ಕರ್ನಾಟಕ

karnataka

ETV Bharat / entertainment

ರೆಡಿ ಆನ್ ವೀಲ್ಸ್ ಅಪ್ಲಿಕೇಶನ್ ಲೋಕಾರ್ಪಣೆಗೊಳಿಸಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಜನರ ಪ್ರಯಾಣ ಮತ್ತು ಸಾರಿಗೆ ಅಗತ್ಯಗಳನ್ನು ಪೂರೈಸುವ ಸಲುವಾಗಿ ಹೊಸದಾಗಿ ಪ್ರಾರಂಭಿಸಲಾದ ರೆಡಿ ಆನ್ ವೀಲ್ಸ್ (ROW ) ಸಂಸ್ಥೆಯ ಅಪ್ಲಿಕೇಶನ್ ಅನ್ನು ಧ್ರುವ ಸರ್ಜಾ ಅವರು ಇಂದು ಲೋಕಾರ್ಪಣೆಗೊಳಿಸಿದರು.

By

Published : Nov 26, 2022, 5:31 PM IST

Actor Dhruva Sarja launched Ready on Wheels app
ರೆಡಿ ಆನ್ ವೀಲ್ಸ್ ಅಪ್ಲಿಕೇಶನ್ ಲೋಕಾರ್ಪಣೆಗೊಳಿಸಿದ ಧ್ರುವ ಸರ್ಜಾ

ರೆಡಿ ಆನ್ ವೀಲ್ಸ್ (ROW )- ಜನರ ಪ್ರಯಾಣ ಮತ್ತು ಸಾರಿಗೆ ಅಗತ್ಯಗಳನ್ನು ಪೂರೈಸುವ ಸಲುವಾಗಿ ಹೊಸದಾಗಿ ಪ್ರಾರಂಭಿಸಲಾದ ರೆಡಿ ಆನ್ ವೀಲ್ಸ್ ಸಂಸ್ಥೆಯ ಅಪ್ಲಿಕೇಶನ್ ಅನ್ನು ನಟ ಹಾಗೂ ಸಂಸ್ಥೆಯ ರಾಯಭಾರಿ ಧ್ರುವ ಸರ್ಜಾ ಅವರು ಇಂದು ಬಿಡುಗಡೆ ಮಾಡಿದರು.

ROW APP ಲೋಕಾರ್ಪಣೆಗೊಳಿಸಿದ ಧ್ರುವ ಸರ್ಜಾ

ಹೆಚ್ಚಿನ ಸೇವಾ ಶುಲ್ಕಗಳು ಮತ್ತು ಭಾರಿ ಕಮಿಷನ್ ಇಲ್ಲದೇ ಸುಧಾರಿತ ವ್ಯವಸ್ಥೆಯಲ್ಲಿ ಜನರ ಪ್ರಯಾಣ ಮತ್ತು ಸಾರಿಗೆ ಅಗತ್ಯಗಳನ್ನು ಪೂರೈಸುವ ROW ಅಪ್ಲಿಕೇಶನ್, ನೋಂದಾಯಿತ ಮತ್ತು ಪರಿಶೀಲಿಸಿದ ಚಾಲಕರು ಮತ್ತು ವಾಹನ ಮಾಲೀಕರು ಮಾತ್ರ ಸಂಪರ್ಕದಲ್ಲಿರುವುದನ್ನು ಖಚಿತಪಡಿಸುತ್ತದೆ.

ROWಹೊರವಲಯದ ಕಾರುಗಳು, ಪ್ರಯಾಣಿಕ ಮತ್ತು ಸರಕುಗಳ ವಾಹನಗಳು, ಪ್ರೈಮ್ ಕಾರುಗಳು, ಸ್ವಯಂ ಡ್ರೈವ್, ಬಿಡಿ ಚಾಲಕ, ELITE ಕಾರ್​ಗಳನ್ನೂ ಒದಗಿಸುವುದು ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತದೆ. ಜೊತೆಗೆ ಕ್ಯಾರವ್ಯಾನ್​ಳನ್ನು ಒದಗಿಸುತ್ತದೆ ಮತ್ತು ಸಾಮಾಜಿಕ ಮಾಧ್ಯಮ ಡ್ಯಾಶ್ಬೋರ್ಡ್ ಹೊಂದಿದೆ.

ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ

"ನಮ್ಮ ಧ್ಯೇಯ ಅತ್ಯುತ್ತಮ ಪ್ರಯಾಣ ಮತ್ತು ಸಾರಿಗೆ ಅಪ್ಲಿಕೇಶನ್ ಅನ್ನು ಒದಗಿಸುವುದು ಮತ್ತು ಗ್ರಾಹಕರಿಗೆ ಅತ್ಯಂತ ಸ್ಮರಣೀಯ ಸೇವಾ ಅನುಭವವನ್ನು ನೀಡುವುದು. ಏತನ್ಮಧ್ಯೆ, ಸೇವಾ ಸಂಗ್ರಾಹಕರು ಪ್ರಸ್ತುತ ಗ್ರಾಹಕರಿಗೆ ವಿಧಿಸುವ ಶೇ 30 - 40 ಕಮಿಷನ್ ಅನ್ನು ತೆಗೆದುಹಾಕುವ ಮೂಲಕ ಗ್ರಾಹಕರು ಮತ್ತು ವಾಹನ ಮಾಲೀಕರು, ಚಾಲಕರು ಇಬ್ಬರಿಗೂ ಗೆಲುವಿನ ಪರಿಸ್ಥಿತಿಯನ್ನು ಸೃಷ್ಟಿಸಲು ನಾವು ಬಯಸುತ್ತೇವೆ'' ಎಂದು ROWನ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರವಿ ಮಲ್ಲಯ್ಯ ಹೇಳಿದರು.

ROW APP ಲೋಕಾರ್ಪಣೆಗೊಳಿಸಿದ ಧ್ರುವ ಸರ್ಜಾ

ಕನ್ನಡಿಗರಿಂದ ಆರಂಭವಾಗಿರುವ ರೆಡಿ ಆನ್ ವೀಲ್ಸ್ (ROW ) ಆ್ಯಪ್ ಒಂದೇ ಸೂರಿನಡಿ ಹಲವು ಗ್ರಾಹಕ ಸ್ನೇಹಿ ಸೇವೆಗಳನ್ನು ನೀಡಲಿದ್ದು, ಈ ಸೇವೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸಲಿದೆ. ಇದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ.

ಇದನ್ನೂ ಓದಿ:ನಾಗ ಚೈತನ್ಯ - ಶೋಭಿತಾ ಫೋಟೋ ವೈರಲ್​...ನಿಜಾಂಶ ಬಯಲಿಗೆಳೆದ ಅಭಿಮಾನಿ

ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ಸಾಲು ಮರದ ತಿಮ್ಮಕ್ಕ ಮತ್ತು ಹರೇಕಳ ಹಾಜಬ್ಬನವರನ್ನು ಗಂಧದಗುಡಿ ಟ್ರಸ್ಟ್​ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದ ಡಾ. ಲೀಲಾವತಿ, ಎಮ್.ಎಸ್.ಉಮೇಶ್, ರಮೇಶ್ ಭಟ್, ಶ್ರೀಮತಿ ಅಪೂರ್ವ ಶ್ರೀ, ಡಿಂಗ್ರಿ ನಾಗರಾಜ್, ಶ್ರೀ ಗಣೇಶ್ ರಾವ್ ಕೆಸರ್ಕರ್ ಮತ್ತು ದಯಾನಂದ್ ಸಾಗರ್ ತಿಪಟೂರು ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ಜೊತೆಗೆ ಪತ್ರಿಕೋದ್ಯಮದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರನ್ನು ಸನ್ಮಾನಿಸಲಾಯಿತು.

ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಗವಿಸಿದ್ದೇಶ್ವರ ಮಠದ ಅಭಿನವಗವಿಸಿದ್ದೇಶ್ವರ ಮಹಾಸ್ವಾಮಿ ಮತ್ತು ಅವಧೂತ ಶ್ರೀ ವಿನಯ್ ಗುರೂಜಿ ಸಾನ್ನಿಧ್ಯದಲ್ಲಿ ಆ್ಯಪ್ ಬಿಡುಗಡೆ ಆಯಿತು. ಮಾಧುಸ್ವಾಮಿ, ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:ಉಗ್ರಂ ಸಿನಿಮಾದ ಬೆಡಗಿಗೆ ಕೂಡಿ‌ ಬಂತು ಕಂಕಣ‌ ಭಾಗ್ಯ.. ಹರಿಪ್ರಿಯಾ ಕೈಹಿಡಿಯುವ ಹುಡುಗ ಯಾರು ಗೊತ್ತಾ?

ABOUT THE AUTHOR

...view details