ಕರ್ನಾಟಕ

karnataka

ETV Bharat / city

ಜೂಜು ಅಡ್ಡೆ ಮೇಲೆ ದಾಳಿ... ಇಬ್ಬರು ಪೊಲೀಸ್ ಪೇದೆಗಳು ಅಮಾನತ್ತು - undefined

ತುಮಕೂರು ಜಿಲ್ಲೆಯಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ಕಿಂಗ್​ಪಿನ್ ಗಂಗಾಧರ ಸ್ವಾಮಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆದರಲ್ಲಿ ಇಬ್ಬರು ಪೊಲೀಸ್​ ಪೇದೆಗಳು ಶಾಮೀಲಾದ ಆರೋಪ ಕೇಳಿಬಂದ ಹಿನ್ನೆಲೆ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ ಎಸ್​ಪಿ ತಿಳಿಸಿದ್ದಾರೆ.

ತುಮಕೂರು ಎಸ್​ ಪಿ ವಂಶಿಕೃಷ್ಣ

By

Published : May 2, 2019, 6:30 PM IST

ತುಮಕೂರು : ಜಿಲ್ಲೆಯ ಪಾವಗಡದಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ನಾಲ್ವರು ದಂಧೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಸ್​ ಪಿ ವಂಶಿಕೃಷ್ಣ, ಜೂಜು ಅಡ್ಡೆ ನಡೆಸುತ್ತಿದ್ದ ಕಿಂಗ್​ಪಿನ್ ಗಂಗಾಧರ ಸ್ವಾಮಿ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಲಾಗುವುದು. ದಂಧೆ ನಡೆಯುತ್ತಿದ್ದ ವೇಳೆ ಇಬ್ಬರು ಪೇದೆಗಳು ಸ್ಥಳದಲ್ಲಿದ್ದ ವಿಡಿಯೋ ವೈರಲ್​ ಆಗಿದೆ.

ಜೂಜು ಅಡ್ಡೆ ಮೇಲೆ ದಾಳಿ ಕುರಿತು ಎಸ್​ ಪಿ ವಂಶಿಕೃಷ್ಣ ಪ್ರತಿಕ್ರಿಯೆ

ಈ ವಿಡಿಯೋ ಆಧರಿಸಿ ಶೈಲಾಪುರ ಬೀಟ್ ಪೊಲೀಸ್ ಮಂಜುನಾಥ್ ಹಾಗೂ ಎಸ್ ಬಿ ಕಾನ್ಸ್​ಸ್ಟೇಬಲ್ ಉಮೇಶ್​ರನ್ನು ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ. ಅಕ್ರಮ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್​ಪಿ ತಿಳಿಸಿದರು.

For All Latest Updates

TAGGED:

ABOUT THE AUTHOR

...view details