ಕರ್ನಾಟಕ

karnataka

ETV Bharat / crime

ರಸ್ತೆಬದಿ ನಿಂತಿದ್ದ ಟ್ರಕ್​​ಗೆ ಆ್ಯಂಬುಲೆನ್ಸ್​​​ ಡಿಕ್ಕಿ: ಸ್ಥಳದಲ್ಲೇ ಐವರ ದುರ್ಮರಣ

ರಸ್ತೆಬದಿ ನಿಂತಿದ್ದ ಟ್ರಕ್​​ಗೆ ಮೃತದೇಹವನ್ನು ತೆಗೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್​​ ಡಿಕ್ಕಿ ಹೊಡೆದು ಮೃತನ ಸಹೋದರ, ಆ್ಯಂಬುಲೆನ್ಸ್​​​ ಚಾಲಕ ಸೇರಿ ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ.

By

Published : Jan 26, 2021, 12:43 PM IST

Uttar Pradesh road accident
ರಸ್ತೆಬದಿ ನಿಂತಿದ್ದ ಟ್ರಕ್​​ಗೆ ಆಂಬ್ಯುಲೆನ್ಸ್ ಡಿಕ್ಕಿ

ಭದೋಹಿ (ಉತ್ತರ ಪ್ರದೇಶ): ಮೃತದೇಹವನ್ನು ತೆಗೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್​​​​, ರಸ್ತೆಬದಿ ನಿಂತಿದ್ದ ಟ್ರಕ್​​ಗೆ ಡಿಕ್ಕಿ ಹೊಡೆದಿದ್ದು, ಐವರು ಸ್ಥಳದಲ್ಲೇ ಸಾವನನ್ಪಪ್ಪಿದ್ದಾರೆ.

ರಸ್ತೆ ಬದಿ ನಿಂತಿದ್ದ ಟ್ರಕ್​​ಗೆ ಆ್ಯಂಬುಲೆನ್ಸ್​​​ ಡಿಕ್ಕಿ

ಉತ್ತರ ಪ್ರದೇಶದ ಭದೋಹಿಯಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದೆ. ಅಸನ್ಸೋಲ್‌ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಪಿನ್ ಪಾಲ್ ಸಿಂಗ್ ಎಂಬವರು ಮೃತಪಟ್ಟಿದ್ದರು. ಮೃತದೇಹವನ್ನು ಅವರ ಸಹೋದರ ಹಾಗೂ ಇನ್ನಿಬ್ಬರು ಚಿತ್ತೋರ್‌ಗಡ್​ಗೆ ಕರೆದೊಯ್ಯುತ್ತಿದ್ದರು. ಆದರೆ ಈ ವೇಳೆ ದುರ್ಘಟನೆ ನಡೆದಿದೆ.

ಮೃತನ ಸಹೋದರ ನವನೀತ್, ರಾಜ್ವೀರ್, ರಾಕೇಶ್, ಆಂಬ್ಯುಲೆನ್ಸ್ ಚಾಲಕ ಮತ್ತು ಸಿಬ್ಬಂದಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ವಾಹನಗಳನ್ನು ತೆರವುಗೊಳಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details