ಗುವಾಹಟಿ:ಅಸ್ಸಾಂನ ಪದ್ಮ ಪ್ರಶಸ್ತಿ ಪುರಸ್ಕೃತ ಗಣ್ಯ ವ್ಯಕ್ತಿಯೊಬ್ಬರ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಈ ಪ್ರಕರಣ ಕೋರ್ಟ್ ತಲುಪುತ್ತಿದ್ದಂತೆ ಆರೋಪಿ ಬಂಧನದಿಂದ ಪಾರಾಗಲು ಗುವಾಹಟಿ ಹೈಕೋರ್ಟ್ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ರಜೆ ಕಾಲದ ಪೀಠದಲ್ಲಿದ್ದ ನ್ಯಾ.ಅರುಣ್ ದೇವ್ ಚೌಧರಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಈ ಸಂಬಂಧ ಡಿಸೆಂಬರ್ 28 ರಂದು ಆದೇಶ ಹೊರಡಿಸಿರುವ ಕೋರ್ಟ್, ಪೋಕ್ಸೊ ಕಾಯ್ದೆಯಡಿ ಈ ಪ್ರಕರಣ ಬರುವುದರಿಂದ ಗಂಭೀರ ಸ್ವರೂಪದಲ್ಲಿದೆ. ಹೀಗಾಗಿ ಸಂಪೂರ್ಣ ಮಾಹಿತಿಯನ್ನು ಜನವರಿ 7ರೊಳಗೆ ನೀಡಬೇಕೆಂದು ಪೊಲೀಸರಿಗೆ ಸೂಚಿಸಿದೆ.