ಕರ್ನಾಟಕ

karnataka

ETV Bharat / entertainment

2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ.. ಪಂಜಾಬ್​​ ಘಟನೆಗೆ ಕಂಗನಾ ರಣಾವತ್ ಪ್ರತಿಕ್ರಿಯೆ

ಪಂಜಾಬ್‌ನ ಅಜ್ನಾಲಾ ಪೊಲೀಸ್ ಠಾಣೆ ಮೇಲೆ ಮುತ್ತಿಗೆ ಪ್ರಕರಣ ಸಂಬಂಧ ನಟಿ ಕಂಗನಾ ರಣಾವತ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ

By

Published : Feb 25, 2023, 3:27 PM IST

kangana ranaut reacts on Punjab incident
ಪಂಜಾಬ್​​ ಘಟನೆಗೆ ಕಂಗನಾ ರಣಾವತ್ ಪ್ರತಿಕ್ರಿಯೆ

ಸಿನಿಮಾ ಜೊತೆಗೆ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಬಾಲಿವುಡ್​​ ನಟಿ ಕಂಗನಾ ರಣಾವತ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಪಂಜಾಬ್‌ನ ಅಜ್ನಾಲಾ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯ ಬಗ್ಗೆ ಬಾಲಿವುಡ್ ನಟಿ ಪ್ರತಿಕ್ರಿಯಿಸಿದ್ದಾರೆ.

ಕಂಗನಾ ರಣಾವತ್ ಟ್ವೀಟ್: ಟ್ವಿಟರ್​ನಲ್ಲಿ ಪಂಜಾಬ್ ಅನ್ನು ಗುರಿಯಾಗಿಸಿಕೊಂಡ ನಟಿ ಕಂಗನಾ ರಣಾವತ್, ಪಂಜಾಬ್‌ನಲ್ಲಿ ಜರುಗುತ್ತಿರುವ ವಿಷಯಗಳ ಬಗ್ಗೆ ನಾನು ಎರಡು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ, ನನ್ನ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ, ನನ್ನ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ, ಪಂಜಾಬ್‌ನಲ್ಲಿ ನನ್ನ ಕಾರಿನ ಮೇಲೆ ದಾಳಿ ಮಾಡಲಾಗಿದೆ, ಆದ್ರೆ ನಾನು ನುಡಿದ ಭವಿಷ್ಯ ಸದ್ಯ ಪಂಜಾಬ್​ನಲ್ಲಿ ಜರುಗುತ್ತಿದೆ, ಖಲಿಸ್ತಾನೇತರ ಸಿಖ್ಖರು ತಮ್ಮ ಸ್ಥಾನ ಮತ್ತು ಉದ್ದೇಶವನ್ನು ಸ್ಪಷ್ಟಪಡಿಸಬೇಕಾದ ಸಮಯ ಇದು ಎಂದು ಬರೆದುಕೊಂಡಿದ್ದಾರೆ.

ನಟಿ ಕಂಗನಾ ರಣಾವತ್ ಟ್ವೀಟ್​ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಹು ಬೇಗನೆ ವ್ಯಕ್ತವಾಗಿವೆ. ಇದರಲ್ಲಿ ಹಾಸ್ಯಾಸ್ಪದ ರಿಯಾಕ್ಷನ್ಸ್​ ಕೂಡ ಇದೆ. ಪಂಜಾಬಿ ಗಾಯಕ, ನಟ ದಿಲ್ಜಿತ್ ದೋಸಾಂಜ್ ಅವರ ಅಭಿಮಾನಿಗಳು "ಈ ಆಂಟಿ ದಿಲ್ಜಿತ್ ದೋಸಾಂಜ್ ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ'' ಎಂದು ಹೇಳಿದ್ದಾರೆ. ಮತ್ತೋರ್ವ ಬಳಕೆದಾರರು, ಮೇಡಂ ಇಂಡಿಯಾ ವರ್ಸಸ್​ ಆಸ್ಟ್ರೇಲಿಯಾ ಪಂದ್ಯದ ವಿಜೇತರನ್ನು ಊಹಿಸಿ ಎಂದು ಕಾಮೆಂಟ್​ ಮಾಡಿದ್ದಾರೆ.

