ಕರ್ನಾಟಕ

karnataka

ETV Bharat / city

ಕೊರೊನಾ ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದ 31 ಜನರ ಬಿಡುಗಡೆ: ಸಿರಾದಲ್ಲಿ ಚಪ್ಪಾಳೆ ತಟ್ಟಿ ಬರಮಾಡಿಕೊಂಡ ಜನ - ಕೊರೊನಾ ವೈರಸ್​

ಸೋಂಕಿತ ರೋಗಿ-60ರ ಸಂಪರ್ಕದಲ್ಲಿದ್ದ ಹೆಂಡತಿ, ಮಗ ಹಾಗೂ ಸಂಬಂಧಿಕರು ಸೇರಿ 31 ಜನರಿಗೆ ಕೋವಿಡ್​-19 ನೆಗೆಟಿವ್​​ ಬಂದ ಹಿನ್ನೆಲೆ ಅವರನ್ನು ಮರಳಿ ಮನೆಗೆ ಕಳುಹಿಸಲಾಗಿದೆ. ಯಶಸ್ವಿಯಾಗಿ ಕ್ವಾರಂಟೈನ್​ ಮುಗಿಸಿಕೊಂಡು ಬಂದವರನ್ನು ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.

tumkuru-shira-people-welcomed-corona-negative-patients-by-clapping
ತುಮಕೂರು ಕೊರೊನಾ ಪ್ರಕರಣಗಳು

By

Published : Apr 17, 2020, 11:49 AM IST

Updated : Apr 17, 2020, 12:25 PM IST

ತುಮಕೂರು: ಮಾರ್ಚ್​​​ 27ರಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಸಿರಾ ಪಟ್ಟಣದ ರೋಗಿ ನಂ. 60ರ ಸಂಬಂಧಿಕರಾದ 31 ಮಂದಿಯನ್ನು ಐಸೋಷೇಷನ್​​ನಿಂದ ಮನೆಗಳಿಗೆ ಕಳುಹಿಸಲಾಗಿದೆ. ಆಂಬ್ಯುಲೆನ್ಸ್ ನಲ್ಲಿ ಮನೆಗೆ ಬಂದು ಇಳಿಯುತ್ತಿದ್ದಂತೆ ಬಡಾವಣೆಯ ನಾಗರಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಕೊರೊನಾ ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದ 31 ಜನರ ಬಿಡುಗಡೆ

ಮೃತ ರೋಗಿ-60 ದೆಹಲಿಯ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅಲ್ಲದೆ ಸೋಂಕು ತಗುಲಿದ್ದ ರೋಗಿ- 60ರ ಮಗ 13 ವರ್ಷದ ಬಾಲಕ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ ಮತ್ತು ನಿರಂತರ ನಿಗಾದಲ್ಲಿದ್ದ ರೋಗಿಯ ಪತ್ನಿಗೂ ಕೋವಿಡ್ -19 ನೆಗೆಟಿವ್ ಬಂದಿದೆ.

ಹೀಗಾಗಿ ಬಾಲಕ ಮತ್ತು ಆತನ ತಾಯಿ ಸೇರಿದಂತೆ ಒಟ್ಟು 31 ಮಂದಿಯನ್ನು ಅವರವರ ಮನೆಗಳಿಗೆ ಕಳುಹಿಸಿಕೊಡಲಾಯಿತು. ಬಾಲಕನ ತಾಯಿ ಸೇರಿ ಸಿರಾ ಆಸ್ಪತ್ರೆಯ ಐಸೊಲೇಷನ್​ನಲ್ಲಿ 20 ಮಂದಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್​ ವಾರ್ಡ್​​ನಲ್ಲಿ 10 ಮಂದಿ ನಿಗಾದಲ್ಲಿದ್ದರು. ಅಲ್ಲದೆ ಮುಂಜಾಗೃತೆಗಾಗಿ 15 ದಿನಗಳ ಕಾಲ ಹೋಂ ಕ್ವಾರಂಟೈನ್​​ನಲ್ಲಿ ಇರುವಂತೆ ಸೂಚಿಸಲಾಗಿದೆ.

Last Updated : Apr 17, 2020, 12:25 PM IST

ABOUT THE AUTHOR

...view details