ಕರ್ನಾಟಕ

karnataka

By

Published : Jun 7, 2021, 9:54 AM IST

ETV Bharat / crime

ರಸ್ತೆ ಅಪಘಾತದಲ್ಲಿ ವಾಹನಗಳು ಸುಟ್ಟು ಭಸ್ಮ: ಟ್ರಕ್​​ ಚಾಲಕ ಸಜೀವ ದಹನ

ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅನೇಕ ವಾಹನಗಳು ಅಗ್ನಿಗಾಹುತಿಯಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ.

Terrible road accident
ರಸ್ತೆ ಅಪಘಾತದಲ್ಲಿ ವಾಹನಗಳು ಸುಟ್ಟು ಭಸ್ಮ

ಇಟಾ (ಉತ್ತರ ಪ್ರದೇಶ): 9 ಟ್ರಾಕ್ಟರ್​ಗಳನ್ನು ಹೊತ್ತ ವಾಹನ ಹಾಗೂ ಒಂದು ಟ್ರಕ್​ ನಡುವೆ ಡಿಕ್ಕಿಯಾಗಿದ್ದು, ಪರಿಣಾಮ ಬೆಂಕಿ ಹೊತ್ತಿಕೊಂಡು ಎಲ್ಲಾ ವಾಹನಗಳು ಸುಟ್ಟು ಭಸ್ಮವಾಗಿವೆ. ಅಲ್ಲದೇ ಟ್ರಕ್​​ ಚಾಲಕ ಮೃತಪಟ್ಟಿದ್ದಾನೆ.

ರಸ್ತೆ ಅಪಘಾತದಲ್ಲಿ ವಾಹನಗಳು ಸುಟ್ಟು ಭಸ್ಮ

ಉತ್ತರ ಪ್ರದೇಶದ ಇಟಾ ಜಿಲ್ಲೆಯ ದೆಹಲಿ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಟ್ರಕ್​ ಚಾಲಕನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವರಾಜ್​ ಕಂಪನಿಯ ಟ್ರಾಕ್ಟರ್​ಗಳನ್ನು ಹೊತ್ತ ವಾಹನದ ಚಾಲಕ ಜಂಪ್​ ಮಾಡಿ ಅಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: ಮುಂಬೈ ಜನವಸತಿ ಪ್ರದೇಶದಲ್ಲಿ ಕಟ್ಟಡದ ಭಾಗ ಕುಸಿತ: ಓರ್ವ ಸಾವು, ಐವರಿಗೆ ಗಾಯ

ಸ್ಥಳಕ್ಕೆ ಪಿಲುವಾ ಠಾಣಾ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲೇ ಎಲ್ಲಾ ವಾಹನಗಳು ಅಗ್ನಿಗಾಹುತಿಯಾಗಿತ್ತು.

ABOUT THE AUTHOR

...view details