ಕರ್ನಾಟಕ

karnataka

ETV Bharat / city

ಪ್ರವಾದಿ ವಿರುದ್ದ ಹೇಳಿಕೆಗೆ ಭಾರತವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಸರ್ಕಾರವೇ ಕ್ಷಮೆ ಕೇಳಬೇಕು: ಜಿ ಪರಮೇಶ್ವರ್ - ತುಮಕೂರು ಜಿ ಪರಮೇಶ್ವರ್​ ಹೇಳಿಕೆ

ಬೇರೆ ದೇಶಗಳಿಂದ ಪ್ರತಿಕ್ರಿಯೆ ಬರುವ ಮೊದಲೇ ಬಿಜೆಪಿ ಅದಕ್ಕೆ ಸ್ಪಷ್ಟನೆ ಕೊಡಬೇಕಿತ್ತು. ಭಾರತವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಸರ್ಕಾರವೇ ಪ್ರವಾದಿ ವಿರುದ್ಧದ ಹೇಳಿಕೆಗೆ ದೇಶದ ಪರವಾಗಿ ಕ್ಷಮೆ ಕೇಳಬೇಕು ಎಂದು ಜಿ ಪರಮೇಶ್ವರ್​ ಒತ್ತಾಯಿಸಿದರು.

G Parameshwara
ಜಿ ಪರಮೇಶ್ವರ್

By

Published : Jun 8, 2022, 2:49 PM IST

ತುಮಕೂರು:ಬೇರೆ ದೇಶಗಳಿಂದ ಪ್ರತಿಕ್ರಿಯೆ ಬರುವ ಮೊದಲು ಪ್ರವಾದಿ ವಿರುದ್ಧದ ಹೇಳಿಕೆಗೆ ಬಿಜೆಪಿ ಅದಕ್ಕೆ ಸ್ಪಷ್ಟನೆ ಕೊಡಬೇಕಿತ್ತು. ಈಗ ಆ ಹೇಳಿಕೆಯಿಂದ ನಾವು ದೂರ ಇದ್ದೇವೆ ಎನ್ನುತ್ತಾರೆ. ಇವತ್ತು ಭಾರತದ ಗೌರವವನ್ನು ಹರಾಜು ಹಾಕುವ ಸ್ಥಿತಿಗೆ ಬಂದಂತಾಗಿದೆ. ಬಿಜೆಪಿ ಸರ್ಕಾರ ನಮ್ಮ ದೇಶವನ್ನು ಪ್ರತಿನಿಧಿಸುತ್ತಿದೆ. ಹಾಗಾಗಿ ಬಿಜೆಪಿಯೇ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

ಪ್ರವಾದಿ ವಿರುದ್ದ ಹೇಳಿಕೆಗೆ ಭಾರತವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಕ್ಷಮೆ ಕೇಳಬೇಕು

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರ ದೇಶಗಳಿಂದ ಬೆದರಿಕೆ ಬರುತ್ತಿದೆ. ಆಲ್ ಖೈದಾದವರು ನಾವು ಮತ್ತೆ ನಮ್ಮ ಚಟುವಟಿಕೆ ಶುರು ಮಾಡುತ್ತೇವೆ ಎಂದಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರವೇ ನೇರವಾದ ಕಾರಣ ಎಂದು ದೂರಿದರು.

ಬಿಜೆಪಿ ವಕ್ತಾರರಾಗಿದ್ದ ನೂಪೂರ್​ ಶರ್ಮಾ ಚಾನಲ್​ವೊಂದರ ಸಂದರ್ಶನದಲ್ಲಿ ಕಳೆದ ತಿಂಗಳು ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದರು. ಇದು ವಿವಾದದ ಕಿಚ್ಚು ಹೊತ್ತಿಸಿದ ಹಿನ್ನೆಲೆ ಬಿಜೆಪಿಯಿಂದ ಅವರನ್ನು ಇತ್ತೀಚೆಗೆ ಉಚ್ಚಾಟನೆ ಮಾಡಲಾಗಿದೆ.

ಇದನ್ನೂ ಓದಿ:2ನೇ ಅಭ್ಯರ್ಥಿ ಗೆಲುವಿನ ಚರ್ಚೆಗೆ ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ

ABOUT THE AUTHOR

...view details