ತುಮಕೂರು :ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಸೋಂಕು ಹರಡುತ್ತಿದೆ. ಈ ನಡುವೆ ಸರ್ಕಾರಿ ಅಧಿಕಾರಿಗಳ ನೇತೃತ್ವದಲ್ಲಿಯೇ ಸರಳ ಸಾಮೂಹಿಕ ವಿವಾಹ ನಡೆದಿದೆ.
ಕೋವಿಡ್ ನಡುವೆ ದೇವರಾಯನದುರ್ಗದಲ್ಲಿ ಸರಳ ಸಾಮೂಹಿಕ ವಿವಾಹ - mass wedding
ನಾಲ್ಕು ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಕೋವಿಡ್ ಮಾರ್ಗಸೂಚಿ ಅನ್ವಯದಂತೆ ನಡೆಯಿತು..
![ಕೋವಿಡ್ ನಡುವೆ ದೇವರಾಯನದುರ್ಗದಲ್ಲಿ ಸರಳ ಸಾಮೂಹಿಕ ವಿವಾಹ ಸಾಮೂಹಿಕ ವಿವಾಹ](https://etvbharatimages.akamaized.net/etvbharat/prod-images/768-512-11590337-1055-11590337-1619772257561.jpg)
ಸಾಮೂಹಿಕ ವಿವಾಹ
ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿತಾಣ ದೇವರಾಯನದುರ್ಗ ಶ್ರೀ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ನಾಲ್ಕು ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಕೋವಿಡ್ ಮಾರ್ಗಸೂಚಿ ಅನ್ವಯದಂತೆ ನಡೆಯಿತು.
ಈ ವೇಳೆ ದೇವಾಲಯದ ಸಿಇಒ ಎಸ್.ಟಿ.ಸುನೀಲ್ ಕುಮಾರ್, ಊರ್ಡಿಗೆರೆ ಪಿಡಿಒ ನಾಗಭೂಷಣ್, ತಾಲೂಕು ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಎಂ.ಭೈರಾರೆಡ್ಡಿ, ಗ್ರಾಮ ಪಂಚಾಯತ್ ಸದಸ್ಯರು ಸೇರಿ ಅನೇಕರಿದ್ದರು.