ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಅವರು ರಾಜ್ಯದ ಸಮಸ್ತ ಜನತೆಗೆ ಹೊಸ ವರ್ಷವಾದ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.
ನಾಡಿನಲ್ಲಿ ಸಮೃದ್ಧಿ, ಶಾಂತಿ, ನೆಮ್ಮದಿ ನೆಲೆಸಲಿ.. ಯುಗಾದಿ ಹಬ್ಬಕ್ಕೆ ಶುಭಕೋರಿದ ಮುಖ್ಯಮಂತ್ರಿಗಳು - kannada news
ಯುಗಾದಿ ಹಬ್ಬದ ಪ್ರಯುಕ್ತ ನಾಡಿನ ಜನತೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಶುಭಾಶಯಗಳನ್ನ ಕೋರಿದ್ದಾರೆ.
![ನಾಡಿನಲ್ಲಿ ಸಮೃದ್ಧಿ, ಶಾಂತಿ, ನೆಮ್ಮದಿ ನೆಲೆಸಲಿ.. ಯುಗಾದಿ ಹಬ್ಬಕ್ಕೆ ಶುಭಕೋರಿದ ಮುಖ್ಯಮಂತ್ರಿಗಳು](https://etvbharatimages.akamaized.net/etvbharat/images/768-512-2914238-thumbnail-3x2-cm.jpg)
ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದ ಸಿಎಂ
ವಿಕಾರಿ ನಾಮ ಸಂವತ್ಸರವು ನಾಡಿನ ಜನತೆಗೆ ಸಮೃದ್ಧಿ, ಸುಖ, ಶಾಂತಿಯನ್ನು ತರಲಿ. ಹಬ್ಬದಂದು ಬೇವು ಬೆಲ್ಲ ಸ್ವೀಕರಿಸಿದಂತೆಯೇ ಬದುಕಿನಲ್ಲಿಯೂ ಸುಖ- ದುಃಖಗಳನ್ನೂ ಸಮಚಿತ್ತದಿಂದ ಸ್ವೀಕರಿಸಿ, ಸಾಮರಸ್ಯದ ಬದುಕು ನಮ್ಮ-ನಿಮ್ಮೆಲ್ಲರದ್ದಾಗಲಿ ಎಂದು ಸಿಎಂ ನಾಡಿನ ಜನತೆಗೆ ಹಾರೈಸಿದ್ದಾರೆ.