ಕರ್ನಾಟಕ

karnataka

ETV Bharat / elections

ಕಾರಿನ ಟೈರ್‌ನೊಳಗಿತ್ತು ಕಂತೆ ಕಂತೆ ಹಣ! ಐಟಿ ಅಧಿಕಾರಿಗಳ ಭರ್ಜರಿ ಬೇಟೆ

ರಾಜ್ಯದಲ್ಲಿ ಐಟಿ ಇಲಾಖೆ ದಾಳಿ ಮುಂದುವರೆಸಿದೆ. ಎರಡನೇ ಹಂತದ ಚುನಾವಣೆಗೆ ಎರಡು ದಿನಗಳಿರುವಾಗಲೇ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ, ಕೋಟಿಗಟ್ಟಲೆ ಹಣವನ್ನ ವಶಪಡಿಸಿಕೊಳ್ಳಲಾಗಿದೆ.

By

Published : Apr 20, 2019, 9:53 PM IST

ಐಟಿ ಅಧಿಕಾರಿಗಳ ಭರ್ಜರಿ ಬೇಟೆ 4.5 ಕೋಟಿ ವಶ

ಬೆಂಗಳೂರು:ಎರಡನೇ ಹಂತದಲೋಕಸಭಾ ಚುನಾವಣೆಗೆ ಎರಡೇ ದಿನ ಬಾಕಿ. ಈ ಮಧ್ಯೆ ಐಟಿ ಅಧಿಕಾರಿಗಳು ಭರ್ಜರಿ ಭೇಟೆ ನಡೆಸಿದ್ದಾರೆ. ಒಂದೇ ದಿನ ಸುಮಾರು 4.5 ಕೋಟಿ ರೂಪಾಯಿ ಹಣ ವಶಪಡಿಸಿಕೊಂಡು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಮತದಾರರಿಗೆ ಹಂಚಲು ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಸುಳಿವು ಪಡೆದು ಕಾರ್ಯಪ್ರವೃತ್ತರಾದ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕಾರಿನ ಟೈರಿನೊಳಗೆ ಕಂತೆ ಕಂತೆ ಹಣವಿರುವುದು ಪತ್ತೆಯಾಗಿದೆ. ದಾಳಿ ವೇಳೆ ಗೋವಾ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಬರೋಬ್ಬರಿ 2 ಕೋಟಿ 30 ಲಕ್ಷ ರೂಪಾಯಿ!

ಐಟಿ ಅಧಿಕಾರಿಗಳ ಭರ್ಜರಿ ಬೇಟೆ 4.5 ಕೋಟಿ ವಶ

ರಾಜ್ಯದಲ್ಲೂ ಐಟಿ ಅಧಿಕಾರಿಗಳು ಶೋಧಕಾರ್ಯ ಮುಂದುವರೆಸಿದ್ದು, ಭದ್ರಾವತಿಯಲ್ಲಿ 60 ಲಕ್ಷ ಹಣ, ಬಾಗಲಕೋಟೆಯ ನವನಗರದಲ್ಲಿ ಬ್ಯಾಂಕ್ ಉದ್ಯೋಗಿ ಬಳಿ 1 ಕೋಟಿ ರೂ, ಗೋವಾದಲ್ಲಿ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದ ವಿಜಯಪುರದ ಇಬ್ಬರು ಸಹೋದರರ ಮನೆ ಮೇಲೆ ದಾಳಿ ‌ಮಾಡಿ 40 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details