ಕರ್ನಾಟಕ

karnataka

ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಐಪಿಎಸ್​ ಅಧಿಕಾರಿ ಶರಣಾಗತಿ

ಉತ್ತರ ಪ್ರದೇಶ ಪಶುಸಂಗೋಪನಾ ಇಲಾಖೆಯ ಹೆಸರಿನಲ್ಲಿ ನಕಲಿ ಟೆಂಡರ್ ಕರೆದು ಉದ್ಯಮಿಗೆ ವಂಚಿಸಿದ್ದ ಐಪಿಎಸ್​ ಅಧಿಕಾರಿ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

By

Published : Jan 28, 2021, 1:53 PM IST

Published : Jan 28, 2021, 1:53 PM IST

Absconding UP IPS officer surrenders in court, sent to jail
ಐಪಿಎಸ್​ ಅಧಿಕಾರಿ ಶರಣಾಗತಿ

ಲಖನೌ:ಉತ್ತರ ಪ್ರದೇಶ ಸರ್ಕಾರಕ್ಕೆ ಹಾಗೂ ಉದ್ಯಮಿಯೊಬ್ಬರಿಗೆ ವಂಚಿಸಿ ಪರಾರಿಯಾಗಿದ್ದ ಐಪಿಎಸ್​ ಅಧಿಕಾರಿ ಅರವಿಂದ್​ ಸೇನ್​ ಇದೀಗ ಲಖನೌ ಕೋರ್ಟ್ ಮುಂದೆ ಶರಣಾಗಿದ್ದಾರೆ. ಜನವರಿ 31ರಂದು ನಿವೃತ್ತಿ ಹೊಂದಲಿರುವ ಸೇನ್​ ಅವರನ್ನು ನ್ಯಾಯಾಲಯ ಫೆ.9ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

2017ರಲ್ಲಿ ಮಧ್ಯಪ್ರದೇಶ ಮೂಲದ ಉದ್ಯಮಿ ಮಂಜೀತ್ ಸಿಂಗ್ ಭಾಟಿಯಾ ಎಂಬವರು ಅರವಿಂದ್​ ಸೇನ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ಪೊಲೀಸರಿಗೆ ಉತ್ತರ ಪ್ರದೇಶ ಪಶುಸಂಗೋಪನಾ ಇಲಾಖೆಯ ಹೆಸರಿನಲ್ಲಿ ನಕಲಿ ಟೆಂಡರ್ ಕರೆದು ಭಾಟಿಯಾಗೆ 9.72 ಕೋಟಿ ರೂ. ವಂಚಿಸಿರುವುದು ತಿಳಿದು ಬಂದಿತ್ತು.

ಇದನ್ನೂ ಓದಿ: ಬೇರೆ - ಬೇರೆ ಮದುವೆ ಬಳಿಕ ಲವ್​ನಲ್ಲಿ ಬಿದ್ದರು.. ನಂತರ ನೇಣಿಗೆ ಶರಣಾದ ಪ್ರೇಮಿಗಳು!

2020 ರ ಡಿಸೆಂಬರ್‌ನಲ್ಲಿ ಸೇನ್​ರನ್ನು ದೋಷಿ ಎಂದು ಲಖನೌ ಕೋರ್ಟ್ ಘೋಷಿಸಿತ್ತು. ಇದರ ಬೆನ್ನಲ್ಲೇ ಸೇನ್​ರನ್ನು ಅವರ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಹುದ್ದೆಯಿಂದ ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ಪ್ರಕರಣ ಸಂಬಂಧ ಯುಪಿ ಪೊಲೀಸರು ಈವರೆಗೆ ಪತ್ರಕರ್ತರು ಸೇರಿದಂತೆ 13 ಜನರನ್ನು ಬಂಧಿಸಿದ್ದಾರೆ. ಆದರೆ, ಅರವಿಂದ್​ ಸೇನ್ ಪರಾರಿಯಾಗಿದ್ದು, ಇವರ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಇದೀಗ ಅವರೇ ಕೋರ್ಟ್ ಮುಂದೆ ಶರಣಾಗಿದ್ದಾರೆ.

ABOUT THE AUTHOR

...view details