ತುಮಕೂರು:ಸಚಿವ ಮಾಧುಸ್ವಾಮಿ ಕೆಡಿಪಿ ಸಭೆಯಲ್ಲಿ ಅಸಭ್ಯ ಪದಗಳಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.
ಜಿ.ಪಂ ಇಂಜಿನಿಯರಿಂಗ್ ವಿಭಾಗದಲ್ಲಿ ಯಾವುದೇ ಕೆಲಸಗಳು ನಡೆದೇ ಇಲ್ಲ. ಕಳೆದ ತಿಂಗಳು 4ರಂದೇ ನಾನು ಸೂಚನೆ ನೀಡಿದ್ದೆ. ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಆಗಬೇಕಿರುವ ಕೆಲಸ ಇನ್ನೂ ಆಗಿಲ್ಲ. ಯಾವುದೇ ಒಂದು ಕೆಲಸ ಶುರುಮಾಡಿಲ್ಲ. ಅಲ್ಲದೆ ಜಿಲ್ಲಾ ಪಂಚಾಯತ್ ಇಂಜಿನಿಯರ್ಗಳು ಯಾರೂ ಕೆಲಸ ಮಾಡಿಲ್ಲ.