ಕರ್ನಾಟಕ

karnataka

By

Published : Feb 16, 2021, 10:29 AM IST

Updated : Feb 16, 2021, 4:35 PM IST

ETV Bharat / crime

ಕಾಲುವೆಗೆ ಉರುಳಿಬಿತ್ತು 54 ಪ್ರಯಾಣಿಕರಿದ್ದ ಬಸ್​.. ಸಾವಿನ ಸಂಖ್ಯೆ 42ಕ್ಕೆ ಏರಿಕೆ - ಪರಿಹಾರ ಘೋಷಿಸಿದ ಪಿಎಂ

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ 54 ಮಂದಿ ಪ್ರಯಾಣಿಕರಿದ್ದ ಬಸ್ ಕಾಲುವೆಗೆ ಉರುಳಿ ಬಿದ್ದಿದ್ದು, 42 ಮಂದಿ ಸಾವನ್ನಪ್ಪಿದ್ದಾರೆ.

Sidhi breaking
ಕಾಲುವೆಗೆ ಬಿದ್ದ 60 ಪ್ರಯಾಣಿಕರಿದ್ದ ಬಸ್

ಸಿಧಿ (ಮಧ್ಯಪ್ರದೇಶ): ಸುಮಾರು 54 ಮಂದಿ ಪ್ರಯಾಣಿಕರಿದ್ದ ಬಸ್​ವೊಂದು ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದ್ದು, 42 ಮಂದಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.

ಕಾಲುವೆಗೆ ಉರುಳಿಬಿತ್ತು 54 ಪ್ರಯಾಣಿಕರಿದ್ದ ಬಸ್

ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದು, ಏಳು ಮಂದಿಯನ್ನು ರಕ್ಷಿಸಿದ್ದಾರೆ. ಉಳಿದವರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರೆದಿದೆ. ಇದುವರೆಗೂ 37 ಮೃತದೇಹಗಳನ್ನ ಮೇಲಕ್ಕೆತ್ತಲಾಗಿದೆ. ಸಿಧಿಯಿಂದ ಸತ್ನಾಗೆ ಬಸ್​ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಕಂದಕಕ್ಕೆ ಉರುಳಿ ಬಿದ್ದ ವಾಹನ: ಮಗು ಸೇರಿ ಆರು ಮಂದಿ ದುರ್ಮರಣ

2 ಲಕ್ಷ ರೂ. ಪರಿಹಾರ

ದುರಂತಕ್ಕೆ ಸಂತಾಪ ಸೂಚಿಸಿರುವ ಪಿಎಂ ನರೇಂದ್ರ ಮೋದಿ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

Last Updated : Feb 16, 2021, 4:35 PM IST

ABOUT THE AUTHOR

...view details