ಕರ್ನಾಟಕ

karnataka

By

Published : Mar 11, 2022, 1:16 PM IST

ETV Bharat / city

ಉಕ್ರೇನ್​ನಿಂದ ಬಂದವರ ವಿದ್ಯಾಭ್ಯಾಸಕ್ಕೆ ನೆರವಾಗಬೇಕು : ಸೊಗಡು ಶಿವಣ್ಣ

ಉಕ್ರೇನ್​ನಿಂದ ತುಮಕೂರಿಗೆ ಹಿಂತಿರುಗಿರುವ ದೀಕ್ಷಾ ಎಂಬ ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿದ ಶಿವಣ್ಣ, ಮುಂದಿನ ದಿನಗಳಲ್ಲಿ ಪ್ರಭಾಕರ್ ಕೋರೆ ಅವರ ಸಲಹೆಯಂತೆ ಡೀಮ್ಡ್ ವಿವಿಗಳಲ್ಲಿ ಇಂತಹ ವಿದ್ಯಾರ್ಥಿಗಳಿಗೆ ಮೆಡಿಕಲ್ ವ್ಯಾಸಂಗ ಮುಂದುವರೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು..

Sogadu Shivanna visited Deeksha Home
ಉಕ್ರೇನ್​ನಿಂದ ತುಮಕೂರಿಗೆ ಹಿಂತಿರುಗಿರುವ ದೀಕ್ಷಾ ಮನೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ ನೀಡಿದರು.

ತುಮಕೂರು :ಉಕ್ರೇನ್​ನಿಂದ ವೈದ್ಯಕೀಯ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಂದಿರುವ ವಿದ್ಯಾರ್ಥಿಗಳಿಗೆ ಭಾರತದಲ್ಲಿ ತಮ್ಮ ಶಿಕ್ಷಣ ಮುಂದುವರೆಸಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.

ಉಕ್ರೇನ್​ನಿಂದ ತುಮಕೂರಿಗೆ ಹಿಂತಿರುಗಿರುವ ದೀಕ್ಷಾ ಎಂಬ ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿದ ಶಿವಣ್ಣ, ಮುಂದಿನ ದಿನಗಳಲ್ಲಿ ಪ್ರಭಾಕರ್ ಕೋರೆ ಅವರ ಸಲಹೆಯಂತೆ ಡೀಮ್ಡ್ ವಿವಿಗಳಲ್ಲಿ ಇಂತಹ ವಿದ್ಯಾರ್ಥಿಗಳಿಗೆ ಮೆಡಿಕಲ್ ವ್ಯಾಸಂಗ ಮುಂದುವರೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು.

ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿದ ಮಾಜಿ ಸಚಿವ ಸೊಗಡು ಶಿವಣ್ಣ

ಅಲ್ಲದೆ ಪ್ರಧಾನಿ ಮೋದಿ ಅವರು ಸಹ ಗಮನಹರಿಸಬೇಕು ಎಂದು ಮನವಿ ಮಾಡಿದರು. ಸೊಗಡು ಶಿವಣ್ಣ ಅವರೊಂದಿಗೆ ಮಾತನಾಡಿದ ದೀಕ್ಷಾ, ನಾನು ಜನರಲ್ ಕೆಟಗರಿಯಾಗಿರುವುದರಿಂದ ಪಿಯುಸಿಯಲ್ಲಿ ಉತ್ತಮ ಅಂಕ ಇದ್ದರೂ, ಮೆಡಿಕಲ್ ಕೋರ್ಸ್​ ಮಾಡಲು ಅವಕಾಶ ದೊರೆಯಲಿಲ್ಲ. ಹಾಗಾಗಿ, ಉಕ್ರೇನ್​ಗೆ ಹೋಗಬೇಕಾಗಿತ್ತು ಎಂದು ತಿಳಿಸಿದರು.

ABOUT THE AUTHOR

...view details