ಅಜ್ನಾಲಾ ಪೊಲೀಸ್ ಠಾಣೆ ಘಟನೆ: ಫೆಬ್ರವರಿ 23ರಂದು, ಖಲಿಸ್ತಾನ್ ಬೆಂಬಲಿಗರು ಬಂದೂಕುಗಳು ಮತ್ತು ಕತ್ತಿಗಳೊಂದಿಗೆ ಅಮೃತಸರ ಜಿಲ್ಲೆಯ ಅಜ್ನಾಲಾ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. 'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥ ಅಮೃತ್​​ಪಾಲ್ ಸಿಂಗ್ ಬೆಂಬಲಿಗರು ದಾಳಿ ನಡೆಸಿದ್ದು, ಅವರು ಕೂಡ ಸ್ಥಳದಲ್ಲಿದ್ದರು. ಅಮೃತಪಾಲ್ ಅವರ ಸಹೋದ್ಯೋಗಿ ಲವ್​ಪ್ರೀತ್​​ ಸಿಂಗ್ ತೂಫಾನ್ ಬಿಡುಗಡೆಗೆ ಒತ್ತಾಯಿಸಿ ಜನರು ಪೊಲೀಸ್ ಠಾಣೆಗೆ ಬಂದಿದ್ದರು. ಆ ವೇಳೆ, ಪೊಲೀಸರು ಆ ಪ್ರದೇಶವನ್ನು ಬ್ಯಾರಿಕೇಡ್ ಹಾಕುವ ಮೂಲಕ ತಡೆದಿದ್ದರು. ಆದಾಗ್ಯೂ, ಅಮೃತ್​ಪಾಲ್​ ಸಿಂಗ್ ಶಸ್ತ್ರಾಸ್ತ್ರಗಳೊಂದಿಗೆ ಅಲ್ಲಿಗೆ ತಲುಪಿದ್ದನ್ನು ಕಂಡ ಪೊಲೀಸರು ಹಿಂದೆ ಸರಿದರು. ಇದರ ಲಾಭ ಪಡೆದ ಖಲಿಸ್ತಾನ್ ಬೆಂಬಲಿಗರು ಪೊಲೀಸ್ ಸಿಬ್ಬಂದಿಗೆ ಥಳಿಸಿ ಠಾಣೆಗೆ ನುಗ್ಗಿದ್ದರು.

ಇನ್ನು, 2 ವರ್ಷಗಳ ಹಿಂದೆ ದೆಹಲಿ ಗಡಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯ ವಿರುದ್ಧ ಕಂಗನಾ ರಣಾವತ್ ಟೀಕೆ ಮಾಡಿದ್ದರು. ಬಟಿಂಡಾದ ಬಹದ್ದೂರ್‌ಗಢ್ ಜಾಂಡಿಯಾ ಗ್ರಾಮದ ನಿವಾಸಿಯಾದ 87 ವರ್ಷದ ರೈತ ಮಹಿಳೆ ಮಹಿಂದರ್ ಕೌರ್ ಯಾವುದೇ ಪ್ರತಿಭಟನೆ ನಡೆಸಲು 100 ರೂ.ಗೆ ಸೇರುತ್ತಾರೆಂದು ಟೀಕಿಸಿದ್ದರು. ನಂತರ ಮಹೀಂದರ್ ಕೌರ್ ನಟಿಯ ವಿರುದ್ಧ ಬಟಿಂಡಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ಕಂಗನಾ ರಣಾವತ್ ವಿರುದ್ಧ ಬಟಿಂಡಾ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು.

ಈ ಘಟನೆಯ ನಂತರ, ಕಂಗನಾ ರಣಾವತ್​ ಕಿರಾತ್‌ಪುರ ಸಾಹಿಬ್‌ಗೆ ಭೇಟಿ ನೀಡುವ ವೇಳೆ ಪಂಜಾಬ್-ಹಿಮಾಚಲದ ಗಡಿಯಲ್ಲಿ ರೈತರು ಅವರನ್ನು ಸುತ್ತುವರೆದು, ತಮ್ಮ ಕಾಮೆಂಟ್‌ಗಳಿಗೆ ಕ್ಷಮೆಯಾಚಿಸುವಂತೆ ಕೇಳಿದರು. ಪೊಲೀಸರ ನೆರವಿನಿಂದ ಕಂಗನಾ ಅವರನ್ನು ಜನಸಂದಣಿಯಿಂದ ರಕ್ಷಿಸಲಾಯಿತು. ತಮ್ಮ ಹೇಳಿಕೆಗೆ ಕಂಗನಾ ರಣಾವತ್​​ ಕ್ಷಮೆಯಾಚಿಸಿದ್ದಾರೆ ಎಂದು ರೈತರು ಹೇಳಿದ್ದಾರೆ.

ಇದನ್ನೂ ಓದಿ:Watch.. ವಾರಿಸ್ ಪಂಜಾಬ್ ಸಂಘಟನೆ ಕಾರ್ಯಕರ್ತರಿಂದ ಪೊಲೀಸ್​ ಠಾಣೆಗೆ ಮುತ್ತಿಗೆ.. ಭಾರಿ ಪ್ರತಿಭಟನೆ, ಪೊಲೀಸರಿಗೆ ಗಾಯ

ನಟಿ ಕಂಗನಾ ರಣಾವತ್ ತಮ್ಮ ನಟನೆ, ನಿರ್ದೇಶನದ 'ಎಮರ್ಜೆನ್ಸಿ' ಚಿತ್ರ ಪೋಸ್ಟ್ ಪ್ರೊಡಕ್ಷನ್‌ ಕೆಲಸದಲ್ಲಿ ನಿರತರಾಗಿದ್ದಾರೆ. ಚಿತ್ರವು ಅಕ್ಟೋಬರ್​ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ABOUT THE AUTHOR

...view details