ತುಮಕೂರು : ಜಿಲ್ಲೆಯ ಪಾವಗಡದಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ನಾಲ್ವರು ದಂಧೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೂಜು ಅಡ್ಡೆ ಮೇಲೆ ದಾಳಿ... ಇಬ್ಬರು ಪೊಲೀಸ್ ಪೇದೆಗಳು ಅಮಾನತ್ತು - undefined
ತುಮಕೂರು ಜಿಲ್ಲೆಯಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ಕಿಂಗ್ಪಿನ್ ಗಂಗಾಧರ ಸ್ವಾಮಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆದರಲ್ಲಿ ಇಬ್ಬರು ಪೊಲೀಸ್ ಪೇದೆಗಳು ಶಾಮೀಲಾದ ಆರೋಪ ಕೇಳಿಬಂದ ಹಿನ್ನೆಲೆ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ ಎಸ್ಪಿ ತಿಳಿಸಿದ್ದಾರೆ.
![ಜೂಜು ಅಡ್ಡೆ ಮೇಲೆ ದಾಳಿ... ಇಬ್ಬರು ಪೊಲೀಸ್ ಪೇದೆಗಳು ಅಮಾನತ್ತು](https://etvbharatimages.akamaized.net/etvbharat/prod-images/768-512-3169124-thumbnail-3x2-lek.jpg)
ತುಮಕೂರು ಎಸ್ ಪಿ ವಂಶಿಕೃಷ್ಣ
ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ ಪಿ ವಂಶಿಕೃಷ್ಣ, ಜೂಜು ಅಡ್ಡೆ ನಡೆಸುತ್ತಿದ್ದ ಕಿಂಗ್ಪಿನ್ ಗಂಗಾಧರ ಸ್ವಾಮಿ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಲಾಗುವುದು. ದಂಧೆ ನಡೆಯುತ್ತಿದ್ದ ವೇಳೆ ಇಬ್ಬರು ಪೇದೆಗಳು ಸ್ಥಳದಲ್ಲಿದ್ದ ವಿಡಿಯೋ ವೈರಲ್ ಆಗಿದೆ.
ಜೂಜು ಅಡ್ಡೆ ಮೇಲೆ ದಾಳಿ ಕುರಿತು ಎಸ್ ಪಿ ವಂಶಿಕೃಷ್ಣ ಪ್ರತಿಕ್ರಿಯೆ
ಈ ವಿಡಿಯೋ ಆಧರಿಸಿ ಶೈಲಾಪುರ ಬೀಟ್ ಪೊಲೀಸ್ ಮಂಜುನಾಥ್ ಹಾಗೂ ಎಸ್ ಬಿ ಕಾನ್ಸ್ಸ್ಟೇಬಲ್ ಉಮೇಶ್ರನ್ನು ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ. ಅಕ್ರಮ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.