಿತ್ರದಿಂದ ಹೊರ ನಡೆದೆ. ನನ್ನ ಕಲೆ ಇಲ್ಲಿ ಮುಖ್ಯವಾಗಿಲ್ಲ. ನಾನು ಕಲೆಗೆ ನೀಡಿದ ಸಮರ್ಪಣಾ ಭಾವನೆ ಮುಖ್ಯವಾಗಲಿಲ್ಲ. ಈ ಘಟನೆಯಾದ ಎರಡೇ ದಿನಕ್ಕೆ ನಾನು ಚಿತ್ರದಿಂದ ಹೊರ ನಡೆದೆ. ಈ ರೀತಿ ಮಾಡಿದ್ದಕ್ಕೆ ನಿರ್ಮಾಪಕರಿಗೆ ಹಣವನ್ನು ಮರಳಿ ನೀಡುವಂತೆ ನನ್ನ ತಂದೆ ಅಶೋಕ್​ ಚೋಪ್ರಾ ತಿಳಿಸಿದರು.

ನಟಿ ಪ್ರಿಯಾಂಕಾ ಚೋಪ್ರಾ 2002ರಲ್ಲಿ ಥಮಿಜಾನ್​ ಚಿತ್ರದ ಮೂಲಕ ಬಾಲಿವುಡ್​ ಪ್ರವೇಶಿಸಿದ್ದರು. ಆದರೆ ಅವರನ್ನು ಗುರುತಿಸುವಂತೆ ಮಾಡಿದ ಚಿತ್ರ 2003ರಲ್ಲಿ ತೆರೆಕಂಡ ಅಂದಾಜ್​. ಇದಾದ ಬಳಿಕ ಏತ್ರಾಸ್​, ಮುಜ್ಸೆ ಶಾದಿ ಕರೋಗಿ, ಫ್ಯಾಷನ್​​, ಡಾನ್​, ಬರ್ಫಿ, ಬಾಜಿರಾವ್​ ಮಸ್ತಾನಿ, ಮೇರಿ ಕೋಮ್​, ದಿ ವೈಟ್​ ಟೈಗರ್​ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಈ ಹಿಂದೆ ಕೂಡ ತಮ್ಮ ಆರಂಭಿಕ ಸಿನಿ ಜೀವನದಲ್ಲಿ ಉಂಟಾದ ನೋವುಗಳನ್ನು ತಿಳಿಸುತ್ತಿದ್ದರು. 2002ರಲ್ಲಿ ಮಿಸ್​ ವರ್ಲ್ಡ್​ ಆದ ಬಳಿಕ ಬಾಲಿವುಡ್​ ಪ್ರವೇಶಿಸಲು ಮುಂದಾಗಿದ್ದ ಅವರು, ನಿರ್ದೇಶಕರನ್ನು ಭೇಟಿಯಾಗಿದ್ದರಂತೆ. ಆಗ ಅವರು, ಪ್ರಿಯಾಂಕಾಗೆ ತಮ್ಮ ಸ್ತನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ, ಈ ನಿರ್ದೇಶಕ ಯಾರು ಎಂಬ ಬಗ್ಗೆ ಅವರು ಎಲ್ಲೂ ಬಹಿರಂಗಪಡಿಸಿರಲಿಲ್ಲ.

ಇನ್ನು ಇಷ್ಟೇ ಅಲ್ಲದೇ, ಬಾಲಿವುಡ್​ನಲ್ಲಿ ನಡೆಯುವ ಗುಂಪುಗಾರಿಕೆ ಕುರಿತು ಕೂಡ ಅವರು ಬಹಿರಂಗಪಡಿಸಿದ್ದರು. ಬಾಲಿವುಡ್​ನ ಕೆಲವು ಗುಂಪುಗಳು ತಮಗೆ ತೊಂದರೆ ನೀಡುವ ಮೂಲಕ ದುರ್ಬಲವಾಗಿಸುವ ಪ್ರಯತ್ನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಹಾಲಿವುಡ್​ಗೆ ಹಾರಿದ್ದಾಗಿ ಆಗ ನಟಿ ಪ್ರಿಯಾಂಕಾ ತಿಳಿಸಿದ್ದರು. ಇನ್ನು ನಟಿಯ ಈ ಹೇಳಿಗೆ ಕಂಗನಾ ರಣಾವತ್​​ ಕೂಡ ಧ್ವನಿಗೂಡಿಸಿದ್ದರು.

ಇದನ್ನೂ ಓದಿ: 76ನೇ ಕಾನ್​ ಚಲನಚಿತ್ರೋತ್ಸವ: ಅನುಷ್ಕಾ ವಿರಾಟ್​ ಜೋಡಿ ಮುಂಬೈ ಟು ಫ್ರಾನ್ಸ್ ಪ್ರಯಾಣ

ABOUT THE AUTHOR

...view details