ಕರ್ನಾಟಕ

karnataka

ETV Bharat / city

ಮತ್ತೆ ನಾಲ್ವರಲ್ಲಿ ಸೋಂಕು... ತುಮಕೂರಿಗೂ ಮುಂಬೈನದ್ದೇ ನಂಟು

ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ ಆರು ಮಂದಿ ಪೈಕಿ ನಾಲ್ವರಿಗೆ ಸೋಂಕು ತಗುಲಿದೆ.

By

Published : May 20, 2020, 6:19 PM IST

Infection for four people who are coming from Mumbai
ಜಿಲ್ಲಾಧಿಕಾರಿ ರಾಕೇಶ್ ಕುಮಾರ್

ತುಮಕೂರು: ಮುಂಬೈನಿಂದ ತುಮಕೂರಿಗೆ ಬಂದಿದ್ದ ಆರು ಮಂದಿಯಲ್ಲಿ ನಾಲ್ವರಲ್ಲಿ ಕೊರೊನಾ ಸೋಂಕು ದೃಢವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15ಕ್ಕೇರಿದೆ.

ಇಬ್ಬರು ಮಹಿಳೆಯರು, ಮಕ್ಕಳಿಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದ ಕೂಡಲೇ ಅವರನ್ನು ಕ್ವಾರಂಟೈನ್​ ಮಾಡಲಾಗಿತ್ತು. ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ಜಿಲ್ಲಾಧಿಕಾರಿ ರಾಕೇಶ್ ಕುಮಾರ್

ನೇರವಾಗಿ ಕ್ವಾರಂಟೈನ್ ಮಾಡಿದ್ದರಿಂದ ಪ್ರಾಥಮಿಕ ಸಂಪರ್ಕಿತರು ಕಂಡು ಬಂದಿಲ್ಲ. ಒಂದು ವೇಳೆ ಅವರು ಬರುವ ಮಾರ್ಗ ಮಧ್ಯೆ ವಾಹನ ನಿಲುಗಡೆ ಗೊಳಿಸಿದ್ದರೆ, ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ 8 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details