ಕರ್ನಾಟಕ

karnataka

ETV Bharat / crime

ಮೈಸೂರು : ಕುಡಿದ ಅಮಲಿನಲ್ಲಿ ಸಂಬಂಧಿಕನನ್ನ ಕೊಲೆಗೈದ ಆರೋಪಿ ಬಂಧನ - ಮೈಸೂರು ಕ್ರೈಮ್‌ ನ್ಯೂಸ್‌

ಈ ಸಂಬಂಧ ಆರೋಪಿಯನ್ನು ಬಂಧಿಸಿರುವ ಬಿಳಿಕೆರೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಕೌಟುಂಬಿಕ ಕಲಹ ಹಾಗೂ ಹಣಕಾಸಿನ ವಿಚಾರ ಕಾರಣ ಎಂದು ಗೊತ್ತಾಗಿದೆ..

Drunken man arrested for murdering relative in mysore
ಮೈಸೂರು: ಕುಡಿದ ಅಮಲಿನಲ್ಲಿ ಸಂಬಂಧಿಕನನ್ನ ಕೊಲೆಗೈದ ಆರೋಪಿ ಬಂಧನ

By

Published : Sep 18, 2021, 4:44 PM IST

ಮೈಸೂರು :ಕೌಟುಂಬಿಕ ಕಲಹದ ಹಿನ್ನೆಲೆ ಕುಡಿದ ಅಮಲಿನಲ್ಲಿ ಸಂಬಂಧಿಕನ ಮನೆಗೆ ನುಗ್ಗಿ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ನಡೆದಿದೆ. 45 ವರ್ಷದ ದೊಡ್ಡರಾಜು ಎಂಬಾತ ಮೃತ ದುರ್ದೈವಿ.

ಕೊಲೆ ಆರೋಪಿ ಕೆಂಡನಾಯಕ ಪಾನಮತ್ತನಾಗಿ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಕೊಲೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಿರುವ ಬಿಳಿಕೆರೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಕೌಟುಂಬಿಕ ಕಲಹ ಹಾಗೂ ಹಣಕಾಸಿನ ವಿಚಾರ ಕಾರಣ ಎಂದು ಗೊತ್ತಾಗಿದೆ.

For All Latest Updates

ABOUT THE AUTHOR

...view details