ಕರ್ನಾಟಕ

karnataka

ETV Bharat / city

ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ರೆ ಶೂಟ್ ಮಾಡಿ: ನಾರಾಯಣಸ್ವಾಮಿ ವಿವಾದ - ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ನ್ಯೂಸ್​

ವೈದ್ಯರು, ಪೊಲೀಸರು ಕೊರೊನಾ ವಿರುದ್ಧ ಪ್ರತಿನಿತ್ಯ ಹೋರಾಟ ಮಾಡುತ್ತಿದ್ದರೂ ಅವರ ಮೇಲೆ ಹಲ್ಲೆ ನಡೆಯುತ್ತಿದೆ. ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತಂದು, ಜೈಲು ಶಿಕ್ಷೆ ಮತ್ತು ಆಸ್ತಿಮುಟ್ಟುಗೋಲು ಹಾಕಲು ಮುಂದಾಗಬೇಕು. ಸುಗ್ರೀವಾಜ್ಞೆ ತಂದ ಮೇಲೂ ಸಹ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ರೆ ಅವರನ್ನು ನೇರವಾಗಿ ಗುಂಡು ಹೊಡೆದು ಪಾಠ ಕಲಿಸಬೇಕು ಎಂದು ವೈ.ಎ. ನಾರಾಯಣಸ್ವಾಮಿ ಹೇಳಿದ್ದಾರೆ.

Y.A. Narayanaswamy
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವೈ.ಎ. ನಾರಾಯಣಸ್ವಾಮಿ

By

Published : Apr 25, 2020, 6:39 PM IST

ತುಮಕೂರು: ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ರೆ ನೇರವಾಗಿ ಗುಂಡು ಹೊಡೆದು ಪಾಠ ಕಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವೈ.ಎ. ನಾರಾಯಣಸ್ವಾಮಿ

ತುಮಕೂರಿನಲ್ಲಿ ಮಾತನಾಡಿದ ಅವರು, ವೈದ್ಯರು, ಪೊಲೀಸರು ಕೊರೊನಾ ವಿರುದ್ಧ ಪ್ರತಿನಿತ್ಯ ಹೋರಾಟ ಮಾಡುತ್ತಿದ್ದಾರೆ. ಆದ್ರೂ ಅವರ ಮೇಲೆಯೇ ಹಲ್ಲೆ ನಡೆಯುತ್ತಿದೆ. ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತಂದು, ಜೈಲು ಶಿಕ್ಷೆ ಮತ್ತು ಆಸ್ತಿಮುಟ್ಟುಗೋಲು ಹಾಕಲು ಮುಂದಾಗಬೇಕು. ಕಾನೂನು, ಸುಗ್ರೀವಾಜ್ಞೆ ತಂದ ಮೇಲೂ ಸಹ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ರೆ ಅವರನ್ನು ನೇರವಾಗಿ ಗುಂಡು ಹೊಡೆದು ಪಾಠ ಕಲಿಸಬೇಕು ಎಂದರು.

ಇನ್ನು ಶಾಸಕರು, ವಿಧಾನ ಪರಿಷತ್ ಸದಸ್ಯರು ಜನಸೇವಕರು ಎಂಬುದನ್ನು ಶಾಸಕ ಜಮೀರ್ ಅಹ್ಮದ್ ಖಾನ್ ನೆನಪಿನಲ್ಲಿಟ್ಟುಕೊಳ್ಳಬೇಕು. ಪಾದರಾಯನಪುರ ಘಟನೆ ಹಿಂದೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಕೈವಾಡವಿದೆ. ಹೀಗಾಗಿ ಅವರನ್ನು ಬಂಧಿಸಬೇಕು ಎಂದರು.

ಪಾದರಾಯಪುರ ಘಟನೆಗೂ ಮುನ್ನಾ ಸಾರಾಯಿ ಪಾಳ್ಯದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದ ವೇಳೆ ‘ಯಾರನ್ನು ಕೇಳಿ ಒಳಗೆ ಹೋದ್ರು’ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ರು. ಅಂದೇ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಜಮೀರ್ ಮೇಲೆ ಕ್ರಮ ಕೈಗೊಂಡಿದ್ದರೆ, ಪಾದರಾಯನಪುರ ಘಟನೆ ಮರುಕಳಿಸುತ್ತಿರಲಿಲ್ಲ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ 118 ಜನರನ್ನು ಬಂಧಿಸಲಾಗಿದೆ ಎಂದರು.

ABOUT THE AUTHOR

...view details