ಕರ್ನಾಟಕ

karnataka

ETV Bharat / crime

ಚಾಮರಾಜನಗರ : ಸಾಲ ತೀರಿಸಲು ಹಣ ನೀಡದಿದ್ದಕ್ಕೆ ತಂದೆ ಎದುರೇ ಕತ್ತು ಕೊಯ್ದುಕೊಂಡ ಮಗ - young man suicide attempt in Kollegal, chamarajanagar district

ಸಾಲ ತೀರಿಸಲು ಹಣ ನೀಡದಿದ್ದಕ್ಕೆ ಪುತ್ರನೆೋರ್ವ ತಂದೆಯ ಎದುರು ಕತ್ತು ಕೊಯ್ದುಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಪಾಳ್ಯದಲ್ಲಿ ನಡೆದಿದೆ..

Parents did not give money to pay debit; son suicide attempt in Kollegal, chamarajanagar district
ಸಾಲ ತೀರಿಸಲು ಹಣ ನೀಡದಿದ್ದಕ್ಕೆ ತಂದೆ ಎದುರೇ ಕತ್ತು ಕೊಯ್ದು ಕೊಂಡ ಮಗ

By

Published : Dec 24, 2021, 1:50 PM IST

ಕೊಳ್ಳೇಗಾಲ(ಚಾಮರಾಜನಗರ) :ಸಾಲ ತೀರಿಸಲು ಹಣ ನೀಡದ‌ ಹಿನ್ನೆಲೆಯಲ್ಲಿ ತಂದೆ ಎದುರೇ ಮಗ ಚಾಕುವಿನಿಂದ ಕತ್ತು ಮತ್ತು ಕೈ ಕೊಯ್ದುಕೊಂಡ ಘಟನೆ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಸುರೇಶ್‌ಕುಮಾರ್ ಎಂಬುವರ ಪುತ್ರ ಸಂತೋಷ್ ಕುಮಾರ್ ಎಂಬುವರು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಸಂತೋಷ್‌ ರಂಗನಾಥನ ದೇವಾಲಯದ ದಾಸೋಹ ಭವನದಲ್ಲಿ ಅಡುಗೆ ಭಟ್ಟನಾಗಿ ಕಾರ್ಯ ನಿರ್ವಹಿಸುತ್ತಿದ್ದ.

ಇಂದು ಬೆಳಗ್ಗೆ ತನ್ನ ತಂದೆ-ತಾಯಿಗೆ ನನಗೆ ಸಾಲ ಇದೆ. ಸಾಲ ತೀರಿಸಲು 20 ಸಾವಿರ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದಾನೆ. ಹಣ ನೀಡಲು ಪೋಷಕ ನಿರಾಕರಿಸಿದ ಕಾರಣ ಚಾಕುವಿನಿಂದ ತನ್ನ ಕತ್ತು ಹಾಗೂ ಕೈಗೆ ಇರಿದು ಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಇದನ್ನೂ ಓದಿ:ಖಾಸಗಿ ಬಸ್​ಗಳ ಮಧ್ಯ ಅಪಘಾತ : ಹದಿನೈದು ಜನ ಪ್ರಯಾಣಿಕರಿಗೆ ಗಂಭೀರ ಗಾಯ

For All Latest Updates

TAGGED:

ABOUT THE AUTHOR

...view details