ಕರ್ನಾಟಕ

karnataka

ಈಡಿಗ ಮಠದ ಕಾರ್ಯದರ್ಶಿ ಮೇಲೆ ಬಿಜೆಪಿ ಹಲ್ಲೆ ಆರೋಪ.. ಶಾಸಕ ಹಾಲಪ್ಪಗೆ ಕೈ ಕಾರ್ಯಕರ್ತರಿಂದ ತರಾಟೆ

ಈಡಿಗ ಮಠದ ಕಾರ್ಯದರ್ಶಿ ಮೇಲೆ ಹಲ್ಲೆ ಆರೋಪ, ಕೈ ಕೈ ಮಿಲಾಯಿಸಿದ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರು.

By

Published : Apr 21, 2019, 9:26 PM IST

Published : Apr 21, 2019, 9:26 PM IST

ಈಡಿಗ ಮಠದ ಕಾರ್ಯದರ್ಶಿ ಮೇಲೆ ಹಲ್ಲೆ ಆರೋಪ

ಶಿವಮೊಗ್ಗ : ಈಡಿಗ ಮಠದ ಕಾರ್ಯದರ್ಶಿ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಮೂರು ದಿನಗಳ ಹಿಂದೆ ಹೊಸನಗರ ತಾಲೂಕು ನಲ್ಲಿಬೀಡು ಗ್ರಾಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದರು. ಇದನ್ನು ಬಗೆಹರಿಸಲು ಸಾಗರ ಶಾಸಕ ಹರತಾಳು ಹಾಲಪ್ಪನವರು ಗ್ರಾಮಕ್ಕೆ ತೆರಳಿದ್ದರು.

ಶಾಸಕ ಹಾಲಪ್ಪಗೆ ಕೈ ಕಾರ್ಯಕರ್ತರ ತರಾಟೆ

ಈ ವೇಳೆ ಹಾಲಪ್ಪನವರು ಈಡಿಗ ಮಠದ ಕಾರ್ಯದರ್ಶಿ ರಾಮಪ್ಪ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನ ಮಾಡುವಾಗ ಮತ್ತೆ ವಾಗ್ವಾದ ತಾರಕಕ್ಕೇರಿ ಗಲಾಟೆ ನಡೆದಿದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಲಪ್ಪನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಬಡಿದಾಡಿಕೊಂಡಿದ್ದಾರೆ. ಅಷ್ಟರಲ್ಲಿ ಹಾಲಪ್ಪ ಅಲ್ಲಿಂದ ಹಿಂದಿರುಗಿದ್ದಾರೆ. ಹೊಸನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆದರೆ, ಈವರೆಗೂ ದೂರು ದಾಖಲಾಗಿಲ್ಲ.

ABOUT THE AUTHOR

...view details