ತುಮಕೂರು: ಮೊಮ್ಮಕ್ಕಳು ಚುನಾವಣೆಗೆ ನಿಂತಿದ್ದರೂ ದೇವೆಗೌಡರು ತುಮಕೂರಿನಿಂದ ಸ್ಪರ್ಧಿಸುತ್ತಿರುವ ಬಗ್ಗೆ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಪ್ರಶ್ನೆ ಮಾಡಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಮ್ಮಕ್ಕಳು ಚುನಾವಣೆಗೆ ನಿಂತಿರುವುದರಿಂದ ಈ ಬಾರಿ ದೇವೇಗೌಡರು ಸ್ಪರ್ಧಿಸುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ಅಧಿಕಾರದ ದುರಾಸೆಯಿಂದ ಅವರು ತುಮಕೂರಿನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್-ಜೆಡಿಎಸ್ ಸೇರಿ ಬಿಜೆಪಿ ವಿರುದ್ದ ಅಪಪ್ರಚಾರ ಮಾಡ್ತಿದ್ದಾರೆ. ನಾನು ಈ ಹಿಂದೆ ಹಾಸನದ ಉಸ್ತುವಾರಿ ಸಚಿವನಾಗಿದ್ದಾಗ ಹೇಮಾವತಿ ನೀರನ್ನ ತುಮಕೂರಿಗೆ ಬಿಡಬಾರದು ಎಂದು ರೇವಣ್ಣ ಹೇಳಿದ್ರು. ನನ್ನ ಮಾತನ್ನೂ ಮೀರಿ ಈ ಬಗ್ಗೆ ಅಧಿಕಾರಿಗಳಿಗೆ ತಾಕೀತು ಮಾಡ್ತಿದ್ರು. ಆದಿಚುಂಚನಗಿರಿಯಲ್ಲಿ ಉತ್ಸವ ನಡೆಯುವ ವೇಳೆ ನಾಗಮಂಗಲಕ್ಕೂ ನೀರು ಬಿಡದಂತೆ ಅವರು ಅಡ್ಡಿಪಡಿಸಿದ್ದರು ಎಂದು ಆರೋಪಿಸಿದರು.