ಕರ್ನಾಟಕ

karnataka

By

Published : Mar 13, 2021, 3:03 PM IST

ETV Bharat / crime

ಲಾಡ್ಜ್​​​ಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ: ಎಲ್​​ಇಡಿ ಟಿವಿ, ಮೊಬೈಲ್ ವಶ

ಉಪ್ಪಾರಪೇಟೆಯ ವಿಷ್ಣು ಪ್ಯಾರಡೈಸ್ ಲಾಡ್ಜ್​​​​​ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದಾನೆ. ರೂಮ್​​ನಿಂದ ಚೆಕ್ ಔಟ್ ಆದ ನಂತರ ಎಲ್​​ಸಿಡಿ ಟಿವಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

Arrested theft for stealing lodges
ಲಾಡ್ಜ್​​​ಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಬೆಂಗಳೂರು: ನಗರದ ಪಶ್ಚಿಮ ವಿಭಾಗ ಉಪ್ಪಾರಪೇಟೆ ಪೊಲೀಸರು ಕಾರ್ಯಾಚರಣೆ ನೆಡೆಸಿ, ಟಿವಿ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಲಾಡ್ಜ್​​​ಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಓದಿ: ಎಸ್ಐಟಿಗೆ ಸ್ವತಂತ್ರ ಅಧಿಕಾರ ಕೊಟ್ಟಿದ್ದೇವೆ: ಸಚಿವ ಬೊಮ್ಮಾಯಿ

ವಿಜಯ್ ಅಶೋಕ ಕಾಳೆ ಹಿರೇಮಠ್ ಬಂಧಿತ ಆರೋಪಿಯಾಗಿದ್ದು, ಲಾಡ್ಜ್​​​ಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಲಾಡ್ಜ್​​ನಲ್ಲಿ ರೂಮ್​​ ಬುಕ್ ಮಾಡಿ ರೂಮಿನ ಎಲ್​​ಸಿಡಿ ಟಿವಿ, ಮೊಬೈಲ್ ಕಳ್ಳತನ ಮಾಡುತ್ತಿದ್ದ. ಇದೇ ರೀತಿ ಉಪ್ಪಾರಪೇಟೆಯ ವಿಷ್ಣು ಪ್ಯಾರಡೈಸ್ ಲಾಡ್ಜ್​​​ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದಾನೆ. ರೂಮ್​​​​ನಿಂದ ಚೆಕ್ ಔಟ್ ಆದ ನಂತರ ಎಲ್​​ಸಿಡಿ ಟಿವಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಉಪ್ಪಾರಪೇಟೆ ಠಾಣೆಗೆ ಹೋಟೆಲ್ ಮ್ಯಾನೇಜರ್ ದೂರು ದಾಖಲಿಸಿದ್ದಾನೆ. ಶೀಘ್ರವಾಗಿ ತನಿಖೆ ಕೈಗೊಂಡ ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಬಂಧಿತನಿಂದ 2.70 ಲಕ್ಷ ರೂ. ಬೆಲೆಯ 9 ಎಲ್​ಇಡಿ ಟಿವಿ ಹಾಗೂ 4 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details